ಪಟ್ಟಿಕ್ಕಾಡ್ ಜಾಮಿಯಾ ನೂರಿಯ್ಯಾದ 53ನೆ ಸನದುದಾನ ಮಹಾಸಮ್ಮೇಳನದ ಪ್ರಚಾರ ಸಮ್ಮೇಳನ
"ಸೂಫಿಸಂ" ಕೃತಿ ಬಿಡುಗಡೆ

ಬಂಟ್ವಾಳ, ಜ. 8: ಸಂಶುಲ್ ಉಲಮಾ ಇಸ್ಲಾಮಿಕ್ ಸೆಂಟರ್, ದಕ್ಷಿಣ ಕನ್ನಡ ಸ್ಟೂಡೆಂಟ್ ಫೋರಂ (ಡಿಕೆಎಸ್ಎಫ್) ಹಾಗೂ ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖೆ ಇದರ ಸಂಯುಕ್ತಾಶ್ರಯದಲ್ಲಿ ಪಟ್ಟಿಕ್ಕಾಡ್ ಜಾಮಿಯಾ ನೂರಿಯ್ಯಾದ 55ನೆ ವಾರ್ಷಿಕ, 53ನೆ ಸನದುದಾನ ಮಹಾಸಮ್ಮೇಳನದ ಪ್ರಚಾರ ಸಮ್ಮೇಳನ ಹಾಗೂ ಶಂಸುಲ್ ಉಲಮಾ (ಖ.ಸಿ) ಮತ್ತು ಅಗಲಿದ ಸಮಸ್ತ ನೇತಾರರ ಅನುಸ್ಮರಣಾ ಸಮ್ಮೇಳನವು ಪಾಣೆಮಂಗಳೂರು ಆಲಡ್ಕ ಮೈದಾನ ಶಂಸುಲ್ ಉಲಮಾ ನಗರದ ಮರ್ಹೂಂ ಸಜಿಪ ಉಸ್ತಾದ್ ವೇದಿಕೆಯಲ್ಲಿ ನಡೆಯಿತು.
ಸೈಯದ್ ಸ್ವಾದಿಖಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಕಾರ್ಯಕ್ರಮ ಉದ್ಘಾಟಿಸಿದರು. ಸೈಯದ್ ಹುಸೈನ್ ಬಾ ಅಲವಿ ತಂಙಳ್ ಕುಕ್ಕಾಜೆ ಅಧ್ಯಕ್ಷತೆ ವಹಿಸಿದ್ದರು. ಜಾಮಿಯಾ ನೂರಿಯ್ಯಾ ಅರಬಿಯಾ ಕಾಲೇಜಿನ ಪ್ರೊಫೆಸರ್ ಸುಲೈಮಾನ್ ಫೈಝಿ ಚುಂಗತ್ತರ ಜಾಮಿಅ ಸಂದೇಶ ಭಾಷಣಗೈದರು. ಶಮೀರ್ ದಾರಿಮಿ ಕೊಲ್ಲಂ ಮುಖ್ಯ ಭಾಷಣಗೈದರು.
