Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ನೇಪಾಳದ ಮೇಲೆ ಪ್ರಭಾವ...

ನೇಪಾಳದ ಮೇಲೆ ಪ್ರಭಾವ ಕಳೆದುಕೊಳ್ಳುತ್ತಿರುವ ಭಾರತ

ಭಾರತದ ಸ್ಥಾನ ತುಂಬಲು ಯಾವ ಬೆಲೆ ತೆರಲೂ ಸಿದ್ಧವಾಗಿರುವ ಚೀನಾ

ವಾರ್ತಾಭಾರತಿವಾರ್ತಾಭಾರತಿ23 Dec 2017 8:14 PM IST
share
ನೇಪಾಳದ ಮೇಲೆ ಪ್ರಭಾವ ಕಳೆದುಕೊಳ್ಳುತ್ತಿರುವ ಭಾರತ

ಕಠ್ಮಂಡು (ನೇಪಾಳ), ಡಿ. 23: ನೆರೆಯ ದೇಶ ನೇಪಾಳದ ಮೇಲೆ ಭಾರತ ನಿಧಾನವಾಗಿ ತನ್ನ ಪ್ರಭಾವವನ್ನು ಕಳೆದುಕೊಳ್ಳುತ್ತಿದೆಯೇ? ಇತ್ತೀಚೆಗೆ ಅಲ್ಲಿ ನಡೆದ ಚುನಾವಣೆಯ ಬಳಿಕವಂತೂ ಇದು ಸ್ಪಷ್ಟವಾಗಿದೆ.

ಚುನಾವಣೆಯಲ್ಲಿ ಸ್ಪಷ್ಟ ಭಾರತ ವಿರೋಧಿ ಧೋರಣೆಗಳನ್ನು ಹೊಂದಿರುವ ಎಡ ಪಕ್ಷಗಳು ಭಾರೀ ಬಹುಮತದಿಂದ ಅಧಿಕಾರಕ್ಕೆ ಬಂದಿವೆ. ಇದು ಭಾರತದ ಅಸ್ಥಿರ ನಿಲುವು, ತತ್ಕಾಲದ ನೀತಿ ನಿರೂಪಣೆ, ವಿವಿಧ ಅಧಿಕಾರ ಕೇಂದ್ರಗಳು, ಪರಸ್ಪರ ವಿರೋಧಾಭಾಸದ ಸಂದೇಶಗಳು ಮತ್ತು ಇಚ್ಛಾಶಕ್ತಿಯ ಕೊರತೆಗೆ ದಕ್ಕಿದ ಪ್ರತಿಫಲವಾಗಿದೆ.

 2015ರ ಕೊನೆಯಲ್ಲಿ, ನೇಪಾಳ ನೂತನ ಸಂವಿಧಾನವನ್ನು ಜಾರಿಗೊಳಿಸಿದ ಬಳಿಕ ದೇಶದ ದಕ್ಷಿಣದ ಬಯಲುಸೀಮೆಯ ಮದೇಸಿ ಜನರು ತಮಗೆ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ಬೇಕೆಂದು ಒತ್ತಾಯಿಸಿ ಪ್ರತಿಭಟನೆಗಿಳಿದರು. ನೂತನ ಸಂವಿಧಾನವು ಅತ್ಯಂತ ಅಸಮಾನತೆಯ ರಾಜಕೀಯ ವ್ಯವಸ್ಥೆಯೊಂದನ್ನು ನಿರ್ಮಿಸುವುದಾಗಿ ಅವರು ಭಾವಿಸಿದ್ದರು. ಭಾರತದ ರಾಜತಾಂತ್ರಿಕರೊಬ್ಬರು ಆಗ ಮದೇಸಿ ಪ್ರತಿನಿಧಿಯೊಬ್ಬರಿಗೆ ಹೀಗೆ ಹೇಳಿದ್ದರು: ‘‘ನೀವು ಯಾಕೆ ನಿಮ್ಮದೇ ಸಂವಿಧಾನವನ್ನು ಜಾರಿಗೊಳಿಸಬಾರದು? ಕಠ್ಮಂಡು ಪಾಠ ಕಲಿಯುವಂತೆ ಮಾಡುವ ಏಕೈಕ ವಿಧಾನ ಅದು. ನಾವು ನಿಮ್ಮೊಂದಿಗಿದ್ದೇವೆ’’.

