ಕರ್ನಾಟಕ ಒನ್ ನಾಗರಿಕ ಸೇವೆ- ಸಚಿವ ಪ್ರಮೋದ್ ಮದ್ವರಾಜ್ರಿಂದ ಲೋಕಾರ್ಪಣೆ

ಉಡುಪಿ, ಡಿ.15: ಜನರಿಗೆ ಅನುಕೂಲವಾಗುವಂತೆ ಎಲ್ಲಾ ಸೇವೆಗಳು ಉಚಿತವಾಗಿ ಒಂದೇ ಸೂರಿನಡಿ ಸಿಗುವಂತಾಗಬೇಕು ಎಂದು ಮೀನುಗಾರಿಕೆ, ಯುವ ಸಬಲೀಕರಣ, ಕ್ರೀಡಾ ಸಚಿವ ಪ್ರಮೋದ್ ಮದ್ವರಾಜ್ ಹೇಳಿದ್ದಾರೆ.
ಶುಕ್ರವಾರ ಉಡುಪಿಯ ಕುಕ್ಕಿಕಟ್ಟೆಯಲ್ಲಿ ಕರ್ನಾಟಕ ಒನ್ ಸೆಂಟರ್ನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಸಾರ್ವಜನಿಕರು ಸರಕಾರದ ವಿವಿಧ ಸೇವೆಗಳನ್ನು ಪಡೆಯಲು, ಕಚೇರಿಯಿಂದ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿ ಅವರಿಗೆ ಎಲ್ಲಾ ಸೇವೆಗಳು ಒಂದೇ ಕಟ್ಟಡದಲ್ಲಿ ಉಚಿತವಾಗಿ ಸಿಗುವ ದೃಷ್ಣಿಯಿಂದ ಕರ್ನಾಟಕ ಒನ್ ಯೋಜನೆ ಜಾರಿಗೆ ತರಲಾಗಿದೆ ಎಂದರು.
ಪ್ರಸ್ತುತ ಜಿಲ್ಲೆಯಲ್ಲಿ ಒಂದು ಕಡೆ ಮಾತ್ರ ಈ ಕೇಂದ್ರವನ್ನು ತೆರೆಯಲಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಇನ್ನು ನಾಲ್ಕು ಕಡೆ ಈ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದರ ಪ್ರಮೋದ್ ಹೇಳಿದರು.
ಕರ್ನಾಟಕ ಒನ್ ಯೋಜನೆಯಲ್ಲಿ ಹಲವಾರು ಸೇವೆಗಳು ಲಭಿಸುತ್ತಿವೆ. ವಿದ್ಯುತ್ ಬಿಲ್ ಪಾವತಿ, ನಗರಸಭೆ ನೀರಿನ ಶುಲ್ಕ, ಮನೆ ತೆರಿಗೆ, ಅಕ್ರಮ ಸಕ್ರಮ 94ಸಿಸಿ ಅರ್ಜಿಗಳ ಸಲ್ಲಿಕೆ, ಪೊಲೀಸ್ ವೆರಿಫೀಕೇಶ್ನ್ ಬಿಲ್, ನರ್ಮ್ ಬಸ್ಪಾಸ್ಗಳು, ಪರಿಶಿಷ್ಟ ವಿದ್ಯಾರ್ಥಿಗಳಿಗೆ ನರ್ಮ್ಬಸ್ನಲ್ಲಿ ಉಚಿತ ಪ್ರಯಾಣ ಪಾಸ್, ಬಿಎಸ್ಎನ್ಎಲ್ ಬಿಲ್ ಪಾವತಿ, ಪಾಸ್ಪೋರ್ಟ್ ಅರ್ಜಿ, ಆರ್ಟಿಒ ಗೆ ಸಂಬಂಧಿದಂತೆ ಆರ್ಸಿ, ಡಿಎಲ್ಗೆ ಅರ್ಜಿ ಸಲ್ಲಿಕೆ, ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಲು, ಆಧಾರ್ ಕಾರ್ಡಿಗೆ ಸಂಬಂಧಿಸಿದ ಅರ್ಜಿ, ಆಧಾರ್ಕಾರ್ಡ್ ತಿದ್ದುಪಡಿ, ರೇಶನ್ ಕಾರ್ಡಿಗೆ ಸಂಬಂಧಿಸಿದಂತೆ ಹೊಸ ಎಪಿಎಲ್ ಕಾರ್ಡ್ ಅಥವಾ ಬಿಪಿಎಲ್ ಕಾರ್ಡ್ಗೆ ಅರ್ಜಿ, ಆಧಾರ್ ಲಿಂಕ್, ಸೀಮೆಎಣ್ಣೆ ಕೂಪನ್, ರೇಶನ್ ಅಂಗಡಿಯ ಕೂಪನ್, ಸರಕಾರಿ ಇಲಾಖೆಗಳಿಗೆ ಸಂಬಂಧಿಸಿದ ಅಪ್ಲಿಕೇಶ್ ಪಾರ್ಮ್, ಎಸೆಸೆಲ್ಸಿ ಅಂಕಪಟ್ಟಿಯ ಕಾಪಿ, ಮರುವೌಲ್ಯಮಾಪನಕ್ಕೆ ಇಲ್ಲಿ ಅರ್ಜಿ ಸಲ್ಲಿಸಬಹುದು ಹಾಗೂ ಎಸೆಸೆಲ್ಸಿ ಮಾರ್ಕ್ ಕಾರ್ಡ್ ಕೂಡ ಇಲ್ಲಿ ಲಭ್ಯವಾಗುತ್ತದೆ ಎಂದರು.
ಎಲ್ಇಡಿ ಬಲ್ಪ್, ಟ್ರಾಫಿಕ್ ಪೊಲೀಸ್ ದಂಡ, ಮಕ್ಕಳನ್ನು ಶಾಲೆಗೆ ಸೇರಿಸಲು ಆರ್ಟಿಸಿಟಿಗೆ ಅರ್ಜಿ, ಪಿಯುಸಿ ಮಾರ್ಕ್ಕಾರ್ಡ್, ಏರ್ಟೆಲ್, ವೊಡಾಪೋನ್, ರಿಲಾಯನ್ಸ್, ಎಂಟಿಎಸ್, ಐಡಿಯಾ ಮೊದಲಾದ ಖಾಸಗಿ ಕಂಪೆನಿಗಳ ಬಿಲ್ನ್ನು ಕೂಡ ಇಲ್ಲಿ ಪಾವತಿಸಬಹುದು.
ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಪಂ ಸಿಇಓ ಶಿವಾನಂದ ಕಾಪಶಿ, ನಗರಸಭೆ ಸದಸ್ಯ ಶಾಂತರಾಮ ಸಾಲ್ವಂಕರ್ ಮತ್ತಿತರರು ಉಪಸ್ಥಿತರಿದ್ದರು.