ಸೈಯದ್ ಜುನೈದ್ ಜಿಫ್ರಿ ತಂಙಳ್ ಆತೂರು, ಸೈಯದ್ ತ್ವಾಹಾ ಜಿಫ್ರೀ ತಂಙಳ್ ಬೆಳ್ತಂಗಡಿ, ಫೈಝೀಸ್ ಜಿಲ್ಲಾಧ್ಯಕ್ಷ ಉಮರ್ ಫೈಝಿ ಸಾಲ್ಮರ, ಎಸ್ಕೆಎಸ್ಸೆಸ್ಸೆಫ್ ಕ್ಯಾಂಪಸ್ ವಿಂಗ್ ರಾಜ್ಯಾಧ್ಯಕ್ಷ ಇಬ್ರಾಹಿಂ ಬಾತಿಷಾ ಕೊಡಗು, ಕಾರ್ಯದರ್ಶಿ ಝೈದ್ ದಿಡುಪೆ, ಮಂಗಳೂರು ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿ ಖತೀಬ್ ಸ್ವದಖತುಲ್ಲಾ ಫೈಝಿ, ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಚೆಯರ್ಮೆನ್ ಎಚ್.ಎಸ್. ಉಸ್ಮಾನ್ ಹಾಜಿ ಪಾಣೆಮಂಗಳೂರು, ಪ್ರಮುಖರಾದ ಹಾಜಿ ಎಸ್. ಅಬ್ಬಾಸ್ ಸಜಿಪ, ಹಾಜಿ ಪಿ.ಎಸ್. ಅಬ್ದುಲ್ ಹಮೀದ್, ಉಮರ್ ಫಾರೂಕ್ ಗುಡ್ಡೆಅಂಗಡಿ, ಹಾಜಿ ಎನ್.ಎಚ್. ಮೂಸಾ ನಂದಾವರ, ಎನ್.ಬಿ. ಆದಂ ಸಾಲಿ ಪಾಣೆಮಂಗಳೂರು, ಹಬೀಬ್ ಮಿತ್ತಬೈಲು, ಹಾರೂನ್ ಅಹ್ಸನಿ, ಶರೀಫ್ ಫೈಝಿ ಕಡಬ, ಉಸ್ಮಾನುಲ್ ಫೈಝಿ ತೋಡಾರು, ಸುಲೈಮಾನ್ ಫೈಝಿ ಕಣಿಯೂರು, ಖಾಸಿಂ ದಾರಿಮಿ ಕಿನ್ಯ, ಶೈಖ್ ಮುಹಮ್ಮದ್ ಇರ್ಫಾನ್ ಫೈಝಿ ಅಲ್-ಅರ್ಹರಿ ಮಾರಿಪಳ್ಳ, ಅಬ್ದುಲ್ ರಹಿಮಾನ್ ಫೈಝಿ, ಇಸ್ಮಾಯಿಲ್ ಫೈಝಿ ಕಲ್ಲಡ್ಕ, ಹಾಜಿ ಕೆ.ಎಸ್. ಹೈದರ್ ದಾರಿಮಿ ಕಲ್ಲಡ್ಕ, ರಿಯಾರ್ ರಹ್ಮಾನಿ ಗೂಡಿನಬಳಿ, ಬಶೀರ್ ದಾರಿಮಿ ನೆಹರುನಗರ, ರಾಝಿ ಬಾಖವಿ ಗುಡ್ಡೆಅಂಗಡಿ, ಉಸ್ಮಾನ್ ದಾರಿಮಿ ಬಂಟ್ವಾಳ, ಶರೀಫ್ ಅರ್ಶದಿ ದೇರಳಕಟ್ಟೆ, ಅಬ್ದುಲ್ ಖಾದರ್ ಫೈಝಿ ಅಲ್ ಖಾದ್ರಿ ಜಾವಗಲ್, ಅಶ್ರಫ್ ಫೈಝಿ ಮಲಾರ್, ಇಬ್ರಾಹಿಂ ಫೈಝಿ ಮಾಡನ್ನೂರು ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಎಸ್ಕೆಸ್ಸೆಸ್ಸೆಫ್ ಆಲಡ್ಕ ಶಾಖಾಧ್ಯಕ್ಷ ಅಬೂಬಕ್ಕರ್ ಎನ್.