ಅದಾದ ಒಂದೂವರೆ ವರ್ಷದ ಬಳಿಕ, ಅಂದರೆ 2017ರ ಮಧ್ಯ ಭಾಗದಲ್ಲಿ ನೇಪಾಳದಲ್ಲಿ ಸ್ಥಳೀಯ ಚುನಾವಣೆ ನಡೆಯಲು ಸಿದ್ಧತೆ ನಡೆಯುತ್ತಿತ್ತು. ಸಂವಿಧಾನ ಸುಧಾರಣೆಗೆ ಕಾಯುತ್ತಿದ್ದ ಮದೇಸಿ ಪಕ್ಷಗಳು ಚುನಾವಣೆಯಲ್ಲಿ ಪಾಲ್ಗೊಳ್ಳಲು ಬಯಸಲಿಲ್ಲ. ಹಾಗೆ ಮಾಡುವುದೆಂದರೆ ನೂತನ ಸಂವಿಧಾನವನ್ನು ಅನುಮೋದಿಸಿದಂತೆ ಆಗುತ್ತಿತ್ತು. ಆಗ ಪ್ರಮುಖ ಭಾರತೀಯ ರಾಜತಾಂತ್ರಿಕರೊಬ್ಬರು ಅದೇ ಮದೇಸಿ ಪ್ರತಿನಿಧಿಗೆ ಹೀಗೆ ಹೇಳಿದರು: ‘‘ಮದೇಸಿಗಳು ಈಗ ನಮಗೆ ಹೊರೆಯಾಗಿದ್ದಾರೆ. ನೀವು ಕಠ್ಮಂಡುವಿನ ಮುಖ್ಯ ವಾಹಿನಿಗೆ ಶರಣಾಗಬೇಕು. ಅದು ‘ದ್ವಿತೀಯ ದರ್ಜೆಯ ನಾಗರಿಕ’ರಾದರೂ ಸರಿಯೆ. ಭಾರತದ ಏಕೈಕ ಹಿತಾಸಕ್ತಿಯೆಂದರೆ, ಚೀನಾದತ್ತ ಹೋಗದಂತೆ ಅದನ್ನು ಖುಷಿಯಾಗಿಡುವುದು’’.

ಈ ಎರಡು ವಿರೋಧಾಭಾಸದ ಸಂದೇಶಗಳಲ್ಲಿ ಭಾರತದ ವಿಫಲ ‘ನೇಪಾಳ ರಾಜನೀತಿ’ ಅಡಗಿದೆ.

ಹೊಸ ರಾಜಕಾರಣಿಗಳಿಗೆ ಭಾವನಾತ್ಮಕ ಬಂಧನವಿಲ್ಲ

ನೇಪಾಳದ ನೂತನ ಪೀಳಿಗೆಯ ರಾಜಕಾರಣಿಗಳು ಭಾರತದೊಂದಿಗಿನ ಸಂಬಂಧದ ಬಗ್ಗೆ ಭಾವನಾತ್ಮಕ ಒಲವನ್ನು ಹೊಂದಿಲ್ಲ.

ಹಿಂದೆ ನೇಪಾಳದ ರಾಜಕೀಯದ ಮೇಲೆ ಭಾರತ ಏಕಸ್ವಾಮ್ಯ ಹೊಂದಿತ್ತು. ಈಗ ನೇಪಾಳದ ಎಡ ಮೈತ್ರಿಕೂಟವನ್ನು ಚೀನಾ ಪ್ರಬಲವಾಗಿ ಬೆಂಬಲಿಸುತ್ತಿರುವುದರಿಂದ ಆ ಅನುಕೂಲವನ್ನು ಭಾರತ ಕಳೆದುಕೊಂಡಿದೆ.

ನೇಪಾಳದಲ್ಲಿ ಭಾರತದ ಸ್ಥಾನವನ್ನು ತುಂಬಲು ಚೀನಾ ತುದಿಗಾಲಲ್ಲಿ ನಿಂತಿದೆ.

