Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಧರ್ಮವೆಂಬುದು ಮನುಷ್ಯರ ಹೃದಯದಲ್ಲಿದೆ:...

ಧರ್ಮವೆಂಬುದು ಮನುಷ್ಯರ ಹೃದಯದಲ್ಲಿದೆ: ಅಕ್ಬರ್ ಅಲಿ

ವಾರ್ತಾಭಾರತಿವಾರ್ತಾಭಾರತಿ10 Dec 2017 11:22 PM IST
share
ಧರ್ಮವೆಂಬುದು ಮನುಷ್ಯರ ಹೃದಯದಲ್ಲಿದೆ: ಅಕ್ಬರ್ ಅಲಿ

► ಧರ್ಮಗಳು ಕೋಮುವಾದ ಕಲಿಸುವುದಿಲ್ಲ

► ಧರ್ಮಗಳನ್ನು ಅರಿಯದವರಿಂದ ನೈಜ ಧರ್ಮಾನುಯಾಯಿಗಳಿಗೆ ಅಪಾಯ

ವೀರಾಜಪೇಟೆ, ಡಿ.10: ಧರ್ಮವೆಂಬುದು ಮಸೀದಿಗಳಲ್ಲಾಗಲೀ, ದೇವಾಲಯಗಳಲ್ಲಾಗಲೀ, ಇಗರ್ಜಿಗಳಲ್ಲಾಗಲೀ ಇಲ್ಲ. ಅದು ಮನುಷ್ಯನ ಹೃದಯದಲ್ಲಿದೆ. ಪ್ರತಿಯೊಬ್ಬರೂ ಪರಸ್ಪರ ನಂಬಿ ಪ್ರೀತಿಸಿದಲ್ಲಿ ಅದುವೇ ನೈಜ ಧರ್ಮವೆನಿಸುತ್ತದೆ. ಧರ್ಮವೆಂಬುದು ದೇವರಿಗಾಗಿಯಲ್ಲ. ಅದು ಮನುಷ್ಯರಿಗಾಗಿ ಎಂದು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಸಂಚಾಲಕ ಅಕ್ಬರ್ ಅಲಿ ಉಡುಪಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಅವರು ಜಮಾಅತೆ ಇಸ್ಲಾಮೀ ಹಿಂದ್ ವಿರಾಜಪೇಟೆ ಸ್ಥಾನೀಯ ಶಾಖೆಯ ಆಶ್ರಯದಲ್ಲಿ ಸ್ಥಳೀಯ ಗಣಪತಿ ಆರ್ಕೇಡ್‌ನಲ್ಲಿ ಏರ್ಪಡಿಸಲಾಗಿದ್ದ ಮಾನವ ಕುಲದ ವಿಮೋಚಕ ಪ್ರವಾದಿ ಮುಹಮ್ಮದ್(ಸ) ಎಂಬ ವಿಷಯದಡಿ ನಡೆದ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಸಿ ಮಾತನಾಡಿದರು. ಪ್ರವಾದಿಗಳು ಎಂದೂ ಆಧ್ಯಾತ್ಮದ ಹುಡುಕಾಟ ನಡೆಸಿದವರಲ್ಲ. ಬದಲಾಗಿ ಪ್ರವಾದಿತ್ವ ಎಂಬುದು ಸಮಾಜದ ಆಧ್ಯಾತ್ಮದ ಹುಡುಕಾಟಕ್ಕೆ ಇರುವ ದೈವಿಕ ಉತ್ತರವಾಗಿದೆ. ನಮ್ಮದು ಹೇಗೆ ವೈವಿಧ್ಯಮಯವಾದ ಸಮಾಜವೋ ಹಾಗೆಯೇ ವೈರುಧ್ಯತೆಗಳಿಂದ ಕೂಡಿದ ಸಮಾಜವೂ ಆಗಿದೆ. ಧರ್ಮಗಳು ಕೋಮುವಾದವನ್ನು ಕಲಿಸುವುದಿಲ್ಲ. ಧರ್ಮಗಳನ್ನು ಅರಿಯದವರಿಂದಾಗಿ ಇಂದು ನೈಜ ಧರ್ಮಾನುಯಾಯಿಗಳಿಗೆ ಅಪಾಯ ಉಂಟಾಗುತ್ತಿದೆ. ನಾವು ಶಿಕ್ಷಣವನ್ನು ಪಡೆಯುತ್ತಿದ್ದರೂ ಶಿಕ್ಷಿತರಾಗುತ್ತಿಲ್ಲ. ಮಾನವೀಯ ಸಂಬಂಧಗಳು ಮೊಬೈಲ್‌ಗಳಲ್ಲಿ ಮಾತ್ರ ಸೀಮಿತವಾಗುತ್ತಿವೆ. ಬಡ್ಡಿಮುಕ್ತವಾದ, ವ್ಯಭಿಚಾರ ಮುಕ್ತವಾದ, ಶರಾಬು ಮುಕ್ತವಾದ, ಕೋಮುವಾದ ಮುಕ್ತವಾದ ಸಮಾಜ ನಿರ್ಮಾಣಕ್ಕೆ ಪ್ರವಾದಿಗಳ ಶಿಕ್ಷಣ ದಾರಿ ದೀಪವಾಗಿದೆ ಎಂದರು.