ಬಿ., ಗೌರವಾಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಬೋಗೋಡಿ, ಎಸ್ಕೆಎಸ್ಸೆಸ್ಸೆಫ್ ಪಾಣೆಮಂಗಳೂರು ಕ್ಲಸ್ಟರ್ ಅಧ್ಯಕ್ಷ ಅಬ್ದುಲ್ ಅಝೀರ್ ಪಿ.ಐ. ಆಲಡ್ಕ, ಪದಾಧಿಕಾರಿಗಳಾದ ಅಬ್ದುಲ್ ಮುತ್ತಲಿಬ್ ಆಲಡ್ಕ, ಬಶೀರ್ ಎಂ., ಪಿ.ಬಿ. ಹಾಮದ್ ಹಾಜಿ ಬಂಗ್ಲೆಗುಡ್ಡೆ, ಹನೀಫ್ ಹಾಸ್ಕೋ, ಶಫೀಕ್ ಆಲಡ್ಕ, ಶಾಫಿ ಹಾಜಿ ಬಂಗ್ಲೆಗುಡ್ಡೆ, ಮುಹಮ್ಮದ್ ಹನೀಫ್ ಬೋಗೋಡಿ, ನೌಶಾದ್ ಉಪ್ಪುಗುಡ್ಡೆ, ಮಜೀದ್ ಮೆಲ್ಕಾರ್, ಶಹೀದ್ ಗುಡ್ಡೆಅಂಗಡಿ, ಡಿಕೆಎಸ್ಎಫ್ ಅಧ್ಯಕ್ಷ ಝೈದ್ ಗಡಿಯಾರ, ಪದಾಧಿಕಾರಿಗಳಾದ ಹಾಶಿಂ ಪಾಂಡವರಕಲ್ಲು, ರಿಯಾರ್ ಪಟ್ಟೆ, ಸವಣೂರು, ಝುಬೈರ್ ಕಕ್ಕಿಂಜೆ, ಮುರ್ಶಿದ್ ಕಕ್ಕಿಂಜೆ, ಅಬ್ದುಲ್ ನಾಸಿರ್ ಕುಂತೂರು, ಸಿರಾಜ್ ಚಾರ್ಮಾಡಿ, ಶೌಕತ್ ಕನ್ಯಾನ, ಪ್ರಮುಖರಾದ ಅಬ್ದುಲ್ ಖಾದರ್ ಮಾಸ್ಟರ್ ಬಂಟ್ವಾಳ, ಅಬ್ದುಲ್ ಬಶೀರ್ ಮಜಲು, ಸಫ್ವಾನ್ ಬಂಟ್ವಾಳ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ಡಿಕೆಎಸ್ಎಫ್ ಹೊರತಂದ "ಸೂಫಿಸಂ" ಎಂಬ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಶಮೀರ್ ದಾರಿಮಿ ಕೊಲ್ಲಂ ಇವರನ್ನು ಎಸ್ಕೆಎಸ್ಸೆಸ್ಸೆಫ್ ಹಾಗೂ ಡಿಕೆಎಸ್ಎಫ್ ವತಿಯಿಂದ ಸನ್ಮಾನಿಸಲಾಯಿತು.
ಸ್ವಾಗತ ಸಮಿತಿ ಚೆಯರ್ಮೆನ್ ಅಬ್ದುಲ್ ಬಶೀರ್ ನಂದಾವರ ಧ್ವಜಾರೋಹಣಗೈದರು. ಡಿಕೆಎಸ್ಎಫ್ ಪ್ರಧಾನ ಕಾರ್ಯದರ್ಶಿ ಸಿನಾನ್ ಖಲಂದರಿ ನೀರಪಾದೆ ಸ್ವಾಗತಿಸಿ, ಜಿಲ್ಲಾ ಫೈಝೀಸ್ ವರ್ಕಿಂಗ್ ಕಾರ್ಯದರ್ಶಿ ಅಬೂಸ್ವಾಲಿಹ್ ಫೈಝಿ ಅಕ್ಕರಂಗಡಿ ಪ್ರಸ್ತಾವನೆಗೈದರು.
ಡಿಕೆಎಸ್ಎಫ್ ವರ್ಕಿಂಗ್ ಸೆಕ್ರೆಟರಿ ಅಹ್ಮದ್ ನಹೀಂ ಮುಕ್ವೆ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.