ತಡ ನಿರ್ಧಾರ ಪರಿಣಾಮ ಬೀರಲಿಲ್ಲ

ನೇಪಾಳದ ನೂತನ ಸಂವಿಧಾನದ ವಿಷಯದಲ್ಲಿ ಭಾರತ ಸರಿಯಾದ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಿಲ್ಲ. ಒಂದು ಹಂತದಲ್ಲಿ, ಎಲ್ಲರನ್ನೂ ಒಳಗೊಳ್ಳುವ ಸಂವಿಧಾನವೊಂದನ್ನು ರಚಿಸಿ ಎಂಬುದಾಗಿ ಭಾರತ ನೇಪಾಳಕ್ಕೆ ಸಲಹೆ ನೀಡಿತು. ಸಲಹೆಯೇನೋ ಸರಿಯೆ. ಆದರೆ, ಅದನ್ನು ತುಂಬಾ ತಡವಾಗಿ ನೀಡಲಾಯಿತು.

ಸರ್ವರನ್ನು ಒಳಗೊಂಡ ಸಂವಿಧಾನ ಯಾಕೆ ಬೇಕು ಎಂಬುದನ್ನು ನೇಪಾಳಕ್ಕೆ ಮನವರಿಕೆ ಮಾಡಲು ಭಾರತ ನೇಪಾಳದ ರಾಜಕೀಯ ಪಕ್ಷಗಳ ಮೇಲೆ ಇರುವ ಪ್ರಭಾವವನ್ನೂ ಬಳಸಿಕೊಳ್ಳಲಿಲ್ಲ ಹಾಗೂ ಭಾರತೀಯ ರಾಜಕೀಯ ಅಭಿಪ್ರಾಯವನ್ನೂ ಸರಿಯಾಗಿ ರೂಪಿಸಲಿಲ್ಲ. ನೇಪಾಳದ ಪರ್ವತ ಪ್ರದೇಶಗಳ ರಾಜಕೀಯ ಮುಖಂಡರು ಸಂವಿಧಾನವನ್ನು ಅಂಗೀಕರಿಸಿಯೇ ಬಿಟ್ಟರು. ಭಾರತ ಹಿನ್ನಡೆ ಅನುಭವಿಸಿತು.

ಯಶಸ್ವಿಯಾಗದ ‘ದಿಗ್ಬಂಧನ’

ಸಂವಿಧಾನವನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ಕಠ್ಮಂಡು ಮೇಲೆ ಒತ್ತಡ ಹೇರಲು ಆ ದೇಶಕ್ಕೆ ಭಾರತದ ಮೂಲಕ ಹೋಗುವ ವಸ್ತುಗಳ ಸಾಗಾಟಕ್ಕೆ ನಿರ್ಬಂಧ ಹೇರಲಾಯಿತು. ಈ ಪರಿಸ್ಥಿತಿಯನ್ನು ಚೆನ್ನಾಗಿ ಬಳಸಿಕೊಂಡ ಅಂದಿನ ಪ್ರಧಾನಿ ಕೆ.ಪಿ. ಒಲಿ, ನೇಪಾಳಿಗರಲ್ಲಿ ಅತಿ ರಾಷ್ಟ್ರೀಯತೆಯನ್ನು ತುಂಬಿಸಿದರು.

ಭಾರತದ ಕ್ರಮಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಟೀಕೆಗಳು ಕೇಳಿಬಂದವು. ಈ ಹಿನೆಲೆಯಲ್ಲಿ, ತನ್ನ ಉದ್ದೇಶ ಸಂಪೂರ್ಣವಾಗಿ ಈಡೇರದಿದ್ದರೂ ಭಾರತ ವಸ್ತುಗಳ ಸಾಗಾಟದ ಮೇಲಿನ ನಿರ್ಬಂಧವನ್ನು ತೆರವುಗೊಳಿಸಿತು. ಆಗ ಕಠ್ಮಂಡುವಿನ ರಾಜಕಾರಣಿಗಳು ವಿಜಯೋತ್ಸವ ಆಚರಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X