ಕಾರ್ಕಳ, ಡಿ.16: ಕುಕ್ಕುಂದೂರು ಗ್ರಾಮದ ಪರಪು ಎಂಬಲ್ಲಿ ಡಿ.10ರಂದು ಸೈಕಲ್ನಿಂದ ಬಿದ್ದು ಗಾಯಗೊಂಡಿದ್ದ ಲಕ್ಷ್ಮಣ್ ಆಚಾರ್ಯ(55) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಡಿ.15ರಂದು ಸಂಜೆ 4 ಗಂಟೆಗೆ ಸುಮಾರಿಗೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.