ದಿಲ್ಲಿಯಲ್ಲಿ ಜಿಗ್ನೇಶ್ ಹೂಂಕಾರ...
ದಲಿತ ಯುವ ನಾಯಕ ಮತ್ತು ಗುಜರಾತ್ನ ನೂತನ ಶಾಸಕ ಜಿಗ್ನೇಶ್ ಮೇವಾನಿ ದಿಲ್ಲಿ ಪೊಲೀಸರ ಅನುಮತಿ ನಿರಾಕರಣೆಯ ಹೊರತಾಗಿಯೂ ಮಂಗಳವಾರ ಸಂಸತ್ ರಸ್ತೆಯಲ್ಲಿ ಯುವ ಹೂಂಕಾರ್ ರ್ಯಾಲಿಯನ್ನು ಮುನ್ನಡೆಸಿದರು. ಜಂತರ್ ಮಂತರ್ನಲ್ಲಿ ಯಾವುದೇ ಪ್ರತಿಭಟನೆಗಳನ್ನು ನಡೆಸಲು ರಾಷ್ಟ್ರೀಯ ಹಸಿರು ಪೀಠ ನಿಷೇಧ ಹೇರಿದ್ದು, ಈ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸರು ಯುವ ಹೂಂಕಾರ್ ರ್ಯಾಲಿಗೆ ಅನುಮತಿ ನಿರಾಕರಿಸಿದ್ದರು. ಆದರೆ ಯುವ ಹೂಂಕಾರ್ ರ್ಯಾಲಿ ನಡೆಸಲು ಉದ್ದೇಶಿಸಿರುವುದು ಸಂಸತ್ ರಸ್ತೆಯಲ್ಲಿ, ಜಂತರ್ ಮಂತರ್ನಲ್ಲಿ ಅಲ್ಲ ಎಂದು ಆಯೋಜಕರು ಸ್ಪಷ್ಟಪಡಿಸಿದ್ದರು. ವಿದ್ಯಾರ್ಥಿ ಮುಖಂಡರಾದ ಕನ್ಹಯ್ಯಾ ಕುಮಾರ್, ಶೆಹ್ಲಾ ರಶೀದ್ ಶೋರಾ, ರೈತ ನಾಯಕ ಅಖಿಲ್ ಗೊಗೊಯ್ ಮತ್ತಿತರರು ಭಾಗವಹಿಸಿದ್ದರು.
Next Story