Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕುಲಭೂಷಣ್ ರಿಗೆ ತಾಯಿ, ಪತ್ನಿಯನ್ನು...

ಕುಲಭೂಷಣ್ ರಿಗೆ ತಾಯಿ, ಪತ್ನಿಯನ್ನು ವಿಧವೆಯರಂತೆ ತೋರಿಸಿದ ಪಾಕ್

ರಾಜ್ಯಸಭೆಯಲ್ಲಿ ಸುಷ್ಮಾ ಸ್ವರಾಜ್ ಹೇಳಿಕೆ

ವಾರ್ತಾಭಾರತಿವಾರ್ತಾಭಾರತಿ28 Dec 2017 2:02 PM IST
share
ಕುಲಭೂಷಣ್ ರಿಗೆ ತಾಯಿ, ಪತ್ನಿಯನ್ನು ವಿಧವೆಯರಂತೆ ತೋರಿಸಿದ ಪಾಕ್

ಹೊಸದಿಲ್ಲಿ, ಡಿ.28: ಕುಲಭೂಷಣ್ ಜಾಧವ್ ಅವರನ್ನು ಭೇಟಿಯಾಗಲು ತೆರಳಿದ್ದ ಅವರ ತಾಯಿ ಮತ್ತು ಪತ್ನಿಯೊಂದಿಗೆ ಪಾಕ್ ಅಮಾನವೀಯವಾಗಿ ವರ್ತಿಸಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ರಾಜ್ಯಸಭೆಯಲ್ಲಿ ಇಂದು ಹೇಳಿಕೆ ನೀಡಿದ್ದಾರೆ.

ಕುಲಭೂಷಣ್ ಭೇಟಿಯನ್ನು ಪಾಕ್ ಪ್ರಚಾರಕ್ಕೆ ಬಳಸಿತ್ತು. ಭೇಟಿಗೆ ಮೊದಲು ಅವರ ತಾಯಿ ಮತ್ತು ಪತ್ನಿ ಅವರ ಬಟ್ಟೆ ಬದಲಾಯಿಸಲು ಸೂಚಿಸಿತ್ತು. ಮಾಂಗಲ್ಯ, ಬಿಂದಿ ಮತ್ತು ಬಳೆಯನ್ನು ತೆಗೆಸಿ ಇಬ್ಬರು ಮಹಿಳೆಯರನ್ನು ವಿಧವೆಯರಂತೆ ತೋರಿಸಿದೆ ಎಂದು ಸುಷ್ಮಾ ಹೇಳಿದರು.

ತನ್ನ ಸ್ಥಿತಿಯನ್ನು ನೋಡಿದ ಕುಲಭೂಷಣ್ ಗಾಬರಿಗೊಂಡು "ಅಪ್ಪ ಹೇಗಿದ್ದಾರೆಂದು" ಪ್ರಶ್ನಿಸಿರುವುದಾಗಿ ಕುಲಭೂಷಣ್ ತಾಯಿ ಅವಂತಿ ತಿಳಿಸಿರುವುದಾಗಿ ಸಚಿವೆ ಸುಷ್ಮಾ ಸ್ವರಾಜ್  ಮಾಹಿತಿ ನೀಡಿದರು.

ಭೇಟಿಯ ವೇಳೆ ಪಾಕ್ ನ ಅಧಿಕಾರಿಗಳು ಅಮಾನವೀಯವಾಗಿ ವರ್ತಿಸಿದ್ದಾರೆ ಸಚಿವೆ ಸುಷ್ಮಾ ಸ್ವರಾಜ್ ಹೇಳಿದರು. ಅವಂತಿ ಅವರ ಅಭಿಪ್ರಾಯ ಪ್ರಕಾರ ಕುಲ್ ಭೂಷಣ್ ಒತ್ತಡಕ್ಕೊಳಗಾಗಿದ್ದಾರೆ. ಅವರನ್ನು ಪಾಕಿಸ್ತಾನ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ. ಕುಲಭೂಷಣ್ ವಿಚಾರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದವರು ಹೇಳಿದರು.

"ಬಾಬಾ (ತಂದೆ) ಹೇಗಿದ್ದಾರೆ ಎಂದು ಕುಲಭೂಷಣ್ ತನ್ನನ್ನು ನೋಡಿದ ಕೂಡಲೇ ಕೇಳಿದ ಮೊದಲ ಪ್ರಶ್ನೆಯಾಗಿತ್ತು ಎಂದು ಹೇಳುವಾಗ ಅವಂತಿ ಜಾಧವ್ ಬಿಕ್ಕಳಿಸಿದ್ದರು. ನನ್ನನ್ನು ಈ ರೀತಿ ನೋಡಿ ಆತ ಏನೋ ಕೆಟ್ಟದ್ದು ನಡೆದಿದೆ ಎಂದುಕೊಂಡಿದ್ದ. ಆದರೆ ಪತ್ನಿ ಕೂಡ ಅದೇ ರೀತಿ ಕಂಡಿದ್ದರಿಂದ ಆತನಿಗೆ ಸಮಾಧಾನವಾಯಿತು ಎಂದು ಅವಂತಿ  ಹೇಳಿದರು'' ಎಂದು ಸುಷ್ಮಾ ಎರಡೂ ಸದನಗಳಲ್ಲಿ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಪ್ಪತ್ತೆರಡು ತಿಂಗಳು ನಂತರ ತಾಯಿ ಮತ್ತು ಮಗನ ಹಾಗೂ ಪತಿ ಮತ್ತು ಪತ್ನಿಯ ನಡುವಿನ ಭಾವಾತ್ಮಕ ಭೇಟಿಯನ್ನು ಪಾಕಿಸ್ತಾನ ಪ್ರಚಾರ ಸಾಧನವನ್ನಾಗಿ ಬಳಸಿತ್ತು. ಮಾನವ ಹಕ್ಕುಗಳನ್ನು ಸತತವಾಗಿ ಉಲಂಘಿಸಲಾಯಿತು. ಅಲ್ಲಿ ಮಾನವೀಯತೆ ಅಥವಾ ಸೌಹಾರ್ದತೆಯಿರಲಿಲ್ಲ. ಈ ಧೋರಣೆಗಾಗಿ ಪಾಕಿಸ್ತಾನವನ್ನು ಬಲವಾಗಿ ಖಂಡಿಸಬೇಕು,'' ಎಂದು ಸುಷ್ಮಾ ಹೇಳಿದರು.

