Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಹಾಡೊಂದರ ಸಾಲಿನ ಹಿಂದೆ.....

ಹಾಡೊಂದರ ಸಾಲಿನ ಹಿಂದೆ.....

‘ಪರ್ದಾ ಹೈ.. ಪರ್ದಾ... ಹೈ...’’ ಕಾಡುವ ಹಾಡಿನ ಹಿಂದಿದೆ ಹೀಗೊಂದು ರೋಚಕ ಕತೆ!

ಎ.ಎಂ.ಹನೀಫ್, ಅನಿಲಕಟ್ಟೆಎ.ಎಂ.ಹನೀಫ್, ಅನಿಲಕಟ್ಟೆ5 Jan 2018 12:03 AM IST
share
ಹಾಡೊಂದರ ಸಾಲಿನ ಹಿಂದೆ.....

ಭಾರತೀಯ ಚಿತ್ರರಂಗದ ಮಹಾನ್ ಗಾಯಕರಲ್ಲಿ ಒಬ್ಬರಾದ ಮುಹಮ್ಮದ್ ರಫಿ ಬಗ್ಗೆ ಗೊತ್ತಿಲ್ಲದವರು ಯಾರಿದ್ದಾರೆ. ಇತ್ತೀಚೆಗಷ್ಟೇ (ಡಿ.24) ಸಂಗೀತ ಪ್ರೇಮಿಗಳು ಪದ್ಮಶ್ರೀ ಪುರಸ್ಕೃತ ಗಾನಲೋಕದ ದಿಗ್ಗಜನ 93ನೇ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸಿದ್ದರು. ಕನ್ನಡ, ಕೊಂಕಣಿ, ಮಲಯಾಳಂ ಸೇರಿದಂತೆ 14 ಭಾರತೀಯ ಹಾಗೂ 4 ವಿದೇಶಿ ಭಾಷೆಗಳಲ್ಲಿ ಹಾಡಿರುವ ರಫೀ ಜಿ ತನ್ನ ಸುಮಧುರ ಕಂಠದಿಂದ 26,000ಕ್ಕಿಂತಲೂ ಅಧಿಕ (ಆದರೆ ಅಧಿಕೃತ ದಾಖಲೆಗಳಿರುವುದು 7,400 ಹಾಡುಗಳದ್ದು ಮಾತ್ರ) ಗೀತೆಗಳಿಗೆ ಜೀವ ತುಂಬಿದ್ದಾರೆ. ಅವರ ಜನಪ್ರಿಯ ಗೀತೆಗಳ ಪೈಕಿ ಸದಾ ನೆನಪಾಗಿ ಕಾಡುವ ಹಾಡುಗಳು ಅಪಾರ. ಅವುಗಳಲ್ಲೊಂದು ‘‘ಪರ್ದಾ ಹೈ ಪರ್ದಾ...’’ ಎಂಬ ಹಿಂದಿ ಖವಾಲಿ.

