Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ..

ಓ ಮೆಣಸೇ..

ಪಿ.ಎ.ರೈಪಿ.ಎ.ರೈ25 Dec 2017 12:16 AM IST
share
ಓ ಮೆಣಸೇ..

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಗೌರಿಲಂಕೇಶ್ ಹಂತಕರ ಬಂಧನ. - ರಾಜನಾಥ್ ಸಿಂಗ್, ಕೇಂದ್ರ ಸಚಿವ ಆದರೆ ಗೌರಿ ಲಂಕೇಶರಿಗೆ ಬಿಜೆಪಿ ಅಧಿಕಾರಕ್ಕೆ ಬರುವುದು ಇಷ್ಟವಿರಲಿಲ್ಲ.

---------------------

ಕಂಬಳದಲ್ಲಿ ಕೋಣಗಳನ್ನು ಓಡಿಸುತ್ತಾರೆ ವಿನಃ ನೋವು ಮಾಡುವುದಿಲ್ಲ. - ವಜುಭಾಯಿವಾಲಾ, ರಾಜ್ಯಪಾಲ
  ಪ್ರಾಯೋಗಿಕವಾಗಿ ನಿಮ್ಮನ್ನು ಒಮ್ಮೆ ಓಡಿಸಿ ನೋಡೋಣವೇ?

---------------------

ಹಿಂದುತ್ವ ಎನ್ನುವುದರ ಅರ್ಥ ಎಲ್ಲ ಸಮುದಾಯಗಳನ್ನು ಒಗ್ಗೂಡಿಸುವುದು. - ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ ಮತ್ತು ಮನುಸಿದ್ಧಾಂತದ ಪ್ರಕಾರ ಕೆಲಸಗಳನ್ನು ವಿಂಗಡಿಸುವುದು.

---------------------

ಸ್ವಾತಂತ್ರಾನಂತರ ಬಡವ-ಶ್ರೀಮಂತರ ಅಂತರ ತಗ್ಗಿದೆ. - ಡಾ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ ಧರ್ಮಸ್ಥಳ
ತಗ್ಗಿದ ಅಂತರವನ್ನು ಹೆಚ್ಚಿಸಲು ಎಲ್ಲ ಪ್ರಯತ್ನಗಳೂ ಕೇಂದ್ರದಿಂದ ನಡೆಯುತ್ತಿವೆ.

---------------------

ಸಿದ್ದರಾಮಯ್ಯ ಮತ್ತು ನಾನು ಒಂದೇ ನೊಗ ಹೊತ್ತ ಜೋಡೆತ್ತಿನಂತೆ.
- ಡಾ.ಜಿ.ಪರಮೇಶ್ವರ್, ಕಾಂಗ್ರೆಸ್ ಅಧ್ಯಕ್ಷ
ನಿಮ್ಮನ್ನು ಹೊತ್ತು ಸಿದ್ದರಾಮಯ್ಯ ಚುನಾವಣಾ ಗದ್ದೆಯಲ್ಲಿ ಓಡಬೇಕಾಗಿದೆ ಎನ್ನುವುದು ಸದ್ಯದ ಸಮಸ್ಯೆ.

---------------------

ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶದಿಂದ ಸಿದ್ದರಾಮಯ್ಯರಿಗೆ ನಿದ್ದೆಯಲ್ಲೂ ಮೋದಿ ಭಯ ಶುರುವಾಗಿದೆ. - ನಳಿನ್‌ಕುಮಾರ್ ಕಟೀಲು, ಸಂಸದ
ಸದ್ಯಕ್ಕೆ ದೇಶದ ಪ್ರಜೆಗಳೆಲ್ಲ ನಿದ್ದೆಯಲ್ಲೂ ಮೋದಿಗೆ ಹೆದರ ತೊಡಗಿದ್ದಾರೆ.

---------------------

ಮನುಷ್ಯ -ಮನುಷ್ಯರನ್ನು ಪ್ರೀತಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. - ರಮಾನಾಥ ರೈ, ಸಚಿವ
ಹೀಗಾದಲ್ಲಿ ಮನುಷ್ಯನನ್ನು ಯಂತ್ರಗಳ ಮೂಲಕವೇ ಸೃಷ್ಟಿಸಬೇಕಾಗಬಹುದು.

