ಅಕ್ರಮ ಕಸಾಯಿಖಾನೆ: ಓರ್ವನ ಸೆರೆ
ಶಿರ್ವ, ಡಿ.20: ಕಳತ್ತೂರು ಹಾಡಿಯಲ್ಲಿ ಡಿ.20ರಂದು ಬೆಳಗ್ಗೆ ಅಕ್ರಮವಾಗಿ ದನವನ್ನು ಕಡಿದು ಮಾಂಸ ಮಾಡುತ್ತಿದ್ದ ಓರ್ವನನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಚಂದ್ರನಗರದ ಇಬ್ರಾಹಿಂ(42) ಎಂದು ಗುರುತಿಸಲಾಗಿದೆ. ಈ ವೇಳೆ ಉಮರಬ್ಬ ಎಂಬವರು ಪರಾರಿಯಾಗಿದ್ದಾರೆ. ಬಳಿಕ ಪೊಲೀಸರು ದನದ ಮಾಂಸ ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