‘‘ಪರ್ದಾ ಹೈ ಪರ್ದಾ...’’ 1977ರಲ್ಲಿ ತೆರೆಕಂಡ ‘ಅಮರ್ ಅಕ್ಬರ್ ಆಂಟ್ಯನಿ’ ಹಿಂದಿ ಚಲನಚಿತ್ರದ ಗೀತೆ. ಮುಹಮ್ಮದ್ ರಫಿಗೆ ಸಾಕಷ್ಟು ಹೆಸರು ತಂದಿತ್ತ ಹಾಡುಗಳಲ್ಲಿ ಇದೂ ಒಂದು. 1977ರಲ್ಲಿ ‘ಬಿನಾಕಾ ಗೀತ್‌ಮಾಲ್’ ಹಿಟ್‌ಲಿಸ್ಟ್‌ನಲ್ಲಿ ಇದು ದ್ವಿತೀಯ ಸ್ಥಾನದ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಹಾಡಿಗಾಗಿ ರಫೀ 1977ರ ಫಿಲ್ಮ್‌ಫೇರ್ ಅತ್ಯುತ್ತಮ ಗಾಯಕ ಪ್ರಶಸ್ತಿಗೂ ಹೆಸರಿಸಲ್ಪಟ್ಟಿದ್ದರು. ಆ ಕಾಲದಲ್ಲಿ ದಕ್ಷಿಣ ಏಶ್ಯದ ಅತ್ಯುತ್ತಮ ಹಾಡುಗಳಲ್ಲಿ ಒಂದಾಗಿಯೂ ಜನಪ್ರಿಯವಾಗಿತ್ತು. ಆನಂದ್ ಬಕ್ಷಿ ಅವರ ಸಾಹಿತ್ಯದ ಈ ಗೀತೆಗೆ ಸಂಗೀತ ಸಂಯೋಜನೆ ಮಾಡಿದವರು ಖ್ಯಾತ ಸಂಗೀತ ನಿರ್ದೇಶಕ ಲಕ್ಷ್ಮೀಕಾಂತ್ ಪ್ಯಾರೇಲಾಲ್. 1977ನೆ ಸಾಲಿನ ಅತ್ಯುತ್ತಮ ಸಂಗೀತ ನಿರ್ದೇಶನಕ್ಕಿರುವ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಲಕ್ಷ್ಮೀಕಾಂತ್‌ರಿಗೆ ‘ಅಮರ್ ಅಕ್ಬರ್ ಆಂಟ್ಯನಿ’ ತಂದಿತ್ತಿತ್ತು.

ಈ ರೀತಿ ಭರ್ಜರಿ ಸದ್ದು ಮಾಡಿದ್ದ ‘‘ಪರ್ದಾ ಹೈ.. ಪರ್ದಾ...’’ ಹಾಡಿಗೆ ನೀವು ಕೇಳಿರದ ಸ್ವಾರಸ್ಯಕರ ಹಿನ್ನೆಲೆಯೊಂದಿದೆ. ಎಲ್ಲರೂ ತಿಳಿದಿರುವಂತೆ ಈ ಹಾಡನ್ನು ರಫಿ ಒಬ್ಬರೇ (ಸೋಲೊ ಸಾಂಗ್) ಹಾಡಿದ್ದಲ್ಲ. ರಫಿ ಅವರ ಸಮಕಾಲೀನ ಮತ್ತು ಅಷ್ಟೇ ಖ್ಯಾತ ಗಾಯಕರೊಬ್ಬರೂ ಇದಕ್ಕೆ ಧ್ವನಿಗೂಡಿಸಿದ್ದಾರೆ. ಅದೂ ಮುಹಮ್ಮದ್ ರಫಿಯವರ ಗೆಳೆತನಕ್ಕೆ ಕಟ್ಟುಬಿದ್ದು! ಆದರೆ ಚಿತ್ರದ ಹಾಡಿನ ಟೈಟಲ್ ಕಾರ್ಡ್‌ನಲ್ಲೆಲ್ಲೂ ಮುಹಮ್ಮದ್ ರಫಿ ಅವರ ಹೆಸರು ಬಿಟ್ಟರೆ ಮತ್ತೊಬ್ಬ ಗಾಯಕನ ಹೆಸರು ಕಾಣಿಸದು!

‘ಅಮರ್ ಅಕ್ಬರ್ ಆಂಟ್ಯನಿ’ಯಲ್ಲಿ ನೀತೂ ಸಿಂಗ್ ಅವರನ್ನು ತನ್ನತ್ತ ಸೆಳೆಯಲು ರಿಷಿ ಕಪೂರ್ ‘‘ಪರ್ದಾ ಹೈ ಪರ್ದಾ... ಪರ್ದೆ ಕೇ ಪೀಚೆ... ಪರ್ದೆ ನಶೀನ್ ಹೈ..’’ ಎಂಬ ಖವಾಲಿ ಹಾಡುತ್ತಾ ಪರದೆಯ ಮೇಲೆ ಪ್ರೇಕ್ಷಕರನ್ನು ಮೋಡಿ ಮಾಡುತ್ತಾರೆ. ಆದರೆ ಈ ಗೀತೆಯನ್ನು ಹಾಡುವ ವೇಳೆ ಮುಹಮ್ಮದ್ ರಫಿ ಒಂದು ಪ್ರಮಾದ ಎಸಗಿದ್ದರು!

