ಭಾರತ ಸಧೃಡತೆಯಾಗಬೇಕಾದರೆ ಉತ್ತಮ ಪ್ರಜೆಗಳು ಅವಶ್ಯಕತೆ ಇದೆ: ಎಂ.ಎಂ.ಸುರೇಶ್ ಚೆಂಗಪ್ಪ

ಕೊಳ್ಳೇಗಾಲ.ಡಿ.15: ಮಕ್ಕಳನ್ನು ಉತ್ತಮ ಪ್ರಜೆಯಾಗಿಸಲು ಶಾಲೆಗಳಲ್ಲಿ ರೋಟರಿ ಸಂಸ್ಥೆಯು ಉತ್ತಮ ಮಾರ್ಗದರ್ಶನ ನೀಡುವ ಮೂಲಕ ಸೇವೆ ಸಲ್ಲಿಸುತ್ತಿದೆ ಎಂದು ರೋಟರಿ ಜಿಲ್ಲಾ ಗರ್ವನರ್ ಎಂ.ಎಂ.ಸುರೇಶ್ ಚೆಂಗಪ್ಪ ಅವರು ಹೇಳಿದರು.
ಪಟ್ಟಣದ ಗೀತಾ ಪ್ರೈಮರಿ ಶಾಲೆಯ ಆವರಣದಲ್ಲಿ ಬುಧವಾರ ಸಂಜೆ ನಡೆದ ಜಿಲ್ಲಾ ಗೌರ್ನರ್ರವರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತ ಸಧೃಡತೆಯಾಗಬೇಕಾದರೆ ಉತ್ತಮ ಪ್ರಜೆಗಳು ಅವಶ್ಯಕತೆ ಇದೆ. ಆದ್ದರಿಂದ ಮಕ್ಕಳಿಗೆ ಶಾಲೆಯ ಅವಧಿಯಲ್ಲಿ ಉತ್ತಮ ನಡತೆ ನಡವಳಿಕೆಗಳ ಕಲಿಕೆ ಅವಶ್ಯ. ಮಕ್ಕಳಿಗೆ ಸಣ್ಣ ವಯಸ್ಸಿನಲ್ಲೇ ಉತ್ತಮ ನಡವಳಿಕೆ ಕಲಿಸುವುದರೇ ಅವರಲ್ಲಿ ಉತ್ಸಾಹ ಹೇಚ್ಚಾಗುತ್ತದೆ ಎಂದರು.
ಸರ್ಕಾರಿ ಶಾಲೆಗೆ ಬೇಕಾಗಿರುವ ಸಾಮಾಗ್ರಿಗಳನ್ನು ಕಲ್ಪಿಸುವುದರಲ್ಲಿ ಎಡವಿರುವುದು ದುರಂತ ಎಂದರು. ದೇಶದ ರಾಜಕಾರಣಿಗಳು ಮಾಡುವಂತಹ ಕೆಲಸಗಳನ್ನು ರೋಟರಿ ಸಂಸ್ಥೆಯು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಸಾಕಷ್ಟು ಉತ್ತಮ ಕಎಲಸಗಳನ್ನು ಮಾಡುತ್ತಿದೆ ಎಂದರು.
ಪಾಕಿಸ್ತಾನ ಹಾಗೂ ಅಫಘಾಸ್ತಿನದಲ್ಲಿ ಹೊರತು ಪಡಿಸಿ ಪ್ರಪಂಚದ ಎಲ್ಲಾ ದೇಶಗಳಲ್ಲಿ ಪೊಲೀಯೋ ನಿರ್ಮೂಲನೆ ಮಾಡುವಲ್ಲಿ ಯಶಸ್ವಿಯಾಗಿರುವುದು ದೇಶದಲ್ಲೇ ರೋಟರಿ ಸಂಸ್ಥೆಯು ನಂ.1 ಸ್ಥಾನ ಪಡೆದು ಹೆಮ್ಮೆ ಗಳಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರುಣಾಲಯ ಬುದ್ದಿಮಾಂದ್ಯ ಶಾಲೆಯ ಅರ್ಡಿಸ್ ಅರ್ಲಾಡ್ ಹಾಗೂ ಸಂಗೀತ ಕ್ಷೇತ್ರದ ಹರಿಪ್ರೀಯಾ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಹಲವಾರು ಶಾಲೆಗಳಿಗೆ ಪುಸ್ತಕವನ್ನು ನೀಡಲಾಯಿತು. ಇಬ್ಬರು ವಿಕಲಚೇತನರಿಗೆ ಮೂರು ಚಕ್ರದ ಸೈಕಲ್ ವಿತರಣೆ ಮಾಡಿದರು.
ಬೆಳಿಗ್ಗೆ ಪಟ್ಟಣದ ಕರುಣಾಲಯ ಬುದ್ದಿಮಾಂದ್ಯ ಶಾಲೆಯ ಮಕ್ಕಳಿಗೆ ಉಚಿತ ಸಮವಸ್ತ್ರ ನೀಡಲಾಯಿತು. ತಾಲ್ಲೂಕಿನ ಉತ್ತಂಬಳ್ಳಿ ಹಾಗೂ ಹಿತ್ತಲದೊಡ್ಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಗಿಡ ನೆಟ್ಟು ಅಲ್ಲಿನ ಮಕ್ಕಳಿಗೆ ಆಟದ ಸಾಮಾಗ್ರಿಗಳು ಮತ್ತು ಪುಸ್ತಕಗಳನ್ನು ನೀಡಲಾಯಿತು.
ಈ ಸಂಧರ್ಭದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ಕುಮಾರಸ್ವಾಮಿ, ಉಪಾಧ್ಯಕ್ಷೆ ಪ್ರೇಮಲತಾ ಕೃಷ್ಣಸ್ವಾಮಿ, ರೋಟರಿ ಮಿಡ್ಟೌನ್ ಅಸಿಸ್ಟೆಂಟ್ ಗರ್ವನರ್ ಪ್ರವೀಣ್, ಅಧ್ಯಕ್ಷ ಪ್ರದೀಪ್ ಪೇರ್ನಾಡಿಸ್, ಮಾಜಿ ಶಾಸಕ ಜಿಎನ್ ನಂಜುಂಡಸ್ವಾಮಿ,ರೋಟರಿ ಪದಾಧಿಕಾರಿಗಳಾದ ಬಿ.ಕೆ ಪ್ರಕಾಶ್, ಜೋಸೇಪ್ ಅಲೆಕ್ಸಾಂಡರ್, ಪುಟ್ಟರಸಶೆಟ್ಟಿ, ಕಿರಣ್, ವೀರಭದ್ರಸ್ವಾಮಿ, ದಿನೇಂದ್ರ, ಬಸವರಾಜು, ಮಿಡ್ಟೌನ್ ಪದಾಧಿಕಾರಿಗಳು ಹರ್ಷ, ಮಹೇಶ್, ಹಿರಿಯ ವೈದ್ಯಾಧಿಕಾರಿ ಡಾ.ಶಿವರುದ್ರಸ್ವಾಮಿ ಹಾಗೂ ಇನ್ನೀತರರು ಹಾಜರಿದ್ದರು.







