Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಚಮಕ್: ಚಮ್ಕಾಯ್ಸಿ ಚಿಂದಿ ಉಡಾಯಿಸಿ

ಚಮಕ್: ಚಮ್ಕಾಯ್ಸಿ ಚಿಂದಿ ಉಡಾಯಿಸಿ

ಶಶಿಶಶಿ31 Dec 2017 12:09 AM IST
share
ಚಮಕ್: ಚಮ್ಕಾಯ್ಸಿ ಚಿಂದಿ ಉಡಾಯಿಸಿ

ಇತ್ತೀಚೆಗೆ ಮದುವೆಯ ಮೊದಲಿನ ಸಾದಾ ಪ್ರೇಮಕತೆಗಳಿಗಿಂತ ಮದುವೆಯ ಬಳಿಕದ ಬದುಕೇ ವಿಭಿನ್ನ ಎನ್ನುವಂಥ ಚಿತ್ರಗಳು ಬರುತ್ತಿವೆ. ಕನ್ನಡ ಸಿನೆಮಾಗಳಲ್ಲಿ ಅಪರೂಪ ಎನಿಸುವಂಥ ಈ ವಿಚಾರವನ್ನೇ ನಿರ್ದೇಶಕರು ಕತೆಯಾಗಿ ಆಯ್ಕೆ ಮಾಡಿದ್ದಾರೆ. ತಾನು ಹೇಗಿದ್ದರೂ ಪರವಾಗಿಲ್ಲ, ಆದರೆ ಪತ್ನಿಯಾಗಿ ಬರುವವಳು ಭಾರತೀಯ ನಾರಿಯಂತೆ ಇರಬೇಕು ಎಂಬ ಕಲ್ಪನೆ ಬಹುತೇಕ ಪುರುಷರಲ್ಲಿ ಇದೆ. ಆದರೆ ಅದೇ ಭಾವನೆ ಹುಡುಗಿಯಲ್ಲೂ ಇದ್ದಾಗ ಹೇಗಿರುತ್ತದೆ ಎನ್ನುವುದೇ ಚಿತ್ರದ ಒಂದೆಳೆ ಕತೆ ಎನ್ನಬಹುದು.

ಮನರಂಜನೆಗಾಗಿ ವೀಕೆಂಡ್ ಪಾರ್ಟಿ ಎನ್ನುವುದು ಇಂದು ನಗರದ ಹುಡುಗಿಯರಲ್ಲಿ ಸಾಮಾನ್ಯ ವಿಚಾರ. ಅಂಥ ಹುಡುಗಿ ಖುಷಿ, ತನ್ನ ಗಂಡನ ಮುಂದೆ ಗರತಿ ಗೌರಮ್ಮಳಂತೆ ಲುಕ್ ಕೊಡುತ್ತಿರುತ್ತಾಳೆ. ಅದೇ ವೇಳೆ ಖುಷಿಯ ಗಂಡ ಖುಷ್ ಕೂಡ ಆಕೆಯೆದುರು ದುರಭ್ಯಾಸ ಇರದ ಗಂಡನಾಗಿ ಕಾಣಿಸಿಕೊಂಡು ಸುಳ್ಳು ಹೇಳುವ ವೀಕೆಂಡ್ ಕುಡುಕನಾಗಿರುತ್ತಾನೆ. ಈ ಇಬ್ಬರ ಸತ್ಯ ಪರಸ್ಪರ ಅರಿವಾದಾಗ ಏನಾಗುತ್ತದೆ ಎನ್ನುವುದೇ ಚಿತ್ರದ ಮುಖ್ಯ ಕತೆ. ಇನ್ನೇನಾಗುತ್ತದೆ? ಜಗಳವಾಗಿ ವಿಚ್ಛೇದನವಾಗುತ್ತದೆ ಎಂದು ನೀವು ಅಂದುಕೊಂಡರೆ ಅದು ತಪ್ಪು. ಅದೇ ಕಾರಣಕ್ಕೆ ಚಿತ್ರ ಇತರ ಸಿನೆಮಾಗಳಿಗಿಂತ ವಿಭಿನ್ನವಾಗಿ ಆಕರ್ಷಿಸುತ್ತಾ ಹೋಗುತ್ತದೆ. ಚಿತ್ರದಲ್ಲಿ ಖುಷಿಯಾಗಿ ರಶ್ಮಿಕಾ ಮಂದಣ್ಣ ಮತ್ತು ಡಾಕ್ಟರ್ ಖುಷ್ ಪಾತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಬಳಿಕ ಮತ್ತೊಮ್ಮೆ ಪ್ರೇಕ್ಷಕರ ಮನಕ್ಕೆ ಲಗ್ಗೆ ಇಡುವಂಥ ಪಾತ್ರ ನಿರ್ವಹಿಸಿದ್ದಾರೆ.