ಈ ಹಾಡಿನ ಮಧ್ಯದಲ್ಲಿ ಅಮಿತಾಭ್ ಬಚ್ಚನ್‌ಗಾಗಿ ಒಂದೆರಡು ಕಡೆ ಹಾಡುವ ದೃಶ್ಯಗಳಿವೆ. ಅವರು ‘‘ಅಕ್ಬರ್ ತೇರಾ ನಾಮ್ ನಹೀ ಹೈ’’ ಎಂದು ಹಾಡುತ್ತಾರೆ. ಆದರೆ ಈ ಸಾಲನ್ನು ರಫಿ ‘‘ಅಕ್ಬರ್ ಮೇರಾ ನಾಮ್ ನಹೀ ಹೈ’’ ಎಂದು ತಪ್ಪಾಗಿ ಹಾಡಿದ್ದರು. ಹಾಡಿನಲ್ಲಿ ಹಲವು ಬಾರಿ ‘‘ಅಕ್ಬರ್ ಮೇರಾ ನಾಮ್ ನಹೀ ಹೈ’’ ಎಂಬ ಸಾಲುಗಳಿರುವುದರಿಂದ ರಫಿ ಜೀ ಈ ಎಡವಟ್ಟು ಮಾಡಿಕೊಂಡಿದ್ದರು. ರೆಕಾರ್ಡಿಂಗ್ ವೇಳೆ ಸಂಗೀತ ನಿರ್ದೇಶಕ ಲಕ್ಷ್ಮೀಕಾಂತ್ ಪ್ಯಾರೇಲಾಲ್ ಅವರಿಗೂ ಈ ಪ್ರಮಾದ ಅರಿವಿಗೆ ಬಂದಿರಲಿಲ್ಲ. ಅಂತೆಯೇ ರೆಕಾರ್ಡಿಂಗ್ ಪೂರ್ಣಗೊಂಡಿತು. ಮುಂದೆ ಹಾಡಿನ ಚಿತ್ರದ ದೃಶ್ಯಾವಳಿಗೆ ವೀಡಿಯೊ ಸಂಕಲನ ಮಾಡುವ ವೇಳೆ ಈ ‘ಮೇರಾ’, ‘ತೇರಾ’ ಎಡವಟ್ಟು ಗಮನಕ್ಕೆ ಬಂದಿದೆ. ಕೂಡಲೇ ಈ ವಿಚಾರವನ್ನು ರಫಿ ಅವರಿಗೆ ತಿಳಿಸಲಾಯಿತು. ಆದರೆ ಅ್ಟರಲ್ಲಿ ರಫಿ ಲಂಡನ್‌ಗೆ ಹಾರಿಯಾಗಿತ್ತು.

