Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಬೃಹಸ್ಪತಿ: ಮನೋರಂಜಕ ಪ್ರೇಮ ಸಂದೇಶ

ಬೃಹಸ್ಪತಿ: ಮನೋರಂಜಕ ಪ್ರೇಮ ಸಂದೇಶ

ವಾರ್ತಾಭಾರತಿವಾರ್ತಾಭಾರತಿ7 Jan 2018 12:13 AM IST
share
ಬೃಹಸ್ಪತಿ: ಮನೋರಂಜಕ ಪ್ರೇಮ ಸಂದೇಶ

ಮನರಂಜನೆಯೊಂದಿಗೆ ಒಂದೊಳ್ಳೆ ಸಂದೇಶವನ್ನು ಕೂಡ ನೀಡುವಂಥ ಚಿತ್ರ ಬೃಹಸ್ಪತಿ. ಇದು ನಾಯಕ ಮನೋರಂಜನ್ ನಟನೆಯ ಎರಡನೇ ಚಿತ್ರ.

 ಇಂಜಿಯರಿಂಗ್ ಓದಿಯೂ ಉದ್ಯೋಗ ಇಲ್ಲದ ಯುವಕನ ಪಾತ್ರದಲ್ಲಿ ಮನೋರಂಜನ್ ನಟಿಸಿದ್ದಾರೆ. ಹಾಗಾಗಿ ಯಾವುದೇ ಉಪಯೋಗಕ್ಕೆ ಸಿಗದವನು ಎಂಬ ಆರೋಪ ಮನೆಯವರಿಂದಲೇ ಬರುತ್ತಿರುತ್ತದೆ. ಇದರೊಂದಿಗೆ ಒಳ್ಳೆಯ ಕೆಲಸದಲ್ಲಿದ್ದುಕೊಂಡು ತನಗೆ ಸ್ಪರ್ಧಿಯಂತೆ ಕಾಡುವ ತಮ್ಮನ ಕಾಟವೂ ಈತನಿಗಿರುತ್ತದೆ. ಆದರೆ ಎಲ್ಲ ಸಂದರ್ಭದಲ್ಲಿಯೂ ಜತೆಗಿರುವ ತಾಯಿಯ ಬೆಂಬಲ ಆತನಿಗೆ ಶ್ರೀರಕ್ಷೆಯಾಗಿರುತ್ತದೆ. ಆದರೆ ಅವೆಲ್ಲವನ್ನೂ ದಾಟಿ ಬದುಕಿನಲ್ಲಿ ಸಾಧನೆಯ ಮೆಟ್ಟಿಲು ಏರುವ ಕ್ಷಣ ಹೇಗಿರುತ್ತದೆ ಎನ್ನುವುದೇ ಚಿತ್ರದ ಕತೆ.

ಬೃಹಸ್ಪತಿ ತಮಿಳಿನ ‘ವಿಐಪಿ’ ಚಿತ್ರದ ರಿಮೇಕ್. ನಿರ್ದೇಶಕ ನಂದಕಿಶೋರ್ ಮೂಲ ಸಿನೆಮಾದ ದೃಶ್ಯಗಳನ್ನು ಹಾಗೆಯೇ ಕನ್ನಡಕ್ಕೆ ತಂದಿದ್ದಾರೆ. ಆದರೆ ಸಂಭಾಷಣೆಗಳಲ್ಲಿ ರವಿಚಂದ್ರನ್ ಪುತ್ರ ಎನ್ನುವುದನ್ನು ನೆನಪಿಸುವಂಥ ಮಾತುಗಳನ್ನು ಸೇರಿಸಿ ಅಭಿಮಾನಿಗಳ ಮನಗೆಲ್ಲಲು ಪ್ರಯತ್ನಿಸಿದ್ದಾರೆ. ಚಿತ್ರದಲ್ಲಿ ನಾಯಕನ ಪಕ್ಕದ್ಮನೆ ಹುಡುಗಿಯಾಗಿ ನಟಿಸಿರುವುದು ದೂರದ ಬಂಗಾಳಿ ಚೆಲುವೆ ಮಿಷ್ತಿ ಚಕ್ರವರ್ತಿ. ತಂದೆಯಾಗಿ ಸಾಯಿಕುಮಾರ್ ಅಭಿನಯಿಸಿದ್ದು, ಅವರಿಗೆ ಕನ್ನಡದಲ್ಲಿ ಇದು ವಿಭಿನ್ನ ಲುಕ್ ಇರುವ ಚಿತ್ರವಾಗಿದೆ. ತಾಯಿಯಾಗಿ ಸಿತಾರಾ ಕನ್ನಡಕ್ಕೆ ಮರಳಿ ಬಂದಿದ್ದಾರೆ. ಅವರ ಪಾತ್ರಕ್ಕೆ ಚಿತ್ರದಲ್ಲಿ ಪ್ರಾಧಾನ್ಯತೆ ಇದ್ದು, ತಾಯಿ ಸೆಂಟಿಮೆಂಟ್ ಪ್ರೇಕ್ಷಕರ ಮೇಲೆ ಚೆನ್ನಾಗಿ ಪರಿಣಾಮ ಬೀರುವಂತಿದೆ. ಖಳನಾಗಿ ತಾರಕ್ ಪೊನ್ನಪ್ಪಸದ್ಯದಲ್ಲೇ ನಾಯಕನಾಗುವ ಲಕ್ಷಣ ತೋರಿಸಿದ್ದಾರೆ.

