Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ರೋಹಿತ್ ವೇಮುಲಾ ನೆಪದಲ್ಲಿ...

ರೋಹಿತ್ ವೇಮುಲಾ ನೆಪದಲ್ಲಿ...

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ29 Dec 2017 12:01 AM IST
share
ರೋಹಿತ್ ವೇಮುಲಾ ನೆಪದಲ್ಲಿ...

ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣ, ಭಾರತಾದ್ಯಂತ ಹೊಸ ಆಂದೋಲವನ್ನೇ ಹುಟ್ಟು ಹಾಕಿತು. ದಲಿತರ ಹಕ್ಕುಗಳು ಮತ್ತೆ ಚರ್ಚೆಗೊಳಗಾದವು. ದಿಲ್ಲಿಯಲ್ಲಿ ಕನ್ಹಯಾ, ಗುಜರಾತ್‌ನಲ್ಲಿ ಜಿಗ್ನೇಶ್‌ರಂತಹ ಹೊಸ ನಾಯಕರನ್ನು ಹುಟ್ಟು ಹಾಕುವುದಕ್ಕೂ ವೇಮುಲಾನಿಗೆ ಆದ ಅನ್ಯಾಯ ಕಾರಣವಾಯಿತು. ವೇಮುಲಾ ಸಾವಿನ ಕುರಿತಂತೆ ಲೇಖನಗಳು, ಕವಿತೆಗಳು ಸಾಲು ಸಾಲಾಗಿ ಹೊರ ಬಂದವು. ಇದು ಕೇವಲ ಆಂಧ್ರ ಪ್ರದೇಶಕ್ಕಷ್ಟೇ ಸೀಮಿತವಾಗಿರಲಿಲ್ಲ. ‘ಕತ್ತಲ ನಕ್ಷತ್ರ’ ತೆಲುಗಿನಲ್ಲಿ ವೇಮುಲಾ ಕುರಿತಂತೆ ಬಂದಿರುವ ಬರಹಗಳು ಮತ್ತು ಕಾವ್ಯಗಳು. ವಿರಸಂ ಅವರು ಇದನ್ನು ಸಂಪಾದಿಸಿದ್ದು, ಬಿ. ಸುಜ್ಞಾನ ಮೂರ್ತಿ ಕನ್ನಡಕ್ಕಿಳಿಸಿದ್ದಾರೆ. ರೋಹಿತ್ ಕುರಿತಂತೆ ಅಥವಾ ರೋಹಿತ್‌ನನ್ನು ಹಿನ್ನೆಲೆಯಾಗಿಟ್ಟುಕೊಂಡ ಸುಮಾರು 44 ವೈವಿಧ್ಯಮಯ ಬರಹಗಳು ಇಲ್ಲಿವೆ.

