Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಕರಿ ಕಣಗಿಲ-ತೆಲುಗು ದಲಿತ ಕಾವ್ಯ

ಕರಿ ಕಣಗಿಲ-ತೆಲುಗು ದಲಿತ ಕಾವ್ಯ

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ4 Jan 2018 6:33 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಕರಿ ಕಣಗಿಲ-ತೆಲುಗು ದಲಿತ ಕಾವ್ಯ

ದಲಿತರು ಬರೆಯಲು ಆರಂಭಿಸಿದ ದಿನದಿಂದಲೇ ಈ ನೆಲದ ನಿಜವಾದ ಮಾತುಗಳು ಹೊರಬರತೊಡಗಿದವು. ಅವುಗಳು ಬರೇ ಬರಹಗಳಲ್ಲ. ಬೆಂಕಿಯ ಕುಲುಮೆಯಿಂದ ಎದ್ದ ಚೂರುಗಳು ಅವು. ಅವುಗಳ ತೀವ್ರತೆ ಹೇಗಿತ್ತು ಎಂದರೆ, ಸಮಾಜ ಬೆಚ್ಚಿ ಬಿತ್ತು. ಸಿದ್ದಲಿಂಗಯ್ಯ ‘ಇಕ್ರಲಾ, ವದೀರ್ಲಾ...’ ಎಂದು ಬರೆದಾಗ, ಛೆ ಛೆ ಕವಿತೆ ಬರೆಯುವ ರೀತಿ ಹೀಗಲ್ಲ ಎಂದು ಮೇಲ್ಜಾತಿಯ ಹಲವು ಬರಹಗಾರರು ಕೈ ಕೈ ಹಿಸುಕಿಕೊಂಡದ್ದಿತ್ತು. ಶಿವರಾಮ ಕಾರಂತರು ಬರೆದ ಚೋಮನ ದುಡಿಗೂ, ದೇವನೂರು ಬರೆದ ಒಡಲಾಳಕ್ಕೂ ಇರುವ ವ್ಯತ್ಯಾಸವನ್ನು ನೋಡಿದ್ದೇವೆ. ದಲಿತನಾಗಿ ಬದುಕಿ ಬರೆಯುವುದಕ್ಕೂ, ಅದನ್ನು ಹೊರಗಿನಿಂದ ನೋಡಿ ಬರೆಯುವುದಕ್ಕೂ ವ್ಯತ್ಯಾಸವಿದೆ ಎನ್ನುವುದನ್ನು ಈ ಎರಡು ಕೃತಿಗಳು ಹೇಳಿದವು. ದಲಿತ ಸಾಹಿತ್ಯ ಬರೇ ಕನ್ನಡದಲ್ಲಿ ಮಾತ್ರವಲ್ಲ ಮರಾಠಿ, ತೆಲುಗಿನಲ್ಲೂ ಕ್ರಾಂತಿಯನ್ನು ಮಾಡಿದೆ. ‘ಕರಿ ಕಣಗಿಲ’ ತೆಲುಗಿನ ದಲಿತ ಕವಿಗಳು ಬರೆದಂತಹ ಕವಿತೆಗಳು. ಇಂಗ್ಲಿಷ್ ಮೂಲದಿಂದ ಇದನ್ನು ಕನ್ನಡಕ್ಕಿಳಿಸಲಾಗಿದೆ. ಇಂಗ್ಲಿಷ್ ಮೂಲದಲ್ಲಿ ಕೆ. ಪುರುಷೋತ್ತಮ್ ಅವರು ಅನುವಾದಿಸಿ ಸಂಪಾದಿಸಿದರೆ, ಅದನ್ನು ಡಾ. ಎಚ್. ಎಸ್. ಅನುಪಮಾ ಅವರು ಕನ್ನಡಕ್ಕಿಳಿಸಿದ್ದಾರೆ. ಬೆನ್ನುಡಿಯಲ್ಲಿ ಹೇಳುವಂತೆ, ತೆಲುಗು ಸಾಹಿತ್ಯವು ವಾಸ್ತವವಾದಿಯಾಗುವಂತೆ ದಲಿತ ಸಾಹಿತ್ಯ ಒತ್ತಾಯಿಸಿತು. ಬೋರು ಹೊಡೆಸುವ ಕಾಲ್ಪನಿಕ ರೋಮ್ಯಾಂಟಿಕ್ ಕವಿತೆಯ ಏಕತಾನತೆ ಮತ್ತು ಪುನರುಜ್ಜೀವನ ಕಾಲದ ನವೋದಯ ಕವಿತೆಯಿಂದ ದೂರ ಸರಿದು, ದಲಿತ ಕವಿತೆ ತನ್ನದೇ ಸ್ಥಾನ ಸೃಷ್ಟಿಸಿಕೊಂಡಿತು. ಸ್ವಾತಂತ್ರೋತ್ತರ ಕಾಲದಲ್ಲಿ ಬೆಚ್ಚಗೆ ಕುಳಿತು ಬರೆಯುತ್ತಿದ್ದ ಓಲೈಕೆ ಕವಿಗಳನ್ನು, ಆರು ಜನ ದಿಗಂಬರ ಕವಿಗಳು ಕಟು ಮಾತುಗಳಲ್ಲಿ ಚಚ್ಚಿ ಬಿಸಾಡಿದರು. ಅದು ತೆಲುಗು ಕವಿತೆಗೆ ಬಹು ಅವಶ್ಯವಿದ್ದ ಒಂದು ತಿರುವನ್ನೊದಗಿಸಿತು. ಸಾಹಿತ್ಯ ಮತ್ತು ಸಮಾಜವನ್ನು ಬೆಸೆಯಿತು. ಕದ್ದನೆಂಬ ಹುಸಿ ಆರೋಪ ಹೊರಿಸಲ್ಪಟ್ಟು, ಮೇಲ್ಜಾತಿಯವರಿಂದ ಜೀವಂತ ಸುಡಲ್ಪಟ್ಟ ದಲಿತ ಹುಡುಗ ಕಂಚಿಕರ್ಲ ಕೋಟೇಶನಿಗೆ ದಿಗಂಬರ ಕವಿಗಳು ತಮ್ಮ 1968ರ ಕವನ ಸಂಗ್ರಹವನ್ನು ಅರ್ಪಿಸಿದರು. ಆನಂತರದ ಮಹಿಳಾ, ದಲಿತ, ಆದಿವಾಸಿ ಇತ್ಯಾದಿ ಅಸ್ಮಿತೆಯ ಚಳವಳಿಗಳಿಗೆ ಇದು ಮುನ್ನುಡಿ ಬರೆಯಿತು.