ಸ್ವತಃ ಡಬ್ ಮಾಡಿರುವುದರಿಂದಾಗಿ ಅವರ ಕಂಠದಲ್ಲಿನ ಹೊಸತನ ಸಂಭಾಷಣೆಗೆ ರಂಗು ನೀಡಿದೆ. ಗಣೇಶ್ ಈ ಹಿಂದಿನ ಚಿತ್ರಗಳಿಗಿಂತ ಮಾಗಿದ ನಟನೆಯನ್ನು ನೀಡಿದ್ದಾರೆ! ಚಿತ್ರದ ಮೂಡ್‌ಗೆ ತಕ್ಕಂಥ ಹಾಡುಗಳಿವೆ. ಛಾಯಾಗ್ರಹಣ ಆತ್ಮೀಯವೆನಿಸುತ್ತದೆ. ಉಳಿದಂತೆ ತಾರಾಗಣದಲ್ಲಿ ಸುಮಿತ್ರಾ, ಸಾಧು ಕೋಕಿಲ ಮೊದಲಾದವರಿದ್ದಾರೆ. ಚಿತ್ರದ ಆರಂಭದಲ್ಲಿ ನಾಯಕನ ತಾಯಿಯನ್ನು ಧಾರಾವಾಹಿ ಪ್ರಿಯೆಯಾಗಿ ತೋರಿಸಿದಾಗ, ಸುನಿ ಮತ್ತೊಂದು ಅಲಮೇಲಮ್ಮ ಮಾಡಿದ್ದಾರೇನೋ ಎಂಬ ಸಂದೇಹ ಮೂಡುವಂತಿತ್ತು. ಆದರೆ ಕೆಲವೇ ಕ್ಷಣದಲ್ಲಿ ಕತೆ ಬೇರೆಯೇ ಆಯಾಮ ಪಡೆದುಕೊಳ್ಳುತ್ತದೆ. ಸದಾ ತುಂಟತನದ ಸಂಭಾಷಣೆಗಳಿಂದ ಕೆಣಕುವ ಸುನಿ ಚಿತ್ರದಲ್ಲಿ ನಾಯಕನಿಗೆ ಪ್ರಸೂತಿ ತಜ್ಞನ ಪಾತ್ರ ನೀಡಿದ್ದಾರೆ. ಅಲ್ಲಿಗೆ ಅವರ ಸಂಭಾಷಣೆಯ ವಿಚಾರದಲ್ಲಿ ಇನ್ನಷ್ಟು ಅವಕಾಶಗಳು ಹೆಚ್ಚಿದಂತಿವೆ. ಗಂಭೀರವಾಗಿ ನೋಡಿದರೆ ಚಿತ್ರದಲ್ಲಿ ಸಾಕಷ್ಟು ಲಾಜಿಕ್‌ಗಳು ಮಿಸ್ ಹೊಡೆದಂತೆ ಕಾಣಿಸಬಹುದು. ಆದರೆ ಅದಕ್ಕಿಂತ ಮನರಂಜನೆ ಮುಖ್ಯವೆಂದಾದರೆ ಖಂಡಿತವಾಗಿ ಕುಟುಂಬ ಸಮೇತ ನೋಡಬಹುದಾದ ಚಿತ್ರ ಇದು.

ಒಟ್ಟಿನಲ್ಲಿ ಸಿಂಪಲ್ ಸುನಿ ತಮ್ಮ ಎಂದಿನ ಶೈಲಿಯಂತೆ ಗಂಭೀರ ಸಮಸ್ಯೆಯೊಂದನ್ನು ಕೂಡ ಚಿತ್ರದಲ್ಲಿ ಸಿಂಪಲಾಗಿ ಹೇಳಿದ್ದಾರೆ.


ತಾರಾಗಣ: ಗಣೇಶ್, ರಶ್ಮಿಕಾ ಮಂದಣ್ಣ
ನಿರ್ದೇಶಕ: ಸಿಂಪಲ್ ಸುನಿ
ನಿರ್ಮಾಪಕ: ಟಿ ಆರ್ ಚಂದ್ರಶೇಖರ್ 

share
ಶಶಿ
ಶಶಿ
Next Story
X