 ರೋಹಿತ್ ಕುರಿತಂತೆ ಯೋಚಿಸುವುದು ಎಂದರೆ, ಬೀದಿಗಿಳಿದು ಆಂದೋಲನವನ್ನು ಗಟ್ಟಿಗೊಳಿಸುವುದು ಎಂದು ಬರೆಯುವ ವಾಣಿ, ವಿಶ್ವವಿದ್ಯಾನಿಲಯಗಳಲ್ಲಿ ಬೇರಿಳಿಸುತ್ತಿರುವ ಸಂಘಪರಿವಾರ ಮತ್ತು ಅದರ ವಿರುದ್ಧ ವಿದ್ಯಾರ್ಥಿಗಳ ಹೊಣೆಗಾರಿಕೆಯೇನು ಎನ್ನುವುದನ್ನು ತಿಳಿಸುತ್ತಾರೆ. ವೇಮುಲಾ ಸಾವನ್ನು ಕವಿತೆಯಾಗಿಸುವ ಉದಯ್ ಭಾನು, ‘ಎಳಸು ಭಾವವು/ ಮುಚ್ಚಿದ ಮನಸುಗಳಿಗೂ ತಿವಿಯುತ್ತಾ/ನಾರುವ ನಾಡಿನ ಆತ್ಮಸಾಕ್ಷಿಯನೇ/ ನಡುಗಿಸುತಿದೆ ಮೃತಾತ್ಮವೊಂದು’ ಎಂದು ಬರೆಯುತ್ತಾರೆ. ಸಾಗರ್ ಎಂಬವರು ವೇಮುಲಾ ಸಾವನ್ನು ‘ಆಲೋಚನೆಗಳ ಮೇಲೆ ಭೌತಿಕ ದಾಳಿ’ ಎಂದು ಬಣ್ಣಿಸುತ್ತಾರೆ. ‘ನೂತನ ಪರಿಮಳ’ ಕವಿತೆಯಲ್ಲಿ ಮಲ್ಲೇಶ್ ಅವರು ‘ವೇಮುಲಾ ಸಾವನ್ನು ಖಂಡಿಸಿದ ಮನುವಾದಿ ಮನಸ್ಸಿನ’ ಇನ್ನೊಂದು ಮುಖವನ್ನು ತೆರೆದಿಡುತ್ತದೆ. ಎಂ. ರಾಘವಾಚಾರಿ ಎಂಬವರ ‘ಬೆಳಕು ಹಂಚುತ್ತಿರುವವರು’ ಕವಿತೆ ವೇಮುಲಾ ಸಾವು ಭಾರತವನ್ನು ಬದಲಿಸುತ್ತದೆ ಎಂಬ ಆಶಾದಾಯಕ ಚಿಂತನೆಯನ್ನು ಬಿತ್ತುತ್ತದೆ. ಡಿ. ಉದಯಭಾನು ಅವರ ‘ಹೊಲಗೇರಿಯೇ ಮುಂಜಾವಾಗಿ..’ ಕವಿತೆ ದಲಿತರ ಎದೆಯೊಳಗಿನ ಆಕ್ರೋಶವನ್ನು ತೆರೆದಿಡುತ್ತದೆ. ಉದಯಭಾನು ಅವರ ಇನ್ನೊಂದು ಲೇಖನ ‘ಹತ್ಯೆಗಳ ಚೌರಸ್ತಾ ಸೆಂಟ್ರಲ್ ಯೂನಿವರ್ಸಿಟಿ’ ಲೇಖನ, ವಿಶ್ವವಿದ್ಯಾನಿಲಯಗಳ ರಾಜಕೀಯಕ್ಕೆ ರೋಹಿತ್ ಬಲಿಯಾದ ಬಗೆಯನ್ನು ತೆರೆದಿಡುತ್ತದೆ. ಇಡೀ ಕೃತಿ ಬೇರೆ ಬೇರೆ ನೆಲೆಗಳಲ್ಲಿ ರೋಹಿತ್ ಸಾವನ್ನು ನೋಡುತ್ತಾ, ಮತ್ತೊಂದು ದಲಿತ ಆಂದೋಲನ ಈ ನೆಲೆದಿಂದ ಚಿಮ್ಮಬೇಕಾದ ಅಗತ್ಯವನ್ನು ಎತ್ತಿ ಹಿಡಿಯುತ್ತದೆ. ಆದುದರಿಂದ ಈ ಕೃತಿಯಲ್ಲಿ ವೇಮುಲಾ ಒಂದು ನೆಪಮಾತ್ರ. ನವ ವಿದ್ಯಾರ್ಥಿ ಚಳವಳಿ, ದಲಿತ ಚಳವಳಿಯ ಸಾಧ್ಯತೆಗಳನ್ನು, ಅಗತ್ಯಗಳನ್ನು ವಿವರವಾಗಿ ಚರ್ಚಿಸುತ್ತದೆ.

ಲಡಾಯಿ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 120 ರೂಪಾಯಿ.

share
-ಕಾರುಣ್ಯಾ
-ಕಾರುಣ್ಯಾ
Next Story
X