Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಅರುಣಾಚಲಪ್ರದೇಶ ಪ್ರವೇಶಿಸಿದ ಚೀನಾದ...

ಅರುಣಾಚಲಪ್ರದೇಶ ಪ್ರವೇಶಿಸಿದ ಚೀನಾದ ರಸ್ತೆ ನಿರ್ಮಾಣ ತಂಡ: ಸಲಕರಣೆಗಳನ್ನು ವಶಪಡಿಸಿಕೊಂಡ ಭಾರತ

ವಾರ್ತಾಭಾರತಿವಾರ್ತಾಭಾರತಿ4 Jan 2018 9:28 PM IST
share
ಅರುಣಾಚಲಪ್ರದೇಶ ಪ್ರವೇಶಿಸಿದ ಚೀನಾದ ರಸ್ತೆ ನಿರ್ಮಾಣ ತಂಡ: ಸಲಕರಣೆಗಳನ್ನು ವಶಪಡಿಸಿಕೊಂಡ ಭಾರತ

ಹೊಸದಿಲ್ಲಿ/ಗುವಾಹಟಿ, ಜ. 4: ಸಿಕ್ಕಿಂ-ಭೂತಾನ್ ಗಡಿಯಲ್ಲಿರುವ ಡೋಕಾ ಲಾದಲ್ಲಿ ಎರಡು ರಾಷ್ಟ್ರಗಳ ಬಿಕ್ಕಟ್ಟು ಶಮನಗೊಂಡ ಎರಡು ತಿಂಗಳ ಬಳಿಕ ಅರುಣಾಚಲ ಪ್ರದೇಶ ಟುಟಿಂಗ್ ಪ್ರದೇಶದ ನೈಜ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಭಾಗದಲ್ಲಿ ಚೀನಾ ಪಡೆಯ ರಸ್ತೆ ನಿರ್ಮಾಣ ಪ್ರಯತ್ನವನ್ನು ಭಾರತೀಯ ಸೇನೆ ಹಾಗೂ ಇಂಡೊ ಟಿಬೆಟಿನ್ ಗಡಿ ಪೊಲೀಸ್ ವಿಫಲಗೊಳಿಸಿದೆ.

ಚೀನ ಕಾರ್ಮಿಕರಿಗೆ ನೈಜ ಗಡಿ ನಿಯಂತ್ರಣ ರೇಖೆಯ ಅವರ ಭಾಗಕ್ಕೆ ಮರಳಲು ತಿಳಿಸಲಾಯಿತು, ಅವರ ರಸ್ತೆ ನಿರ್ಮಾಣ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಯಿತು. ಆದಾಗ್ಯೂ, ನೈಜ ನಿಯಂತ್ರಣ ರೇಖೆಯ ನಿರ್ಮಾಣ ನಿವೇಶನದಲ್ಲಿ ಎರಡೂ ಸೇನೆಗಳು ಮುಖಾಮುಖಿಯಾಗಿರುವುದನ್ನು ಮೂಲಗಳು ನಿರಾಕರಿಸಿವೆ. ಈ ಘಟನೆ ಸಂದರ್ಭ ಭಾರತ ಹಾಗೂ ಚೀನ ಯೋಧರು ನೇರವಾಗಿ ಮುಖಾಮುಖಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಘಟನೆ ಡಿಸೆಂಬರ್ 26ರಂದು ಸಂಭವಿಸಿದೆ. ಅಂದು ಚೀನ ನಾಗರಿಕರ ರಸ್ತೆ ನಿರ್ಮಾಣ ತಂಡ ಯೋಧರಿಲ್ಲದೆ ಅರುಣಾಚಲ ಪ್ರದೇಶದ ಟುಟಿಂಗ್ ಪ್ರದೇಶದ ಬಿಶಿಂಗ್ ಸಮೀಪ ನೈಜ ನಿಯಂತ್ರಣ ರೇಖೆಯ ಭಾರತೀಯ ಭಾಗವನ್ನು ದಾಟಿದರು. ಈ ಪ್ರದೇಶ ಟಿಬೆಟ್‌ನಿಂದ ಅರುಣಾಚಲ ಪ್ರದೇಶಕ್ಕೆ ಹರಿಯುತ್ತಿರುವ ಸಿಯಾಂಗ್ ನದಿಯ ಕಪಾಂಗ್‌ಲಾ ಸಮೀಪ ಇದೆ. ಆದರೆ, ಚೀನ ಕೆಲಸಗಾರರು ಈ ನದಿಯನ್ನು ದಾಟಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಪ್ರದೇಶದಲ್ಲಿರುವ ನಿವಾಸಿಗಳು ಮೊದಲ ಬಾರಿಗೆ ಚೀನ ರಸ್ತೆ ನಿರ್ಮಿಸುವುದನ್ನು ಗಮನಿಸಿದರು. ಅನಂತರ ಐಟಿಬಿಪಿಗೆ ಮಾಹಿತಿ ನೀಡಿದರು.