ಇಲ್ಲಿ ಒಟ್ಟು 39 ಕವಿಗಳಿದ್ದಾರೆ. ಗುರ್ರಂ ಜಾಷುವ, ಕುಸುಮಾ ಧರ್ಮಣ್ಣ, ಬೋಯಿ ಭೀಮಣ್ಣ, ಗದ್ದರ್ ಅವರಿಂದ ಹಿಡಿದು ಕದಿರೆ ಕೃಷ್ಣ, ತೈದಲ ಅಂಜಯ್ಯ, ಐನಲ ಸೈದುಲು ವರೆಗೆ ದಲಿತರ ನೋವುಗಳನ್ನು ಬೇರೆ ಬೇರೆ ರೀತಿಯಲ್ಲಿ ಅಭಿವ್ಯಕ್ತಿಸಿದ್ದಾರೆ. ದಲಿತ ಕವಿತೆಗಳನ್ನು ಅನುವಾದಿಸುವಾಗ ಎದುರಾಗುವ ಅತಿ ದೊಡ್ಡ ಸಮಸ್ಯೆ ಭಾಷೆ. ದೇವನೂರು ಅವರ ಒಡಲಾಳ ಕಾದಂಬರಿಯನ್ನೇ ತೆಗೆದುಕೊಳ್ಳೋಣ. ಆ ಕಾದಂಬರಿಯ ಸೊಗಡು ಆ ಭಾಷೆಯೊಂದಿಗೆ ಬೆಸೆದುಕೊಂಡಿದೆ. ದಲಿತರ ಆಡುಕನ್ನಡದಲ್ಲಿ ಬರೆದಿರುವುದನ್ನು ಇನ್ನೊಂದು ಭಾಷೆಗೆ ಅನುವಾದಿಸುವಾಗ ಅದರ ಆತ್ಮವೇ ಇಲ್ಲವಾಗಿ ಬಿಡಬಹುದು. ಕರಿಕಣಗಿಲ ಕವಿತೆಗಳ ಅನುವಾದದ ಸಂದರ್ಭದಲ್ಲಿ ಆ ದಲಿತ ಭಾಷೆಯ ಸೊಗಡು ಮಾಯವಾಗದಂತೆ ಗರಿಷ್ಠ ಶ್ರಮಿಸಲಾಗಿದೆ. ಹೆಚ್ಚಿನ ಕವಿತೆಗಳಿಗೆ ದಲಿತ ಕನ್ನಡವನ್ನು ಬಳಸಿರುವುದು ಮೆಚ್ಚುವಂತಹದು. ನಿಮ್ಮನ್ನು ಅಲುಗಾಡಿಸುವ ಶಕ್ತಿ ಇಲ್ಲಿರುವ ಕವಿತೆಗಳಿಗಿವೆ.
ಲಡಾಯಿ ಪ್ರಕಾಶನ ಹೊರತಂದಿರುವ ಕೃತಿಯ ಮುಖಬೆಲೆ 140 ರೂಪಾಯಿ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
-ಕಾರುಣ್ಯಾ
-ಕಾರುಣ್ಯಾ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X