ಲೋಕಸಭೆಯಲ್ಲಿ ತ್ರಿವಳಿ ತಲಾಖ್ ವಿಧೇಯಕ ಮಂಡನೆ
ಹೊಸದಿಲ್ಲಿ, ಡಿ.28: ತ್ರಿವಳಿ ತಲಾಖ್ ವಿಧೇಯಕವನ್ನು ಲೋಕಸಭೆಯಲ್ಲಿ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಗುರುವಾರ ಮಂಡಿಸಿದರು.
ವಿಪಕ್ಷಗಳಾದ ಟಿಎಂಸಿ ,ಬಿಜೆಡಿ, ಆರ್ ಜೆಡಿ , ಎಐಎಂಐಎಂ ವಿಧೇಯಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಎಐಎಂಐಎಂ ಪಕ್ಷದ ನಾಯಕ ಅಸ್ಸಾದುದ್ದೀನ್ ಓವೈಸಿ ಮಾತನಾಡಿ " ವಿಧೇಯಕದಲ್ಲಿ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗಿದೆ.
ಬಿಲ್ ಜಾರಿಯಿಂದ ಮುಸ್ಲಿಂ ಮಹಿಳೆಯರಿಗೆ ಅನ್ಯಾಯವಾಗಲಿದೆ. ಅವರ ಹಕ್ಕುಗಳನ್ನು ಕಸಿದುಕೊಂಡಂತಾಗುತ್ತದೆ. ಈ ಸಂಬಂಧ ಮುಸ್ಲಿಂ ಸಮುದಾಯದವರ ಅಭಿಪ್ರಾಯ ಪಡೆದಿಲ್ಲ " ಎಂದರು
ಈ ವಿಧೇಯಕ ಸಂವಿಧಾನಬದ್ಧವಾಗಿಯೇ ಇದೆ ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದರು.
Next Story