ಪಾರಿವಾಳದ ಜೀವಕ್ಕೆ ಮುಳುವಾದ ಗಾಳಿಪಟ
ಮುಂಬಯಿ, ಜ.3: ಗಾಳಿಪಟಕ್ಕೆ ಬಳಸುವ ನೂಲು ಪಕ್ಷಿಗಳ ಜೀವಹರಣಕ್ಕೆ ಕಾರಣವಾಗುತ್ತಿರುವುದು ತಿಳಿದಿದ್ದರೂ ಮೋಜಿಗಾಗಿ ಇದನ್ನು ಬಳಸುವುದರಿಂದ ಅದೆಷ್ಟು ಪಕ್ಷಿಗಳು ಜೀವ ತೆರುತ್ತಿವೆ. ಇಂತಹದ್ದೇ ಒಂದು ಘಟನೆ ಇಂದು ಬೆಳಗ್ಗೆ ಪೂರ್ವ ಅಂಧೇರಿಯಲ್ಲಿ ನಡೆದಿದೆ. ಇಲ್ಲಿ ಬಾನೆತ್ತರಕ್ಕೆ ಯಾರೋ ಹಾರಿಸಿದ್ದ ಗಾಳಿಪಟದ ನೂಲು ಕುತ್ತಿಗೆಗೆ ಸಿಲುಕಿ ಪಾರಿವಾಳವೊಂದು ವಿಲವಿಲನೆ ಒದ್ದಾಡಿ ಪ್ರಾಣ ಬಿಟ್ಟಿದೆ.
ದಾರ ಕುತ್ತಿಗೆಗೆ ಸಿಲುಕಿದ್ದರಿಂದಪಾರಿವಾಳ ಒದ್ದಾಡಿ ಪ್ರಾಣ ಕಳಕೊಳ್ಳುತ್ತಿದ್ದರೆ ಅಲ್ಲಿ ಸೇರಿದ್ದ ಜನರು ಅದನ್ನು ಪಾರು ಮಾಡುವ ಬದಲು ಅದರ ಪ್ರಾಣ ಸಂಕಟವನ್ನು ಕಣ್ತುಂಬಾ ನೋಡಿ ಆನಂದ ಪಡುತ್ತಿದ್ದುದ್ದು ಮಾತ್ರ ದುರಾದೃಷ್ಟವೇ ಸರಿ.
Next Story