ವಿಚಾರಗೋಷ್ಠಿಯನ್ನು ಉದ್ಘಾಟಿಸಿದ ವಿರಾಜಪೇಟೆ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ಮುಖ್ಯಸ್ಥರೂ ಧರ್ಮಗುರುಗಳೂ ಆದ ಫಾ. ಮದುಲೈ ಮುತ್ತು ಅವರು ಮಾತನಾಡಿ, ಮನುಷ್ಯ ಕುಲಕ್ಕೆ ಒಳಿತಿನ ಶಿಕ್ಷಣ ನೀಡುವ ಉದ್ದೇಶಕ್ಕಾಗಿ ದೇವರ ಪ್ರವಾದಿಗಳು ಆಗಮಿಸಿದರು. ಎಲ್ಲಾ ಪ್ರವಾದಿಗಳ ಶಿಕ್ಷಣವೂ ಅವರವರ ಕಾಲದಲ್ಲಿ ಎಷ್ಟು ಪ್ರಸಕ್ತವಾಗಿತ್ತೋ ಅಷ್ಟೇ ಪ್ರಸ್ತುತತೆ ಇಂದಿಗೂ ಇದೆ. ಮುಂದಿನ ಪೀಳಿಗೆಗೆ ವೈಷಮ್ಯದ ಮತ್ತು ಹಗೆತನದ ಸಂಸ್ಕೃತಿಯನ್ನು ರವಾನಿಸುವ ಸಮಾಜದಲ್ಲಿ ನಾವು ಇಂದು ಬದುಕುತ್ತಿದ್ದೇವೆ. ಬೆಳೆದು ಬರುವ ಪೀಳಿಗೆಗೆ ಉನ್ನತ ಚಿಂತನೆಗಳು ಹಾಗೂ ವಿಶಾಲ ಮನೋಧರ್ಮದ ಬೋಧನೆಗಳನ್ನು ನೀಡುವುದು ಹಿರಿಯರ ಕರ್ತವ್ಯವಾಗಿದೆ. ಕೆಡುಕುಗಳ ನಿವಾರಣೆಗೆ ಶಿಕ್ಷೆ ಪರಿಹಾರವಲ್ಲ. ಕೆಡುಕಿನ ಮೂಲಗಳನ್ನು ತೊಡೆದು ಹಾಕುವುದು ಶಾಶ್ವತ ಪರಿಹಾರವಾಗಿದೆ ಎಂದರು.

ಸ್ಥಾನೀಯ ಸಂಚಾಲಕ ಕೆ.ಪಿ.ಕೆ. ಮುಹಮ್ಮದ್ ವೇದಿಕೆಯಲ್ಲಿದ್ದರು. ಇ.ಎಂ. ಸಿರಾಜ್ ಖಿರಾಅತ್ ಪಠಿಸಿದರು. ಆರ್.ಕೆ. ತಾಹಾ ಅಹಮದ್ ಸ್ವಾಗತಿಸಿದರು. ಪಿ.ಕೆ. ಅಬ್ದುಲ್ ರೆಹೆಮಾನ್ ವಿಷಯ ಮಂಡಿಸಿದರು. ಕೆ.ಟಿ. ಬಷೀರ್ ಧನ್ಯವಾದವಿತ್ತರು. ಕೆ.ವಿ. ಸುನಿಲ್ ಶುಭ ಹಾರೈಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X