---------------------

ಗುಜರಾತ್ ಫಲಿತಾಂಶಕ್ಕೆ ನಾವು ಹೆದರುವುದಿಲ್ಲ. - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಅಲ್ಲಿ ಜೆಡಿಎಸ್ ಚುನಾವಣೆಗೆ ಸ್ಪರ್ಧಿಸಿಲ್ಲ ಎಂಬ ಧೈರ್ಯ.

---------------------

ಕರ್ನಾಟಕ ಭಯೋತ್ಪಾದಕರನ್ನ್ನು ತಯಾರು ಮಾಡುವ ಕೇಂದ್ರ. - ಪ್ರಹ್ಲಾದ್ ಜೋಶಿ, ಸಂಸದ
ಅನಂತಕುಮಾರ್ ಹೆಗಡೆಗೆ ಆ ಕೇಂದ್ರದ ಉಸ್ತುವಾರಿಯನ್ನು ನೀಡಲಾಗಿದೆ.

---------------------

ಗುಜರಾತ್ ಚುನಾವಣೆಯಲ್ಲಿ ರಾಹುಲ್ ಶ್ರಮವನ್ನು ಅಯ್ಯರ್, ಸಿಬಲ್ ಮಣ್ಣುಪಾಲು ಮಾಡಿದರು. - ವೀರಪ್ಪ ಮೊಯ್ಲಿ, ಸಂಸದ
ನೀವೇನು ಮಾಡಿದ್ದೀರಿ ಅದನ್ನು ಹೇಳಿ.

---------------------

ಗುಜರಾತ್ ಗೆಲುವು ಸುಲಭವಾಗಿ ದಕ್ಕಿದ್ದಲ್ಲ. - ನರೇಂದ್ರ ಮೋದಿ, ಪ್ರಧಾನಿ
ಇವಿಎಂ ತಿರುಚುವುದು ಸುಲಭದ ಕೆಲಸ ಅಲ್ಲ.

---------------------

ಸಿಎಂ ಸಿದ್ದರಾಮಯ್ಯರನ್ನು ಕಂಡರೆ ಮೋದಿ ನಡುಗುತ್ತಾರೆ - ಎಂ.ಬಿ.ಪಾಟೀಲ್, ಸಚಿವ
ಅದಕ್ಕೆ ರಾಜ್ಯ ಚುನಾವಣೆಯನ್ನು ಬೇಸಿಗೆ ಕಾಲದಲ್ಲಿ ಇಡಲು ಆಯೋಗ ನಿರ್ಧರಿಸಿದೆ.

---------------------

ಗಾಳಿ ಮಾತುಗಳಿಗೆ ತಲೆಕೆಡಿಸಿಕೊಳ್ಳಬೇಡಿ - ಬಾಬಾರಾಮ್‌ದೇವ್, ಯೋಗಗುರು
ಗಾಳಿಯ ಜೊತೆಗೆ ಮಳೆಯೂ ಸುರಿದರೆ ಕಷ್ಟ.

---------------------

ತಪ್ಪು ವ್ಯಕ್ತಿಗಳ ಕೈಗೆ ಅಧಿಕಾರ ನೀಡಿದರೆ ಏನೆಲ್ಲಾ ಆಗಬಹುದು ಎನ್ನುವುದನ್ನು ಕರ್ನಾಟಕದಲ್ಲಿ ನೋಡಬಹುದು. - ಯೋಗಿ ಆದಿತ್ಯನಾಥ್, ಉ.ಪ್ರ.ಮುಖ್ಯಮಂತ್ರಿ

ಕರ್ನಾಟಕದ ಜನರು ಅದನ್ನು ಉತ್ತರಪ್ರದೇಶದಲ್ಲಿ ಈಗಾಗಲೇ ನೋಡಿದ್ದಾರೆ.

---------------------

ನಾವು ಮಾಡಿದ ಕೆಲಸಕ್ಕೆ ಕೂಲಿಯಾಗಿ ನಮಗೆ ಮತ ನೀಡಿ - ಸಿದ್ದರಾಮಯ್ಯ, ಮುಖ್ಯಮಂತ್ರಿ

ಅದಕ್ಕಾಗಿ ಪ್ರತೀ ತಿಂಗಳು ಪಡೆಯುವ ವೇತನ, ಭತ್ತೆ ಎಲ್ಲವನ್ನು ಏನು ಮಾಡಿದಿರಿ?

