ಸಿಖ್ ವಿರೋಧಿ ದಂಗೆ: 186 ಪ್ರಕರಣಗಳ ಮರುತನಿಖೆಗೆ ಹೊಸ ಸಮಿತಿ ರಚಿಸಿದ ಸುಪ್ರೀಂ
ಹೊಸದಿಲ್ಲಿ,ಜ.10: 1984ರ ಸಿಖ್ ವಿರೋಧಿ ದಂಗೆಗಳ 186 ಪ್ರಕರಣಗಳಿಗೆ ಬುಧವಾರ ಮರುಜೀವ ನೀಡಿರುವ ಸರ್ವೋಚ್ಚ ನ್ಯಾಯಾಲಯವು, ತನಿಖೆಗಾಗಿ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶರ ನೇತೃತ್ವದಲ್ಲಿ ಮೂವರು ಸದಸ್ಯರ ವಿಶೇಷ ತನಿಖಾ ತಂಡವೊಂದನ್ನು ಹೊಸದಾಗಿ ರಚಿಸುವುದಾಗಿ ತಿಳಿಸಿದೆ. 241 ಪ್ರಕರಣಗಳ ಪೈಕಿ ಈ 186 ಪ್ರಕರಣಗಳನ್ನು ಯಾವುದೇ ತನಿಖೆಯಿಲ್ಲದೆ ಮುಚ್ಚಲಾಗಿತ್ತು ಎನ್ನುವುದನ್ನು ತಾನು ನೇಮಿಸಿದ್ದ ಉಸ್ತುವಾರಿ ಸಮಿತಿಯು ಪತ್ತೆ ಹಚ್ಚಿದೆ ಎಂದು ಅದು ಹೇಳಿದೆ. ಸಮಿತಿಯ ಸದಸ್ಯರನ್ನಾಗಿ ನೇಮಕಕ್ಕೆ ಪರಿಶೀಲಿಸಲು ಹೆಸರುಗಳನ್ನು ತಕ್ಷಣವೇ ಸೂಚಿಸುವಂತೆ ಮುಖ್ಯ ನ್ಯಾಯಮೂರ್ತಿ ದೀಪಕ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಂ.ಖನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ ಅವರನ್ನೊಳಗೊಂಡ ಪೀಠವು ಕೇಂದ್ರಕ್ಕೆ ನಿರ್ದೇಶ ನೀಡಿತು.
ಸಮಿತಿಯ ಸದಸ್ಯರಲ್ಲಿ ಓರ್ವರು ಡಿಐಜಿ ದರ್ಜೆಯ ನಿವೃತ್ತ ಪೊಲೀಸ್ ಅಧಿಕಾರಿ ಯಾಗಿದ್ದು, ಇನ್ನೋರ್ವ ಸದಸ್ಯರು ಹಾಲಿ ಸೇವೆಯಲ್ಲಿರುವ ಪೊಲೀಸ್ ಅಧಿಕಾರಿಯಾಗಿ ರುತ್ತಾರೆ ಎಂದು ಪೀಠವು ತಿಳಿಸಿತು.
Next Story