ಬೆದ್ರೋಡಿ ಮಸೀದಿ ಮಾಜಿ ಅಧ್ಯಕ್ಷ ಉಮ್ಮರ್ ಹಾಜಿ ಮಕ್ಕಾದಲ್ಲಿ ನಿಧನ
ಉಪ್ಪಿನಂಗಡಿ, ಡಿ. 13: ಬೆದ್ರೋಡಿ ಬದ್ರಿಯಾ ಜುಮಾ ಮಸೀದಿ ಮಾಜಿ ಅಧ್ಯಕ್ಷ, ಬಜತ್ತೂರು ಗ್ರಾಮದ ನೀರಕಟ್ಟೆ ನಿವಾಸಿ ಉಮರ್ ಹಾಜಿ (71) ಪವಿತ್ರ ಮಕ್ಕಾದಲ್ಲಿ ಡಿ.12ರಂದು ರಾತ್ರಿ ಹೃದಯಾಘಾತದಿಂದ ನಿಧನರಾದರು.
ಉಮರ್ ಹಾಜಿ ಅವರು 15 ದಿನಗಳ ಹಿಂದೆ ಮಕ್ಕಾಕ್ಕೆ ಪವಿತ್ರ ಉಮ್ರಾ ಯಾತ್ರೆಗೆ ಹೋಗಿದ್ದು, ಯಾತ್ರೆಯ ಕರ್ಮಗಳನ್ನು ಮುಗಿಸಿ ಡಿ. 12ರಂದು ರಾತ್ರಿ ಹಿಂದಿರುಗಿ ಬರುವ ಸಲುವಾಗಿ ವಿಮಾನ ನಿಲ್ದಾಣಕ್ಕೆ ಬಸ್ನಲ್ಲಿ ಹೋಗುವ ಸಂದರ್ಭ ಹೃದಯಾಘಾತಗೊಂಡು ನಿಧನರಾದರು ಎಂದು ತಿಳಿದುಬಂದಿದೆ. ಅವರೊಂದಿಗೆ ಪತ್ನಿ ಜೊತೆಗಿದ್ದರು.
ಮೃತ ಉಮರ್ ಹಾಜಿ ಅವರ ದಫನ ಕಾರ್ಯ ಪವಿತ್ರ ಮಕ್ಕಾದಲ್ಲಿ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿದೆ.
ಉಮರ್ ಹಾಜಿ ಬೆದ್ರೋಡಿಯಲ್ಲಿ ವಾಸ ಇದ್ದವರು ಕೆಲ ವರ್ಷಗಳಿಂದ ನೀರಕಟ್ಟೆಯಲ್ಲಿ ಹೊಸ ಮನೆ ನಿರ್ಮಿಸಿ ವಾಸವಾಗಿದ್ದರು. ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದ ಉಮರ್ ಹಾಜಿ 'ಉಮ್ಮರಾಕ' ಎಂದೇ ಚಿರಪರಿಚಿತರಾಗಿದ್ದರು.
Next Story