Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಉ.ಕೊರಿಯಾದ ಮತ್ತೊಬ್ಬ ಸೈನಿಕ ದ.ಕೊರಿಯಾಗೆ...

ಉ.ಕೊರಿಯಾದ ಮತ್ತೊಬ್ಬ ಸೈನಿಕ ದ.ಕೊರಿಯಾಗೆ ಪಲಾಯನ

ಗಡಿಯಲ್ಲಿ ಗುಂಡುಹಾರಾಟ

ವಾರ್ತಾಭಾರತಿವಾರ್ತಾಭಾರತಿ21 Dec 2017 10:30 PM IST
share
ಉ.ಕೊರಿಯಾದ ಮತ್ತೊಬ್ಬ ಸೈನಿಕ ದ.ಕೊರಿಯಾಗೆ ಪಲಾಯನ

ಸಿಯೋಲ್ (ದಕ್ಷಿಣ ಕೊರಿಯ), ಡಿ. 21: ಉತ್ತರ ಕೊರಿಯದ ಇನ್ನೊಬ್ಬ ಸೈನಿಕ ಗುರುವಾರ ದಕ್ಷಿಣ ಕೊರಿಯಕ್ಕೆ ಪಲಾಯನಗೈದಿದ್ದಾನೆ. ಉಭಯ ದೇಶಗಳ ನಡುವಿನ ಗಡಿಯಲ್ಲಿರುವ ಸೇನಾರಹಿತ ವಲಯದಲ್ಲಿ ‘ಕೆಳ ದರ್ಜೆ’ಯ ಸೈನಿಕನು ಪಲಾಯನಗೈದ ಬಳಿಕ ಗಡಿಯ ಎರಡೂ ಬದಿಗಳಲ್ಲಿ ಗುಂಡು ಹಾರಾಟ ನಡೆದಿದೆ.

ಇದು ಎರಡು ತಿಂಗಳಲ್ಲಿ ನಡೆದ ಇಂತಹ ಎರಡನೆ ಘಟನೆಯಾಗಿದೆ.

ಗಡಿಯಲ್ಲಿರುವ ಭಾರೀ ಭದ್ರತೆಯ ಯೋಂಚಿಯನ್ ಸಮೀಪ ದಟ್ಟ ಮಂಜಿನ ಮರೆಯಲ್ಲಿ ಸೈನಿಕನು ಗಡಿ ದಾಟಿ ಬಂದಾಗ ನಿಗಾ ಸಾಧನಗಳ ಮೂಲಕ ಈ ಸ್ಥಳವನ್ನು ಗಮನಿಸುತ್ತಿದ್ದ ದಕ್ಷಿಣ ಕೊರಿಯ ಸೈನಿಕರು ಅಲ್ಲಿಗೆ ಧಾವಿಸಿದರು ಎಂದು ದಕ್ಷಿಣ ಕೊರಿಯ ರಕ್ಷಣಾ ಸಚಿವಾಲಯದ ವಕ್ತಾರರೊಬ್ಬರು ತಿಳಿಸಿದರು.

ಆದರೆ, ಆಗ ಗುಂಡಿನ ಹಾರಾಟ ನಡೆಯಲಿಲ್ಲ ಎಂದು ಹೇಳಿದ ಅವರು, ತಮ್ಮ ಸೈನಿಕನನ್ನು ಹುಡುಕಿಕೊಂಡು ಗಡಿಯತ್ತ ಬಂದ ಉತ್ತರ ಕೊರಿಯದ ಗಡಿ ಸೈನಿಕರನ್ನು ಎಚ್ಚರಿಸಲು ಕೆ-3 ಮಶಿನ್ ಗನ್‌ನಿಂದ 20 ಸುತ್ತು ಗುಂಡು ಹಾರಿಸಿದೆವು ಎಂದರು.

ಉತ್ತರ ಕೊರಿಯದ ಕಡೆಯಿಂದ ಎರಡು ಬಾರಿ ಗುಂಡು ಹಾರಾಟದ ಸದ್ದು ಕೇಳಿತು ಎಂದು ವಕ್ತಾರರು ತಿಳಿಸಿದರು.

 ಒಂದು ತಿಂಗಳ ಹಿಂದೆ ಉತ್ತರ ಕೊರಿಯದ ಸೈನಿಕನೊಬ್ಬ ಪನ್‌ಮುಂಜಮ್ ಪ್ರದೇಶದಲ್ಲಿ ತನ್ನದೇ ದೇಶದ ಸೈನಿಕರು ಹಾರಿಸಿದ ಗುಂಡಿನ ಮಳೆಯ ನಡುವೆಯೇ ಓಡುತ್ತಾ ದಕ್ಷಿಣ ಕೊರಿಯದ ಕಡೆಗೆ ಪಲಾಯನಗೈದಿದ್ದನು.

 ಗಡಿವರೆಗೆ ತನ್ನ ವಾಹನದಲ್ಲಿ ವೇಗವಾಗಿ ಬಂದ ಆತ ಬಳಿಕ ಓಡುತ್ತಾ ದಕ್ಷಿಣ ಕೊರಿಯದ ಭೂಭಾಗವನ್ನು ಪ್ರವೇಶಿಸಿದನು. ಈ ಅತ್ಯಂತ ಸಾಹಸಿಕ ಕೃತ್ಯದಲ್ಲಿ 4 ಗುಂಡುಗಳು ಆತನ ದೇಹ ಪ್ರವೇಶಿಸಿದ್ದವು. ಈಗ ಆತ ದಕ್ಷಿಣ ಕೊರಿಯದ ಆಸ್ಪತ್ರೆಯೊಂದರಲ್ಲಿ ಚೇತರಿಸುತ್ತಿದ್ದಾನೆ.

ಇದರೊಂದಿಗೆ ಈ ವರ್ಷ ಉತ್ತರ ಕೊರಿಯದಿಂದ ದಕ್ಷಿಣ ಕೊರಿಯಕ್ಕೆ ಪರಾರಿಯಾದ ಜನರ ಸಂಖ್ಯೆ 15ಕ್ಕೆ ಏರಿದೆ. ಇದು 2016ರಲ್ಲಿ ನಡೆದ ಪಲಾಯನ ಘಟನೆಗಳಿಗಿಂತ ಮೂರು ಪಟ್ಟು ಹೆಚ್ಚಾಗಿದೆ.

ಇಬ್ಬರು ನಾಗರಿಕರೂ ದ. ಕೊರಿಯಕ್ಕೆ

ಉತ್ತರ ಕೊರಿಯದ ಇಬ್ಬರು ನಾಗರಿಕರೂ ಈ ವಾರ ದಕ್ಷಿಣ ಕೊರಿಯಕ್ಕೆ ಪಲಾಯನಗೈದಿದ್ದಾರೆ. ಅವರನ್ನು ಆಗ್ನೇಯ ಕರಾವಳಿಯಲ್ಲಿ ಪ್ರವಾಹದೊಂದಿಗೆ ಹೋಗುತ್ತಿದ್ದ ಇಂಜಿನ್‌ರಹಿತ ದೋಣಿಯೊಂದರಿಂದ ರಕ್ಷಿಸಲಾಗಿದೆ ಎಂದು ಯೊನ್‌ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅವರನ್ನು ದಕ್ಷಿಣ ಕೊರಿಯದ ನಿಗಾ ವಿಮಾನವೊಂದು ಗಮನಿಸಿತು ಹಾಗೂ ಸಮೀಪದಲ್ಲಿದ್ದ ನೌಕಾ ಪಡೆ ಹಡಗಿನ ಮೂಲಕ ರಕ್ಷಿಸಲಾಯಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X