Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಅಮ್ಮನ ಕಣ್ಣಲ್ಲಿ ವರ್ಣಮಾಲೆ

ಅಮ್ಮನ ಕಣ್ಣಲ್ಲಿ ವರ್ಣಮಾಲೆ

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ2 Jan 2018 6:32 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಅಮ್ಮನ ಕಣ್ಣಲ್ಲಿ ವರ್ಣಮಾಲೆ

ಕನ್ನಡದ ವರ್ಣಮಾಲೆಯನ್ನು ಅಂದರೆ ಅಕ್ಷರಗಳನ್ನು ಬಳುಕುವ ಬಳ್ಳಿಗೆ ಹೋಲಿಸಿದ ಕವಿಗಳಿದ್ದಾರೆ. ಅಕ್ಷರಗಳೇ ಚೆಲುವಿನ ಚಿತ್ತಾರವೆಂದು ಬಣ್ಣಿಸಿದ್ದಾರೆ. ಹಾಗೆಯೇ ಪ್ರತೀ ಅಕ್ಷರವೂ ಒಂದು ಲೇಖನದ ಬೀಜವಾಗಿ ಹೊರಹೊಮ್ಮುವುದನ್ನು ಜ್ಯೋತಿ ಗುರುಪ್ರಸಾದ್ ಅವರ ‘ಕಣ್ಣ ಭಾಷೆ’ ಕೃತಿಯಲ್ಲಿ ನೋಡಬಹುದು. ಅ ದಿಂದ ಹಿಡಿದು ಳದವರೆಗೆ ಒಂದೊಂದು ಅಕ್ಷರದಿಂದ ಹೊಮ್ಮುವ ಪದಗಳನ್ನು ಹಿಡಿದು ಅದಕ್ಕೆ ಹೃದಯಸ್ಪರ್ಶಿ ಟಿಪ್ಪಣಿಗಳನ್ನು ಈ ಕೃತಿಯಲ್ಲಿ ಜ್ಯೋತಿ ಅವರು ನೀಡಿದ್ದಾರೆ. ಮೂಲತಃ ಕವಯಿತ್ರಿಯಾಗಿರುವ ಜ್ಯೋತಿ ಗುರುಪ್ರಸಾದ್ ಕಣ್ಣಲ್ಲಿ ಅಕ್ಷರಗಳು ಪದಗಳಾಗಿ, ವಾಕ್ಯಗಳಾಗಿ, ಲೇಖನಗಳಾಗಿ, ಅಂತಿಮವಾಗಿ ದಿನದ ಬದುಕಾಗಿ ಒಡಮೂಡಿವೆ. ಇದನ್ನು ಹೊಸ ಪ್ರಯೋಗವೆಂದೂ ಕರೆಯಬಹುದು. ಈ ಪ್ರಯೋಗದ ಹಿಂದಿನ ಕಾರಣವನ್ನೂ ಲೇಖಕಿ ಹಂಚಿಕೊಳ್ಳುತ್ತಾರೆ. ‘‘ಅ ಆ ಇ ಈ ಎಂದು, ಅಮ್ಮ ಎಂದು ಐದು ವರ್ಷ ತುಂಬಿದ ಮೇಲೆ ನಾನು ಬರೆಯುತ್ತಾ ಹೋದ ಕನ್ನಡದ ಮುತ್ತಿನ ಮಣಿಗಳು ಇಂದು ನನ್ನ ಅಂತರಂಗದ ಭಾಷೆಯೂ ಆಗಿ, ಕವಿತೆಯಾಗಿ ನನ್ನ ಉಸಿರೊಡನೆ ಬೆರೆತು ಹೋಗಿದೆ’’ ಎನ್ನುತ್ತಾ ವರ್ಣಮಾಲೆಯ ಜೊತೆಗೆ ಲೇಖಕಿಗಿರುವ ಬಂಧವನ್ನು ಕಟ್ಟಿಕೊಡುತ್ತಾರೆ. ಒಂದನೇ ತರಗತಿಯಲ್ಲಿ ನಾವು ಅ ಅಂದರೆ ಅಗಸ, ಈ ಎಂದರೆ ಈಶ ಎಂದು ಓದಿದಂತೆಯೇ ಒಂದೊಂದು ಅಕ್ಷರಕ್ಕೆ ಒಂದೊಂದು ವಸ್ತುವನ್ನು ಜೋಡಿಸಿ ಅದರ ಕುರಿತಂತೆ ಪುಟ್ಟ ಲೇಖನವನ್ನು ಲೇಖಕಿ ಬರೆದಿದ್ದಾರೆ.