ಡಿಸೆಂಬರ್ 28ರಂದು ಐಟಿಬಿಪಿ ಹಾಗೂ ಸೇನೆ ಜಂಟಿ ಗಸ್ತು ನಡೆಸಿತು ಹಾಗೂ ತಮ್ಮ ಭೂಭಾಗಕ್ಕೆ ಹಿಂದಿರುಗುವಂತೆ ಚೀನ ಕೆಲಸಗಾರರಿಗೆ ತಿಳಿಸಿತು. ಎರಡು ಜೆಸಿಬಿ ಹಾಗೂ ನೀರು ಸಿಂಪಡಿಸುವ ಸಾಧನ ವಶಪಡಿಸಿಕೊಂಡಿತು. ಟಯರ್‌ಗಳನ್ನು ಉರಿಸಿತು. ಜೆಸಿಬಿ ಚೈನನ್ನು ಬೇರ್ಪಡಿಸಿತು. ಈ ಪ್ರದೇಶಕ್ಕೆ ಬ್ಯಾರಿಕೇಡ್ ಅವಳವಡಿಸಲಾಯಿತು ಹಾಗೂ ಐಟಿಬಿಪಿ ಹಾಗೂ ಸೇನೆ ಜಂಟಿಯಾಗಿ ಕಾವಲು ನಡೆಸಿತು ಎಂದು ಸೇನಾ ಮೂಲಗಳು ತಿಳಿಸಿವೆ. ಎರಡೂ ರಾಷ್ಟ್ರಗಳ ನಡುವಿನ ಸ್ಥಾಪಿತ ಸಂಯೋಜನಾ ಕಾರ್ಯವಿಧಾನದ ಮೂಲಕ ಈ ವಿವಾದ ಪರಿಹರಿಸಲಾಗುತ್ತಿದೆ. ಆದಾಗ್ಯೂ, ಚೀನದ ಸಲಕರಣೆಗಳನ್ನು ಹಿಂದಿರುಗಿಸಲು ಯಾವುದೇ ಸಮಯ ಮಿತಿ ನೀಡಲು ಭಾರತ ನಿರಾಕರಿಸಿದೆ ಎಂದು ಮೂಲಗಳು ತಿಳಿಸಿವೆ.

ಚೀನಾ ರಸ್ತೆ ನಿರ್ಮಾಣ ತಂಡ 12 ಅಡಿ ಅಗಲದ, 1 ಕಿ.ಮೀ ಉದ್ದದ ರಸ್ತೆಯನ್ನು ಭಾರತೀಯ ಪ್ರದೇಶದೊಳಗೆ ನಿರ್ಮಿಸುತ್ತಿತ್ತು. ಪರ್ವತ ಪ್ರದೇಶದಲ್ಲಿ ರಸ್ತೆ ವಕ್ರವಾಗಿತ್ತು. ಇದರಿಂದಾಗಿ ಈ ರಸ್ತೆ ಸುಮಾರು 400 ಮೀಟರ್ ಅರುಣಾಚಲಪ್ರದೇಶದ ಒಳಗೆ ಬಂದಿತ್ತು.

‘ಭಾರತ-ಚೀನಾ ಸೇನೆಗಳು ಮುಖಾಮುಖಿಯಾಗಿಲ್ಲ’

ಅರುಣಾಚಲ ಪ್ರದೇಶದ ಟುಟಿಂಗ್‌ನಲ್ಲಿ ಚೀನದೊಂದಿಗಿನ ಬಿಕ್ಕಟ್ಟನ್ನು ಭಾರತೀಯ ಸೇನೆ ನಿರಾಕರಿಸಿದೆ. ನೈಜ ನಿಯಂತ್ರಣ ರೇಕೆಯ ಭಾರತೀಯ ಭಾಗದಲ್ಲಿ ಕಳೆದ ವಾರ ಚೀನ ನಾಗರಿಕರ ಗುಂಪು ರಸ್ತೆ ನಿರ್ಮಿಸುವುದನ್ನು ತಡೆಯಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಬಿಕ್ಕಟ್ಟು ಸ್ಥಳದಲ್ಲಿ ಎರಡೂ ಸೇನೆ ಮುಖಾಮುಖಿಯಾಗಿಲ್ಲ. ಭಾರತೀಯ ಸೇನೆ ಹಾಗೂ ಪೀಪಲ್ಸ್ ಲಿಬರೇಶನ್

ಸೇನೆಯ ನಡುವೆ ನೇರ ಮುಖಾಮುಖಿಯಾಗಿಲ್ಲ ಎಂದು ಸೇನಾ ಮೂಲಗಳು ತಿಳಿಸಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X