Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ..

ಓ ಮೆಣಸೇ..

ವಾರ್ತಾಭಾರತಿವಾರ್ತಾಭಾರತಿ18 Dec 2017 12:08 AM IST
share
ಓ ಮೆಣಸೇ..

ಶಿಕ್ಷಣ ಕ್ಷೇತ್ರಗಳಲ್ಲಿ ಇಂದು ಸರ್ಟಿಫಿಕೆಟ್ ಸಿಗುತ್ತಿದೆಯೇ ಹೊರತು ಜ್ಞಾನ ದೊರೆಯುತ್ತಿಲ್ಲ - ಅನಂತ್ ಕುಮಾರ್ ಹೆಗಡೆ, ಕೇಂದ್ರ ಸಚಿವ

ಅದಕ್ಕೆ ಅಪ್ಪಟ ಉದಾಹರಣೆಯಾಗಿ ನೀವೇ ಇದ್ದೀರಲ್ಲ?

---------------------

ವಂದೇ ಮಾತರಂ ಹಾಡುವುದಕ್ಕೆ ಇರುವ ಸಮಸ್ಯೆಗಳೇನು ಎಂಬುದೇ ಅರ್ಥವಾಗುತ್ತಿಲ್ಲ - ವೆಂಕಯ್ಯನಾಯ್ಡು, ಉಪರಾಷ್ಟ್ರಪತಿ.
ದೇಶದ ಉಳಿದ ಸಮಸ್ಯೆಗಳನ್ನೆಲ್ಲ ಪರಿಹರಿಸಿ ಆಯಿತೇ?

---------------------

ಮದ್ಯಪಾನ ನಿಷೇಧದಿಂದ ಕೋಮು ಸೌಹಾರ್ದ ಸಾಧ್ಯ - ನಿತೀಶ್‌ಕುಮಾರ್, ಬಿಹಾರ ಮುಖ್ಯಮಂತ್ರಿ
ಕುಡುಕರಿಗೆ ಜಾತಿ ಭೇದವಿಲ್ಲ ಎನ್ನುವುದು ಈವರೆಗಿನ ನಂಬಿಕೆ.

---------------------

ಮಣ್ಣಿಗೆ ಗೌರವ ಕೊಡುವ ಸಂಸ್ಕೃತಿ ಉಳಿದಿರುವುದು ಭಾರತದಲ್ಲಿ ಮಾತ್ರ - ನಳಿನ್‌ಕುಮಾರ್ ಕಟೀಲು,ಸಂಸದ
ಮನುಷ್ಯರಿಗೆ ಗೌರವ ಕೊಡುವ ಸಂಸ್ಕೃತಿ ಇನ್ನೂ ಬಂದಿಲ್ಲ ಎನ್ನುವುದು ವಿಷಾದನೀಯ.

---------------------

ಇಂದಿರಾಗಾಂಧಿಯವರ ಹಾದಿಯಲ್ಲಿಯೇ ಸೋನಿಯಾ ಗಾಂಧಿಯವರು ನಡೆಯುತ್ತಿರುವುದು ಖುಷಿಯ ವಿಚಾರ - ಜನಾದರ್ನ ಪೂಜಾರಿ, ಮಾಜಿ ಕೇಂದ್ರ ಸಚಿವ
ನೀವು ಮಾತ್ರ ಇತ್ತೀಚೆಗೆ ಪ್ರಭಾಕರ ಭಟ್ಟರ ಹಾದಿಯಲ್ಲಿ ತೂರಾಡುತ್ತಿದ್ದೀರಲ್ಲ?

---------------------

ಹಿಂಬಾಗಿಲಿನ ಮೂಲಕ ರಾಜಕೀಯಕ್ಕೆ ಬಂದು ಅಧಿಕಾರ ಅನುಭವಿಸುವ ಜಾಯಮಾನ ನಮ್ಮದಲ್ಲ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ಅದರ ಎಲ್ಲಾ ಹಕ್ಕನ್ನು ಮಗನಿಗೆ ನೀಡಿದಂತಿದೆ.

---------------------

ಬಿಜೆಪಿಯಲ್ಲಿ ಮೋದಿ-ಯಡಿಯೂರಪ್ಪ, ಕಾಂಗ್ರೆಸ್‌ನಲ್ಲಿ ರಾಹುಲ್-ಸಿದ್ದರಾಮಯ್ಯ ಜೋಡೆತ್ತುಗಳಿದ್ದಂತೆ - ಆರ್.ಅಶೋಕ್, ಬಿಜೆಪಿ ಮುಖಂಡ
ನೀವು ಜೋಡೆತ್ತು ಹಾಕಿರುವ ಸೆಗಣಿ ಎನ್ನುವುದು ಜನರ ಅಂಬೋಣ.

