ಹನೂರು: ಬಾಡಿಗೆ ಪಾವತಿಸದ ಅಂಡಿಗಳಿಗೆ ಬೀಗ

ಹನೂರು,ಡಿ.30: ಬಾಡಿಗೆ ಪಾವತಿಸದ ಅಂಡಿಗಳಿಗೆ ಪಟ್ಟಣ ಪಂಚಾಯತಿ ಅಧಿಕಾರಿಗಳ ತಂಡ ವಾಣಿಜ್ಯ ಮಳಿಗೆಯ ಪ್ರತಿ ಅಂಗಡಿಗೂ ತೆರಳಿ ಅಂಗಡಿಗಳಿಗೆ ಬೀಗ ಜಡಿದ ಪ್ರಸಂಗ ನೆಡೆಯಿತು .
ನಂತರ ಸುದ್ದಿಗಾರರೂಂದಿಗೆ ಮಾತನಾಡಿದ ಪಟ್ಟಣ ಪಂಚಾಯತ್ ಮುಖ್ಯಾದಿಕಾರಿ ಎಸ್.ಡಿ.ಮೋಹನ್ಕೃಷ್ಣ, ಪ.ಪಂ ಅಧ್ಯಕ್ಷೆ ಮಮತಾ ಮಹಾದೇವು ಅಧ್ಯಕ್ಷತೆಯಲ್ಲಿ ಇಂದು ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಏರ್ಪಡಿಸಲಾಗಿತ್ತು. ಸಭೆ ಆರಂಭವಾಗುತ್ತಿದ್ದಂತೆ ಪಟ್ಟಣ ಪಂಚಾಯತ್ ನ ಸರ್ವ ಸದಸ್ಯರು ಪಟ್ಟಣ ಪಂಚಾಯತ್ ನಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಪಟ್ಟಣ ಪಂಚಾಯತ್ ಗೆ ಬರಬೇಕಿದ್ದ ಬಾಡಿಗೆ ರೂಪದ ಲಕ್ಷಾಂತರ ರೂಪಾಯಿ ಆದಾಯವನ್ನು ವಸೂಲಿ ಮಾಡುವಲ್ಲಿ ವಿಫಲರಾಗಿದ್ದೀರಿ. ನೆಪಮಾತ್ರಕ್ಕೆ ಬಾಡಿಗೆದಾರರಿಗೆ ನೋಟೀಸ್ ವಿತರಿಸಲಾಗಿದ್ದು ಪ.ಪಂನ ನೋಟೀಸಿಗೆ ಕಿಮ್ಮತ್ತಿನ ಬೆಲೆ ನೀಡುತ್ತಿಲ್ಲ. ಆದುದರಿಂದ ಕೂಡಲೇ ವಾಣಿಜ್ಯ ಮಳಿಗೆಗಳಿಗೆ ಬೀಗ ಹಾಕುವಂತೆ ಒತ್ತಾಯಿಸಿದರು. ಪಟ್ಟಣ ಪಂಚಾಯತ್ ನ ಸರ್ವ ಸದಸ್ಯರ ಒಮ್ಮತದಿಂದ ಬೆಂಬಲ ವ್ಯಕ್ತಪಡಿದ್ದಾರೆ. ಆದ್ದರಿಂದ ಪಟ್ಟಣ ಪಂಚಾಯತ್ ನ ಮಳಿಗೆಗಳಿಗೆ ಅಧಿಕಾರಿಗಳೆಲ್ಲಾ ಜಮಾಯಿಸಿ ಬಾಡಿಗೆ ಪಾವತಿಗೆ ಮುಂದಾಗಿದ್ದೇವೆ ಎಂದರು
ಸುಮಾರು ಅಂದಾಜು 25ಲಕ್ಷ ಬಾಡಿಗೆ ಹಣ ಬಾಕಿ: ಪಟ್ಟಣ ಪಂಚಾಯತ್ ತನ್ನದೇ ಆದ ಆದಾಯ ಮೂಲವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ 2.27ಕೋಟಿ ವೆಚ್ಚದಲ್ಲಿ ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ 34 ವಾಣಿಜ್ಯ ಮಳಿಗೆಗಳು ಹಾಗೂ ಹನೂರು ಪಟ್ಟಣದ ನಾನಾ ಭಾಗದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಅದರಿಂದ ಬರುವ ಆದಾಯ ವಸೂಲಾಗದ ಕಾರಣ ಅಂಗಡಿ ಮಳಿಗೆಗಳಿಂದ ಸುಮಾರು 20 ರಿಂದ 25 ಲಕ್ಷ ಬಾಡಿಗೆ ಹಣ ಬಾಕಿ ಇದೆ ಎಂದರು.
ಬಾಡಿಗೆ ವಸೂಲಿಗೆ ತೆರಳಿ ಬೀಗ ಜಡಿದ ಅಧಿಕಾರಿಗಳು : ಪ.ಪಂ ಸದಸ್ಯರ ಒಕ್ಕೊರಲ ನಿರ್ಧಾರಕ್ಕೆ ತಲೆಬಾಗಿದ ಪಟ್ಟಣ ಪಂಚಾಯತ್ ಅಧಿಕಾರಿಗಳಾದ ರಮೇಶ್, ನಂಜುಂಡಶೆಟ್ಟಿ, ಮಾದೇಶ್, ಭೈರಪ್ಪ ಮತ್ತಿತರ ಅಧಿಕಾರಿಗಳ ತಂಡ ವಾಣಿಜ್ಯ ಮಳಿಗೆಯ ಪ್ರತಿ ಅಂಗಡಿಗೂ ತೆರಳಿ ಅಂಗಡಿಗಳಿಗೆ ಬೀಗ ಜಡಿದರು. ಈ ವೇಳೆ ಕೆಲ ಬಾಡಿಗೆದಾರರು ಒಂದೆರೆಡು ತಿಂಗಳ ಬಾಡಿಗೆ ಪಾವತಿಸಿದರು. ಮತ್ತೆ ಕೆಲವರು ಕಾಲಾವಕಾಶ ಪಡೆದರು. ಈ ಸಂಬಂಧ ಅಧಿಕಾರಿಗಳ ತಂಡದ ಜೊತೆ ಚರ್ಚಿಸಿದ ಕೆಲ ಬಾಡಿಗೆದಾರರು 3-4 ದಿನಗಳಲ್ಲಿ ಪಾವತಿಸುವುದಾಗಿ ಮನವಿ ಮಾಡಿದರು. ಆದರೆ ಅಧಿಕಾರಿಗಳು ಕ್ಯಾರೆ ಎನ್ನದೆ ಬೀಗ ಜಡಿದರು.
ಇದೇ ಸಂದರ್ಭದಲ್ಲಿ ಪ.ಪಂ ಮುಖ್ಯಾಧಿಕಾರಿ ಎಸ್.ಡಿ.ಮೋಹನ್ಕೃಷ್ಣ, ಸದಸ್ಯರಾದ ರಾಜುಗೌಡ, ಬಾಲರಾಜ್ನಾಯ್ಡು, ರಮೇಶ್ನಾಯ್ಡು, ಮಹದೇವಮ್ಮ, ಸುಮತಿ ಮಾದೇಶ್, ವೆಂಕಟೇಶ್, ನಾಗಣ್ಣ, ಬಸವರಾಜು, ಕಿರಿಯ ಅಭಿಯಂತರ ಶಿವಶಂಕರ್ ಆರಾಧ್ಯ, ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.