---------------------

ಕಾಂಗ್ರೆಸ್ ಸರಕಾರ ಕರ್ನಾಟಕವನ್ನು ಕಾಶ್ಮೀರ ಮಾಡಿದೆ - ಮುರಳೀಧರ ರಾವ್, ಬಿಜೆಪಿ ರಾಜ್ಯ ಉಸ್ತುವಾರಿ
ಆದುದರಿಂದ ರಾಜ್ಯದಲ್ಲಿ ಪಿಡಿಪಿಯ ಜೊತೆಗೆ ಸೇರಿ ಆಡಳಿತ ಮಾಡಬೇಕು ಎಂದು ನಿರ್ಧರಿಸಿದ್ದೀರಾ?

---------------------

ರಾಜ್ಯದ ನೆಲ, ಜಲ, ಭಾಷೆ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ - ಎಂ.ಬಿ.ಪಾಟೀಲ್, ಸಚಿವ
ಸದ್ಯಕ್ಕೆ ಧರ್ಮದ ಹೆಸರಲ್ಲಿ ರಾಜಕೀಯ ಮಾಡುವುದು ಹೆಚ್ಚು ಲಾಭದಾಯಕ.

---------------------

ಕರ್ನಾಟಕದಲ್ಲಿ ಬಿಜೆಪಿಯ ಆಟ ನಡೆಯೋದಿಲ್ಲ - ಡಿ.ಕೆ.ಶಿವಕುಮಾರ್, ಸಚಿವ
 ಅವರು ಆಟ ಆಡುವುದಕ್ಕೆ ಬಂದವರಂತೆ ಕಾಣುತ್ತಿಲ್ಲ.

---------------------

ರಾಜ್ಯದಲ್ಲಿ ಬೋಗಸ್ ಪಡಿತರ ಚೀಟಿ ಬಗ್ಗೆ ಮಾಹಿತಿ ನೀಡಿದವರಿಗೆ 400 ರೂ. ಇನಾಮು - ಯು.ಟಿ.ಖಾದರ್, ಸಚಿವ
ನೀಡದೇ ಇದ್ದರೆ ದುಪ್ಪಟ್ಟು ಕೊಡುತ್ತೇವೆ ಎಂದು ಬೋಗಸ್ ಜನಗಳು ಘೋಷಿಸಿದ್ದಾರಂತೆ.

---------------------

2ಜಿ ಪ್ರಕರಣವನ್ನು ಪ್ರಧಾನಿ ನರೇಂದ್ರ ಮೋದಿ ಒಂದು ಪಾಠವಾಗಿ ಸ್ವೀಕರಿಸಬೇಕು - ಸುಬ್ರಮಣಿಯನ್ ಸ್ವಾಮಿ, ಸಂಸದ
ಪಾಠಕ್ಕಿಂತ ರಾಜಕೀಯ ಆಟವೇ ಎದ್ದು ಕಾಣುತ್ತಿದೆ.

---------------------

ಬಿಜೆಪಿಯ ಪರಿವರ್ತನಾ ಯಾತ್ರೆ ಇತಿಹಾಸ ನಿರ್ಮಿಸಲಿದೆ. - ಜಗದೀಶ್ ಶೆಟ್ಟರ್, ಬಿಜೆಪಿ ನಾಯಕ
ಬಿಜೆಪಿಗರ ಪಾಲಿಗೆ ದುರಂತ ಇತಿಹಾಸವನ್ನೇ ನಿರ್ಮಾಣ ಮಾಡುವ ಸಾಧ್ಯತೆ ಇದೆ.

---------------------

ಝಮೀರ್ ಅಹ್ಮದ್‌ರಂತಹವರು ಬಿಟ್ಟು ಹೋದ ಮೇಲೆ ನಮ್ಮ ಪಕ್ಷ ಸಶಕ್ತವಾಗಿದೆ - ಮಧು ಬಂಗಾರಪ್ಪ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ
ಝಮೀರ್ ಅಹ್ಮದ್‌ಗಿಂತ ದೊಡ್ಡ ದುಡ್ಡಿನ ಕುಳ ಸಿಕ್ಕಿರಬೇಕು.

share
ಪಿ.ಎ.ರೈ
ಪಿ.ಎ.ರೈ
Next Story
X