---------------------

ಬದುಕು ಬಹಳ ಸುಲಭ - ಬಾಬಾ ರಾಮ್‌ದೇವ್, ಯೋಗಗುರು
ಜನರನ್ನು ಮೋಸಗೊಳಿಸುವ ತಂತ್ರ ಗೊತ್ತಿದ್ದರೆ.

---------------------

ಜನ ಪ್ರತಿನಿಧಿಗಳ ನಾಲಿಗೆ ಅವರ ಹಿಡಿತದಲ್ಲಿರಬೇಕು - ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ
ಅವರ ಎಂದರೆ, ಮೋದಿಯ ಹಿಡಿತದಲ್ಲೇ?

---------------------

ದಲಿತರ ವಿರುದ್ಧ ದೌರ್ಜನ್ಯ ನಿಲ್ಲದಿದ್ದರೆ ಬೌದ್ಧ ಧರ್ಮ ಸೇರುತ್ತೇನೆ - ಮಾಯಾವತಿ, ಬಿಎಸ್ಪಿ ನಾಯಕಿ
ಈಗ ನೀವಿರುವ ಧರ್ಮ ಯಾವುದು ಎನ್ನುವುದನ್ನು ವಿವರಿಸುತ್ತೀರಾ?

---------------------

ಮೋದಿ ‘ಬಚ್ಚಾ’ನಾ, ಸಿದ್ದರಾಮಯ್ಯ ‘ಬಚ್ಚಾ’ನಾ ಶೀಘ್ರದಲ್ಲಿ ಗೊತ್ತಾಗಲಿದೆ - ವೀರಪ್ಪ ಮೊಯ್ಲಿ, ಸಂಸದ
ಸಿದ್ದರಾಮಯ್ಯ ಅವರನ್ನು ಬಚ್ಚಾನಾಗಿ ಮಾಡುವ ನಿಮ್ಮ ಯೋಜನೆ ಪೂರ್ತಿಯಾದಂತಿದೆ.

---------------------

ರಾಜಕೀಯ ಎಂಬ ನಾಟಕದಲ್ಲಿ ಅಭಿನಯ ಬಾರದ ನಾನು ದುರಂತ ನಾಯಕನಾದೆ - ಗಾಲಿ ಜನಾರ್ದನ ರೆಡ್ಡಿ, ಬಿಜೆಪಿ ಮುಖಂಡ
ಗಾಳಿ ಹೋದ ಗಾಲಿಯಂತೆ.

---------------------

ಕಾಂಗ್ರೆಸ್ ಮನೆಗೆ ಹೋದ ದಿನ ಕರ್ನಾಟಕದಲ್ಲಿ ಅಚ್ಛೇದಿನ್ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಆದರೆ ಅದಕ್ಕೆ ಬಿಜೆಪಿ ಅವಕಾಶ ನೀಡಬೇಕಲ್ಲ?

---------------------

ಇನ್ನು ಮುಂದೆ ಕೇಜ್ರಿವಾಲ್‌ನಂತಹವರು ನನ್ನ ಆಂದೋಲನದಿಂದ ಹೊರ ಹೊಮ್ಮುವುದಿಲ್ಲ - ಅಣ್ಣಾ ಹಝಾರೆ, ಸಾಮಾಜಿಕ ಹೋರಾಟಗಾರ

ಒಂದು ಹೆರಿಗೆಯೇ ಸಾಕಾಯಿತೇ?

---------------------

ಕಾಂಗ್ರೆಸ್ ನಾಯಕರು ಪ್ರತಿಷ್ಠೆ ಬಿಟ್ಟು ಕೆಲಸ ಮಾಡಿದರೆ ಪಕ್ಷಕ್ಕೆ ಒಳ್ಳೆಯದು - ಜಾಫರ್‌ ಶರೀಫ್, ಕಾಂಗ್ರೆಸ್ ನಾಯಕ
ಜೊತೆಗೆ ತಮ್ಮಂಥವರು ಸ್ವಜನಪಕ್ಷಪಾತ ಬಿಡಬೇಕು.

