Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸೃಷ್ಟಿ ಮಾಡಿದವರನ್ನೇ ಸುಡಲು ಹೊರಟಿರುವ...

ಸೃಷ್ಟಿ ಮಾಡಿದವರನ್ನೇ ಸುಡಲು ಹೊರಟಿರುವ ಭಸ್ಮಾಸುರ!

ವಾರ್ತಾಭಾರತಿವಾರ್ತಾಭಾರತಿ21 Dec 2017 11:39 PM IST
share

ಮಾನ್ಯರೇ,

ಸಂಘ ಪರಿವಾರದವರೇ ಮಾತು ಮಾತಿಗೆ ‘‘ಕಾಂಗ್ರೆಸ್‌ನವರು ಕಳೆದ 60 ವರ್ಷಗಳಲ್ಲಿ ಏನು ಮಾಡಿದ್ದಾರೆ’’ ಎಂದು ಕೇಳುತ್ತಿದ್ದಾರೆ. ನೀವು ಇನ್ನು ಈ ಮಾತು ಹೇಳಬಾರದು. ಈಗ ನಿಮ್ಮ ಪಕ್ಷದ ಸತತ ಗೆಲುವಿಗೆ ನೆರವಾಗುತ್ತಿರುವ ಮತಯಂತ್ರವನ್ನು ಜಾರಿಗೆ ತಂದವರು ಕಾಂಗ್ರೆಸ್‌ನವರೇ ತಾನೇ. ಈ ಮತಯಂತ್ರ ಇರದಿದ್ದರೆ ನೀವು ಎಂದಾದರೂ ಹೀಗೆ ಸತತವಾಗಿ ಗೆಲ್ಲುವುದು ಸಾಧ್ಯವಿತ್ತೇ? ಇವಿಎಂ ಎಂಬ ಮತಯಂತ್ರಾಸುರನನ್ನು ಹುಟ್ಟುಹಾಕಿ ಬಿಜೆಪಿಯಂತಹ ಶುಕ್ರಾಚಾರ್ಯರ ಕೈಯಲ್ಲಿ ಇಟ್ಟಿದ್ದು ಇದೇ ಕಾಂಗ್ರೆಸ್ ಅಲ್ಲವೇ! ಕಾಂಗ್ರೆಸ್ ಸರಕಾರ ಕಳೆದ 60 ವರ್ಷಗಳಲ್ಲಿ ಮಾಡಿದ ನೈಜ ಅಭಿವೃದ್ಧಿಯ ವಿವರವನ್ನು ಈಗಾಗಲೇ ಸ್ವತಃ ಬಿಜೆಪಿ ಸರಕಾರದ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್‌ರವರೇ ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಆದರೆ ಕಾಂಗ್ರೆಸ್ ಆಡಳಿತದಲ್ಲಿ ಇಲೆಕ್ಟ್ರಾನಿಕ್‌ಕ್ಷೇತ್ರದ ಅಭಿವೃದ್ಧಿಗೆ ಎಷ್ಟೊಂದು ಪ್ರಾಮುಖ್ಯತೆ ಕೊಟ್ಟರೆಂದರೆ ಅವರು ಚುನಾವಣೆಯಲ್ಲಿ ಇವಿಎಂ ಅರ್ಥಾತ್ ಇಲೆಕ್ಟ್ರಾನಿಕ್ ಮತಯಂತ್ರವನ್ನೂ ಉತ್ಸಾಹದಿಂದ ಜಾರಿಗೆ ತಂದು ಬಿಟ್ಟರು. ಆದರೆ ಅದು ಸಿಗಬಾರದವರ ಕೈಯಲ್ಲಿ ಸಿಕ್ಕಿ ದೇಶದ ಪ್ರಜಾಪ್ರಭುತ್ವವೇ ನಾಶವಾಗುವ ಹಂತಕ್ಕೆ ಬರುತ್ತದೆ ಎಂದು ಆಗಿನ ಕಾಂಗ್ರೆಸ್ ಸರಕಾರ ಊಹಿಸಿರಲಿಕ್ಕಿಲ್ಲ. ಮತಯಂತ್ರಾಸುರನ ಸೃಷ್ಟಿಯನ್ನು ಕಾಂಗ್ರೆಸ್‌ನವರು ಒಳ್ಳೆಯ ಉದ್ದೇಶದಿಂದಲೇ ಮಾಡಿದ್ದರು ನಿಜ, ಆದರೆ ಈಗ ಆ ಭಸ್ಮಾಸುರ ತನ್ನನ್ನು ಸೃಷ್ಟಿ ಮಾಡಿದವರನ್ನೇ ಸುಡಲು ಹೊರಟಿದ್ದಾನೆ. ಗುಜರಾತಿನ ಸೂರತ್ ನಗರದಲ್ಲಿ ಬಿಜೆಪಿಯ ವಿರುದ್ಧ ಜನರಿಗೆ ಎಷ್ಟು ಸಿಟ್ಟಿತ್ತೆಂದರೆ ಅಲ್ಲಿ ಪ್ರಚಾರಕ್ಕೆ ಬಂದ ಬಿಜೆಪಿ ಕಾರ್ಯಕರ್ತರನ್ನು ಅಲ್ಲಿಂದ ಓಡಿಸಿದ್ದರು. ಆದರೆ ಈಗ ಫಲಿತಾಂಶ ಬಂದಾಗ ಸೂರತ್ ನಗರದಲ್ಲಿಯ ಒಟ್ಟು 16ರಲ್ಲಿ ಬಿಜೆಪಿಗೆ 15 ಸ್ಥಾನಗಳು ಸಿಕ್ಕಿದೆ.