ಇದರಿಂದ ಚಿತ್ರದ ನಿರ್ಮಾಪಕರು ಕಂಗಾಲಾದಾಗ ರಫೀ ಜಿ ಒಂದು ಸಲಹೆ ನೀಡಿದರು. ಅದೇನೆಂದರೆ ತಪ್ಪಾಗಿರುವ ಆ ಒಂದು ಸಾಲನ್ನು ಕಿಶೋರ್ ಕುಮಾರ್ ಅವರಿಂದ ಹಾಡಿಸಿ ಎಂದು ಕೂಲಾಗಿ ಹೇಳಿದರು!. ಇದನ್ನು ಕೇಳಿದ ಸಂಗೀತ ನಿರ್ದೇಶಕರು ಮಾತ್ರ ಕುಳಿತಲ್ಲೇ ಬೆವರಲಾರಂಭಿಸಿದರು. ರಫಿ ಹಾಡಿರುವ ಹಾಡಿನ ಒಂದು ಸಾಲನ್ನು ಅದೂ ಕರೆಕ್ಷನ್‌ಗಾಗಿ ಕಿಶೋರ್ ಕುಮಾರ್‌ರಂತಹ ಗಾಯಕ ಹಾಡುವರೇೀ? ಅದಲ್ಲದೇ ರಫಿ ಅವರಂತೆಯೇ ಖ್ಯಾತರಾಗಿದ್ದ ಕಿಶೋರ್ ಕುಮಾರ್ ಅವರನ್ನು ಈ ಬಗ್ಗೆ ಮಾತನಾಡಿಸುವುದು ಯಾರು? ರಫಿ ಅವರ ಈ ಸಲಹೆ ಚಿತ್ರತಂಡದ ಸಮಸ್ಯೆಯನ್ನು ಪರಿಹರಿಸುವ ಬದಲು ಇನ್ನಷ್ಟು ಜಟಿಲಗೊಳಿಸಿತು.

ಕೊನೆಗೆ ಇದಕ್ಕೊಂದು ಪರಿಹಾರ ಕಾಣದೆ ಸಂಗೀತ ನಿರ್ದೇಶಕರು ಮತ್ತೆ ರಫಿ ಅವರನ್ನು ಸಂಪರ್ಕಿಸಿ ಈ ‘ಧರ್ಮ ಸಂಕಟ’ವನ್ನು ಅವರ ಮುಂದಿಟ್ಟರು. ಕಿಶೋರ್ ಕುಮಾರ್ ಅವರನ್ನು ಹಾಡಲು ಒಪ್ಪಿಸುವಂತೆ ಅವರಲ್ಲೇ ಕೇಳಿಕೊಂಡರು. ಅದರಂತೆ ರಫಿ ಅವರು ಕಿಶೋರ್ ಕುಮಾರ್‌ಗೆ ಕರೆ ಮಾಡಿ ವಿಷಯ ತಿಳಿಸಿದರು. ಗೆಳೆಯ ರಫಿ ಅವರ ಕೋರಿಕೆಯನ್ನು ಅಷ್ಟೇ ಗೌರವದಿಂದ ಮನ್ನಿಸಿದ ಕಿಶೋರ್ ಕುಮಾರ್ ಸ್ಟುಡಿಯೋಗೆ ಆಗಮಿಸಿದರು. ‘‘ಅಕ್ಬರ್ ತೇರಾ ನಾಮ್ ನಹೀ ಹೈ’’ ಎಂಬ ಆ ಒಂದು ಸಾಲನ್ನು ತಿದ್ದಿ ಹಾಡಿದರು. ಹಾಡು ಪೂರ್ಣಗೊಂಡಿತು. ‘ಅಮರ್ ಅಕ್ಬರ್ ಆಂಟ್ಯನಿ’ ಸಿನೆಮಾ ಬಿಡುಗಡೆಗೊಂಡಿತು. ‘‘ಪರ್ದಾ ಹೈ ಪರ್ದಾ... ಪರ್ದೆ ಕೇ ಪೀಚೆ... ಪರ್ದೆ ನಶೀನ್ ಹೈ..’’ ಹಾಡು ಸೂಪರ್ ಹಿಟ್ ಆಯಿತು. ಆದರೆ ‘ಪರ್ದೆ ಕೇ ಪೀಚೆ ಕಿ ಯೇ ಕಹಾನಿ’ ಯಾರ ಅರಿವಿಗೂ ಬರಲಿಲ್ಲ!

*(ಆಧಾರ: ರೇಡಿಯೋ ಮೂಲ)

share
ಎ.ಎಂ.ಹನೀಫ್, ಅನಿಲಕಟ್ಟೆ
ಎ.ಎಂ.ಹನೀಫ್, ಅನಿಲಕಟ್ಟೆ
Next Story
X