ಇಲ್ಲಿ ವರ್ಣಮಾಲೆಗೆ ತಕ್ಕಂತೆಯೇ 46 ಅಕ್ಷರಗಳಿಗೆ ಪೂರಕವಾದ ಲೇಖನಗಳಿವೆ. ಆರ್ ಅಂಕುಸಮಿಟ್ಟೊಡಂ, ಇನಿದನಿ, ಈಶ, ಉಷೆ, ಊರ್ಮಿಳೆ, ಋಷಿ, ಎಲೆ, ಏಳು, ಐಶ್ವರ್ಯ, ಒರತೆ, ಓಲೆ, ಔಷಧ, ಅಂಕಣ, ಕವಿತೆ, ಖಡ್ಗ, ಗಮನ, ಘನ, ಚರಕ, ಛಂದ ಹೀಗೆ ಬಗೆ ಬಗೆಯೇ ವಿಷಯಗಳನ್ನು ನೀವು ಎದುರುಗೊಳ್ಳುತ್ತೀರಿ. ಮತ್ತು ಆ ವಿಷಯದ ಕುರಿತಂತೆ ಗದ್ಯ, ಪದ್ಯ ಸಮ್ಮಿಶ್ರಿತವಾದ ಲೇಖನ ನಿಮ್ಮನ್ನು ಎದುರುಗೊಳ್ಳುತ್ತದೆ. ಅ ಎಂದರೆ ಅಮ್ಮ ಎನ್ನುವಂತೆ ಇಲ್ಲಿರುವ ಪ್ರತೀ ಲೇಖನಗಳೂ ಅಮ್ಮನ ಹೃದಯದಿಂದ ಹುಟ್ಟಿರುವಂತಹದು. ಹೃದಯದಿಂದ ಹೊರಹೊಮ್ಮಿರುವಂತಹದು. ಪ್ರತೀ ಶಬ್ದಗಳ ವಿವರಣೆಯಲ್ಲಿ ವ್ಯಾಕರಣೀಯ ಶಿಸ್ತು, ಭಾಷಾ ವಿಜ್ಞಾನಿಯ ಕ್ರಿಯಾಶೀಲತೆ, ಕವಿಯ ಸೃಜನ ಶೀಲತೆ, ದಾರ್ಶನಿಕನ ಚಿಂತನ, ಸಮಾಜ ವಿಜ್ಞಾನಿಯ ಹೊರನೋಟ, ಸಾಂಸ್ಕೃತಿಕ ಮಾನವ ಶಾಸ್ತ್ರಜ್ಞನ ಒಳನೋಟ ಮತ್ತು ಜನಪದರ ಕುತೂಹಲ ಹಾಸು ಹೊಕ್ಕಾಗಿದೆ.

ಹೊಸ ಸಂಜೆ ಪ್ರಕಾಶನ, ಕಾರ್ಕಳ ಈ ಕೃತಿಯನ್ನು ಹೊರತಂದಿದೆ. 116 ಪುಟಗಳ ಈ ಕೃತಿಯ ಮುಖಬೆಲೆ 140 ರೂಪಾಯಿ. ಆಸಕ್ತರು 93423 26655ಕ್ಕೆ ದೂರವಾಣಿಯನ್ನು ಸಂಪರ್ಕಿಸಬಹುದು.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
-ಕಾರುಣ್ಯಾ
-ಕಾರುಣ್ಯಾ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X