ಇದು ಮತಯಂತ್ರ ದುರ್ಬಳಕೆಯಿಂದ ಮಾತ್ರ ಸಾಧ್ಯವಲ್ಲದೇ ಬೇರೆ ರೀತಿಯಿಂದ ಸಾಧ್ಯವೇ ಇಲ್ಲ. ವಿವಿಪ್ಯಾಟ್ ಮತಚೀಟಿಯ ಎಣಿಕೆಯಿಂದ ಇದರ ಗುಟ್ಟು ಬಹಿರಂಗವಾಗಬಹುದು. ಆದರೆ ಮತಯಂತ್ರದ ಚಿಪ್ ತಯಾರಿಸುವ ಅಮೆರಿಕದ ಜಿಯೋ ಗ್ಲೋಬಲ್ ಕಂಪೆನಿಗೆ ಗುಜರಾತ್ ಪೆಟ್ರೋಲಿಯಂ ಕಂಪೆನಿ ಮೂಲಕ ಇಪ್ಪತ್ತು ಸಾವಿರ ಕೋಟಿ ರೂಪಾಯಿಯನ್ನು ಸ್ವತಃ ಧಾರೆ ಎರೆದ ಅಚಲ್ ಕುಮಾರ್ ಜ್ಯೋತಿ ಎಂಬ ಮೋದಿಯವರ ಬಲಗೈ ಬಂಟನೇ ಮುಖ್ಯ ಚುನಾವಣಾ ಆಯುಕ್ತನಾಗಿ ವಿವಿಪ್ಯಾಟ್‌ಗೆ ಘಟಸರ್ಪದಂತೆ ಕುಂಡಲಿ ಹಾಕಿ ಕುಳಿತಿರುವಾಗ ಮತ್ತು ಸುಪ್ರೀಂ ಕೋರ್ಟಿನಲ್ಲಿ ಸಂಘಪರಿವಾರದ ವ್ಯಕ್ತಿಗಳೇ ನ್ಯಾಯಸ್ಥಾನದಲ್ಲಿರುವಾಗ ಮತಯಂತ್ರಗಳ ಗುಟ್ಟು ಹೊರಬರಲು ಸಾಧ್ಯವೇ? ನಮ್ಮ ದೇಶದ ಪ್ರಜಾಪ್ರಭುತ್ವ ಈಗ ತುಂಬಾ ಕಠಿಣ ಪರೀಕ್ಷೆಗೆ ಒಳಗಾಗಿದೆ. ಅದು ಉಳಿಯುತ್ತೋ ಇಲ್ಲವೋ ಕಾಲವೇ ಹೇಳಬಲ್ಲುದು! ಮತಯಂತ್ರವೆಂಬ ಭಸ್ಮಾಸುರನನ್ನು ಸೃಷ್ಟಿಸಿದ ಕಾಂಗ್ರೆಸ್‌ಗಂತೂ ಉಳಿಗಾಲವಿದ್ದಂತೆ ಕಾಣುತ್ತಿಲ್ಲ.

-ಜಿ. ರವಿಕಿರಣ ರೈ, ಕೋಟೆಕಾರ್, ಮಂಗಳೂರು

share
ವಾರ್ತಾಭಾರತಿ
ವಾರ್ತಾಭಾರತಿ
Next Story
X