ಮನೋರಂಜನ್ ತಮ್ಮ ಪ್ರಥಮ ಚಿತ್ರ ‘ಸಾಹೇಬ’ದಿಂದಲೇ ತಮ್ಮ ಆಯ್ಕೆ ತಂದೆ ನಟಿಸಿದ ಚಿತ್ರಗಳಿಗಿಂತ ಭಿನ್ನ ಎಂದು ತೋರಿಸಿಕೊಟ್ಟಿದ್ದರು. ಆದರೂ ಈ ಚಿತ್ರ ನೋಡುವಾಗ ರವಿಚಂದ್ರನ್‌ರ ‘ಚೋರ ಚಿತ್ತ ಚೋರ’ ಸಿನೆಮಾದ ನೆನಪಾದರೂ ಅಚ್ಚರಿಯಿಲ್ಲ. ಮನೋರಂಜನ್ ರವಿಚಂದ್ರನ್ ನಷ್ಟು ಚೆಲುವನಲ್ಲದಿದ್ದರೂ ಅಭಿನಯದಲ್ಲಿ ಒಂದು ಕೈ ಮುಂದೆಯೇ ಇದ್ದೇನೆ ಎಂಬಂತೆ ಪಾತ್ರವನ್ನು ಆವಾಹಿಸಲು ಪ್ರಯತ್ನಿಸಿರುವುದು ಅಭಿನಂದನೀಯ.

ಸಂಭಾಷಣೆಯಲ್ಲಿ ಎಲ್ಲೋ ಒಂದಷ್ಟು ಸ್ಪಷ್ಟತೆಯ ಕೊರತೆಯಿದ್ದರೂ, ಒಂದೇ ಶಾಟ್‌ನಲ್ಲಿ ಪುಟಗಟ್ಟಲೆ ಮಾತನಾಡಿ ಅಚ್ಚರಿ ಮೂಡಿಸುತ್ತಾರೆ. ಅವಿನಾಶ್ ಮತ್ತು ಪ್ರಕಾಶ್ ಬೆಳವಾಡಿ ಸಣ್ಣ ಪಾತ್ರಗಳಲ್ಲಿ ಬಂದು ಹೋಗುತ್ತಾರೆ. ಸಾಧು ಕೋಕಿಲ ಈ ಬಾರಿ ತುಸು ಗಂಭೀರವಾಗಿದ್ದುಕೊಂಡು ನಗಿಸುವ ಪ್ರಯತ್ನ ನಡೆಸಿದ್ದಾರೆ. ಛಾಯಾಗ್ರಾಹಕ ಸತ್ಯ ಹೆಗಡೆ ಕಣ್ಣಲ್ಲಿ ಮೈಸೂರು ಮನಸೂರೆಗೊಳ್ಳುವಂತಿದೆ. ಹರಿಕೃಷ್ಣ ಸಂಗೀತದಲ್ಲಿ ಎರಡು ಹಾಡುಗಳು ಚೆನ್ನಾಗಿವೆ. ಯೋಗರಾಜ್ ಭಟ್ ರಚನೆಯ ಹಾಡುಗಳೊಂದಿಗೆ ನವ ಪ್ರತಿಭೆ ಪ್ರದ್ಯುಮ್ನರ ರಚನೆಯೂ ಮನ ಸೆಳೆಯುತ್ತದೆ. ಸಂಭಾಷಣೆಗಳು ಹೆಚ್ಚು ಸಿಳ್ಳೆ ಗಿಟ್ಟಿಸಿಕೊಳ್ಳುತ್ತವೆ.

ಮೂಲ ಸಿನೆಮಾ ನೋಡಿದವರಿಗೆ ಮತ್ತು ರವಿಚಂದ್ರನ್ ಶೈಲಿಯ ಚಿತ್ರ ಬಯಸುವವರಿಗೆ ಸಿನೆಮಾ ತೃಪ್ತಿ ನೀಡುವುದು ಕಷ್ಟ. ಆದರೆ ಒಂದು ಒಳ್ಳೆಯ ಸಾಂಸಾರಿಕ ಮನೋರಂಜನಾ ಚಿತ್ರ ನೋಡಲು ಬಯಸುವವರಿಗೆ ಖಂಡಿತವಾಗಿ ಚಿತ್ರ ಇಷ್ಟವಾಗುತ್ತದೆ.

ತಾರಾಗಣ: ಮನೋರಂಜನ್, ಮಿಷ್ತಿ ಚಕ್ರವರ್ತಿ
ನಿರ್ದೇಶಕ: ನಂದ ಕಿಶೋರ್
ನಿರ್ಮಾಪಕ: ರಾಕ್‌ಲೈನ್ ವೆಂಕಟೇಶ್

share
ವಾರ್ತಾಭಾರತಿ
ವಾರ್ತಾಭಾರತಿ
Next Story
X