---------------------

ಜೀವನ ಪೂರ್ತಿ ನಾವು ವಿದ್ಯಾರ್ಥಿಗಳಾಗಿಯೇ ಇರಬೇಕು - ನರೇಂದ್ರ ಮೋದಿ, ಪ್ರಧಾನಿ
ಆದರೆ ಅಂಕಪಟ್ಟಿ ಮಾತ್ರ ಕೇಳಬಾರದು.

---------------------
 
ಬಿಜೆಪಿಗೆ ನಾನು ನನಗೆ ಬಿಜೆಪಿ ಅನಿವಾರ್ಯವಾಗಿದೆ - ಬಸನಗೌಡ ಪಾಟೀಲ ಯತ್ನಾಳ್, ಕೇಂದ್ರದ ಮಾಜಿ ಸಚಿವ

ಆದರೆ ಮತದಾರರಿಗೆ ಅನಿವಾರ್ಯವಾಗಬೇಕೆಂದೇನೂ ಇಲ್ಲವಲ್ಲ.

---------------------

ನಮ್ಮದು ರಾಷ್ಟ್ರೀಯಪಕ್ಷ - ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ
ಬಹುಶಃ ಅದಕ್ಕೇ ಇರಬೇಕು, ಎಲ್ಲ ರಾಜ್ಯಗಳಲ್ಲೂ ಸೋಲು ಎದುರಾಗುತ್ತಿರುವುದು.
---------------------

ಕಾಂಗ್ರೆಸ್ ಈಗ ಮೂರು ಬಾಗಿಲು ಇರುವ ಮನೆ - ಕೆ.ಎಸ್.ಈಶ್ವರಪ್ಪ, ಬಿಜೆಪಿ ಮುಖಂಡ
ಮೂರು ನಾಲಗೆ ಇರುವ ಮನುಷ್ಯನಿಗಿಂತ ವಾಸಿ.

---------------------

ಯಡಿಯೂರಪ್ಪ ಖಾಲಿ ಬುಟ್ಟಿ ತೋರಿಸಿ ಹಾವು ಬಿಡ್ತೇನೆ ಅಂತ ಹೆದರಿಸುತ್ತಿದ್ದಾರೆ - ಸಿದ್ದರಾಮಯ್ಯ, ಮುಖ್ಯಮಂತ್ರಿ
ಹಾವು ಈಶ್ವರಪ್ಪರ ಹೆಸರಲ್ಲಿ ಬಿಜೆಪಿ ಮನೆಯೊಳಗೇ ಓಡಾಡುತ್ತಿದೆ.

---------------------

ಅಮಿತ್ ಶಾ ಸೂಚನೆಯಂತೆ ಬಿಜೆಪಿ ನಾಯಕರು ರಾಜ್ಯದಲ್ಲಿ ಗಲಭೆ ನಡೆಸುತ್ತಿದ್ದಾರೆ. - ಪ್ರಮೋದ್ ಮಧ್ವರಾಜ್, ಸಚಿವ
ಅದನ್ನು ನಿಯಂತ್ರಿಸದೇ ಇರಲು ನಿಮಗೆ ನಿರ್ದೇಶಿಸಿದ ಬಿಜೆಪಿ ನಾಯಕರು ಯಾರು?

---------------------

ಕಲ್ಲಡ್ಕ ಪ್ರಭಾಕರ ಭಟ್ ಧೈರ್ಯವಿದ್ದರೆ ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸಲಿ - ರಮಾನಾಥ ರೈ, ಸಚಿವ
ಸ್ಪರ್ಧಿಸದಿದ್ದರೂ ಕಲ್ಲಡ್ಕವನ್ನು ಆಳುತ್ತಿರುವುದು ಭಟ್ಟರೇ ಆಗಿರುವಾಗ ಯಾರು ಗೆದ್ದರೇನು?

---------------------

ಬಿಜೆಪಿ ನಾಯಕರಲ್ಲಿ ಈಗ ಬೆಂಕಿ ಹಚ್ಚುವ ಸ್ಪರ್ಧೆ ನಡೆದಿದೆ - ಯು.ಟಿ. ಖಾದರ್, ಸಚಿವ

ಮತ್ತು ಕಾಂಗ್ರೆಸ್‌ನೊಳಗೆ ಪಿಟೀಲು ನುಡಿಸುವ ಸ್ಪರ್ಧೆ ನಡೆಯುತ್ತಿದೆ.
 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X