ಸಂಸದ ಪ್ರತಾಪ್ ಸಿಂಹ ವಿರುದ್ಧ ಖಂಡನಾಪತ್ರ : ಬ್ರಾಹ್ಮಣ ಸಭೆಯಲ್ಲಿ ತೀರ್ಮಾನ
ಮೈಸೂರು,ಡಿ.11: ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಬ್ರಾಹ್ಮಣ ಸಭಾ ಖಂಡನಾ ಪತ್ರವನ್ನು ಕರ್ನಾಟಕ ಬ್ರಹ್ಮಣ ಮಹಾ ಸಭಾ ಹಾಗು ದಿನೇಶ್ ಗುಂಡುರಾವ್ ಅವರಿಗೆ ರವಾನಿಸಲು ತೀರ್ಮಾನಿಸಿದೆ.
ಸಂಸದ ಪ್ರತಾಪ್ ಸಿಂಹ ಅವರು ಮಾಜಿ ಮುಖ್ಯಮಂತ್ರಿ ದಿ.ಗುಂಡೂರಾವ್ ಅವರನ್ನು ಗೂಂಡಾಗಳಿಗೆ ಹೋಲಿಸಿ ಮಾತನಾಡಿರುವುದನ್ನು ಜಿಲ್ಲಾ ಬ್ರಾಹ್ಮಣ ಮಹಾಸಭಾ ಖಂಡಿಸಿದ್ದು, ಬ್ರಾಹ್ಮಣರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರೆ ಸಹಿಸಲು ಸಾಧ್ಯವಿಲ್ಲವೆಂದು ಸಂಸದರಿಗೆ ಎಚ್ಚರಿಕೆ ನೀಡಿದೆ.
ಬಿ.ಆರ್.ನಟರಾಜ್ ಜೋಯಿಸ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಿ.ಗುಂಡೂರಾವ್ ಬಗ್ಗೆ ಸಂಸದ ಪ್ರತಾಪ್ ಸಿಂಹ ಅವರು ನೀಡಿರುವ ಕಟು ಹೇಳಿಕೆ ವಿರುದ್ಧ ಖಂಡನಾ ಪತ್ರ ರವಾನಿಸಲು ತೀರ್ಮಾನಿಸಿತು.
ಸಭೆಯಲ್ಲಿ ಪದಾಧಿಕಾರಿಗಳಾದ ಕೆ.ರಘುರಾಂ, ವಿದ್ಯಾರಣ್ಯ ಶೇಷಾದ್ರಿ, ಸುಶೀಲ, ವಿಜಯಲಕ್ಷ್ಮೀ ಇನ್ನೂ ಅನೇಕರು ಭಾಗಿಯಾಗಿದ್ದರು.
Next Story