Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಮದೀನಾ: ಕುರ್‌ಆನ್ ನ ವಿಶಿಷ್ಟ ಪ್ರದರ್ಶನ

ಮದೀನಾ: ಕುರ್‌ಆನ್ ನ ವಿಶಿಷ್ಟ ಪ್ರದರ್ಶನ

ವಿವಿಧ ಕಾಲಘಟ್ಟಗಳ ವೈವಿಧ್ಯಮಯ ಹಸ್ತಪ್ರತಿಗಳ ಸಂಗ್ರಹ

ವಾರ್ತಾಭಾರತಿವಾರ್ತಾಭಾರತಿ22 Dec 2017 10:14 PM IST
share
ಮದೀನಾ: ಕುರ್‌ಆನ್ ನ ವಿಶಿಷ್ಟ ಪ್ರದರ್ಶನ

ಮದೀನಾ (ಸೌದಿ ಅರೇಬಿಯ), ಡಿ. 22: ಮುಸ್ಲಿಮರ ಪವಿತ್ರ ನಗರ ಸೌದಿ ಅರೇಬಿಯದ ಮದೀನಾದಲ್ಲಿ ಪವಿತ್ರ ಗ್ರಂಥ ಕುರ್‌ಆನ್ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಕಿಂಗ್ ಫಾಹದ್ ಕಾಂಪ್ಲೆಕ್ಸ್ ಫಾರ್ ದ ಪ್ರಿಂಟಿಂಗ್ ಆಫ್ ದ ಹೋಲಿ ಕುರ್‌ಆನ್, ಜನರಲ್ ಪ್ರೆಸಿಡೆನ್ಸಿ ಫಾರ್ ದ ಅಫೇರ್ಸ್ ಆಫ್ ದ ಗ್ರಾಂಡ್ ಮಾಸ್ಕ್ ಆ್ಯಂಡ್ ದ ಪ್ರಾಫೆಟ್ಸ್ ಮಾಸ್ಕ್, ಕಿಂಗ್ ಅಬ್ದುಲ್ ಅಝೀಝ್ ಫೌಂಡೇಶನ್ ಫಾರ್ ರಿಸರ್ಚ್ ಆ್ಯಂಡ್ ಆರ್ಕೈವ್ಸ್, ಮದೀನಾದಲ್ಲಿರುವ ಕಿಂಗ್ ಅಬ್ದುಲ್ ಅಝೀಝ್ ಜನರಲ್ ಲೈಬ್ರರಿ, ಕಿಂಗ್ ಸೌದಿ ವಿಶ್ವವಿದ್ಯಾನಿಲಯ ಮತ್ತು ಕಿಂಗ್ ಅಬ್ದುಲ್ ಅಝೀಝ್ ವಿಶ್ವವಿದ್ಯಾನಿಲಯ ಈ ಪ್ರದರ್ಶನದಲ್ಲಿ ಪಾಲ್ಗೊಂಡಿವೆ.

ಕುರ್‌ಆನ್‌ನ್ನು ಕಲಿಯುವುದು ಮತ್ತು ಕಲಿಸುವುದು, ಕುರ್‌ಆನ್‌ನ ಶ್ರೇಷ್ಠತೆಯನ್ನು ಸಾರುವುದು, ಕುರ್‌ಆನ್‌ನ ಇತಿಹಾಸವನ್ನು ತಿಳಿದುಕೊಳ್ಳುವುದು, ಕುರ್‌ಆನ್‌ನ ವಿಶೇಷ ತಂತ್ರಜ್ಞಾನಗಳನ್ನು ಪ್ರದರ್ಶಿಸುವುದು ಹಾಗೂ ಕುರ್‌ಆನ್‌ನ ಪೋಷಣೆಯಲ್ಲಿ ಸೌದಿ ಅರೇಬಿಯದ ಶ್ರಮವನ್ನು ತಿಳಿಯಪಡಿಸುವುದು ಈ ಪ್ರದರ್ಶನದ ಉದ್ದೇಶವಾಗಿದೆ.

ಕುರ್‌ಆನ್ ಪ್ರದರ್ಶನದಲ್ಲಿ ಹಲವಾರು ಹಸ್ತಪ್ರತಿಗಳು ಮತ್ತು ಸಮಾಜದ ಅಗತ್ಯಕ್ಕೆ ಹೊಂದಿಕೊಳ್ಳುವ ಆಧುನಿಕ ತಂತ್ರಜ್ಞಾನಗಳಿವೆ ಎಂದು ಪ್ರದರ್ಶನದ ಉಸ್ತುವಾರಿ ಹಂಝ ಅಬ್ದುಲ್ ಕರೀಂ ‘ಅರಬ್ ನ್ಯೂಸ್’ಗೆ ತಿಳಿಸಿದರು.

 ಹಾಫಿಝ್ ಉಸ್ಮಾನ್ ಬರೆದ ಹಸ್ತಪ್ರತಿಗಳು ಇಲ್ಲಿವೆ. ಹಾಫಿಝ್ ಉಸ್ಮಾನ್ ಕುರ್‌ಆನ್‌ನ 106 ಹಸ್ತಪ್ರತಿಗಳನ್ನು ಬರೆದಿದ್ದಾರೆ ಹಾಗೂ 107ನೆ ಪ್ರತಿಯನ್ನು ಬರೆಯುತ್ತಿದ್ದಾಗ ನಿಧನರಾಗಿದ್ದಾರೆ.

200 ವರ್ಷ ಹಳೆಯ ಅತಿ ಭಾರದ ಕುರ್‌ಆನ್

ಕುರ್‌ಆನ್ ಪ್ರದರ್ಶನದಲ್ಲಿರುವ 200 ವರ್ಷಗಳ ಹಳೆಯ ವಿಶಿಷ್ಟ ಹಸ್ತಪ್ರತಿಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ಅದನ್ನು ಗುಲಾಂ ಮುಹಿಯುದ್ದೀನ್ ಬರೆದಿದ್ದಾರೆ.

ಅತಿ ಭಾರದ ಈ ಹಸ್ತಪ್ರತಿಯನ್ನು  4 ಒಂಟೆಗಳ ಮೇಲೆ ಅಫ್ಘಾನಿಸ್ತಾನದಿಂದ ಮದೀನಾಕ್ಕೆ ಕರೆತರಲಾಗಿತ್ತು ಎಂದು ದಾಖಲಾಗಿದೆ.

ಈ ಹಸ್ತಪ್ರತಿಯು ಒಂದೂವರೆ ಮೀಟರ್ ಉದ್ದವಿದೆ ಹಾಗೂ ಒಂದು ಒಂದು ಮೀಟರ್ ಅಗಲವಿದೆ. ಅದು 154 ಕೆಜಿ ಭಾರವಿದೆ. ಪ್ರತಿ ಪುಟದ ಕೆಳಗೆ ಪರ್ಶಿಯನ್ ಭಾಷೆಯಲ್ಲಿ ಅನುವಾದವಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X