"ತಾನು ಯಾವತ್ತೂ ತನ್ನ ಮಂಗಲಸೂತ್ರ ತೆಗೆದಿಲ್ಲ" ಎಂದು ಜಾಧವ್ ತಾಯಿ ಪಾಕಿಸ್ತಾನಿ ಅಧಿಕಾರಿಗಳಿಗೆ ಹೇಳಿದರೂ ಅವರು ಸಾಧ್ಯವಿಲ್ಲ ಎಂದರು. ಇದು ದುರ್ವರ್ತನೆಯ ಅತಿರೇಕ ಎಂದು ಸುಷ್ಮಾ ಹೇಳುತ್ತಿದ್ದಂತೆಯೇ 'ಪಾಕಿಸ್ತಾನ್ ಮುರ್ದಾಬಾದ್' ಎಂಬ ಘೋಷಣೆಗಳು ಸಂಸತ್ತಿನಲ್ಲಿ ಮೊಳಗಿದವು.

ಜಾಧವ್ ಅವರ ಪತ್ನಿಯ ಶೂಗಳಲ್ಲಿ ಲೋಹದ  ವಸ್ತುಗಳಿವೆಯೆಂದು ಆರೋಪಿಸಿ ಅವುಗಳನ್ನು ವಶಪಡಿಸಿ ಹಿಂದಿರುಗಿಸದೇ ಇದ್ದ ಪಾಕಿಸ್ತಾನದ ಕ್ರಮವನ್ನು  'ವಿಚಿತ್ರ' ಎಂದ ಸುಷ್ಮಾ "ಶೂಗಳಲ್ಲಿ ಕ್ಯಾಮರಾ, ಚಿಪ್ ಅಥವಾ ರೆಕಾರ್ಡರ್ ಇರಬಹುದೆಂದು ಅವರು ಹೇಳುತ್ತಿದ್ದರು. ಆದರೆ ಏರ್ ಇಂಡಿಯಾ ಮತ್ತು ಎಮಿರೇಟ್ಸ್ ವಿಮಾನಗಳಲ್ಲಿ ಭದ್ರತಾ ತಪಾಸಣೆ ದಾಟಿಯೇ ಈ ಶೂಗಳು ಬಂದಿವೆ. ಹಾಗಾದರೆ ಪಾಕಿಸ್ತಾನ  ಪ್ರವೇಶಿಸಿದ ನಂತರ ಚಿಪ್ ಇತ್ತೇ?'' ಎಂದು ಸುಷ್ಮಾ ಪ್ರಶ್ನಿಸಿದರು.

"ಭೇಟಿಯ ವೇಳೆ ಜಾಧವ್ ಒತ್ತಡದಲ್ಲಿದ್ದಂತೆ ಕಂಡು ಬಂದಿತ್ತು  ಎಂದು ಅವರ ಕುಟುಂಬ ಹೇಳಿದೆ. ಅವರು ಮಾತನಾಡಿದ ರೀತಿ ಹಾಗೂ ಅವರ ವರ್ತನೆಯಿಂದ ಅವರು ಆರೋಗ್ಯವಾಗಿದ್ದಾರೆಂದು ಅನಿಸುತ್ತಿಲ್ಲ.  ಭೇಟಿಯ ನಂತರ ಅವರು ಹಿಂದಿರುಗಬೇಕಾಗಿದ್ದ ಕಾರಿನ ಆಗಮನವನ್ನು ಉದ್ದೇಶಪೂರ್ವಕವಾಗಿ ವಿಳಂಬಿಸಿ ಅವರು ಪಾಕಿಸ್ತಾನದ ಮಾಧ್ಯಮದ ನಿಂದನೆಗಳನ್ನು ಎದುರಿಸುವಂತೆ ಮಾಡಲಾಯಿತು'' ಎಂದರು.

ಸುಷ್ಮಾ ಹೇಳಿಕೆಯ ನಂತರ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ``ಇದು ಜಾಧವ್ ಕುಟುಂಬಕ್ಕೆ ಮಾತ್ರ ನಡೆದದ್ದಲ್ಲ, ಭಾರತದ ಪ್ರತಿಯೊಬ್ಬ ತಾಯಿ ಮತ್ತು ಸಹೋದರಿಯ ಜತೆ ದುರ್ವರ್ತನೆ ತೋರಿಸಿದಂತಾಗಿದೆ'' ಎಂದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X