Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ​ ಸ್ವಾತಂತ್ರದಲ್ಲಿಯ ನಮ್ಮ ಪ್ರಗತಿ,...

​ ಸ್ವಾತಂತ್ರದಲ್ಲಿಯ ನಮ್ಮ ಪ್ರಗತಿ, ತೀವ್ರತೆ ಹಾಗೂ ಪದ್ಧತಿ

ವಾರ್ತಾಭಾರತಿವಾರ್ತಾಭಾರತಿ12 Jan 2018 12:02 AM IST
share
​ ಸ್ವಾತಂತ್ರದಲ್ಲಿಯ ನಮ್ಮ ಪ್ರಗತಿ, ತೀವ್ರತೆ ಹಾಗೂ ಪದ್ಧತಿ

ಭಾರತಕ್ಕೆ ಸಿಗಲಿರುವ ಸ್ವಾತಂತ್ರ ಒಂದೇ ಆಡಳಿತಕ್ಕೊಳಪಡುವ ಅಥವಾ ಪ್ರಜಾಸತ್ತಾತ್ಮಕ ರಾಜ್ಯವಾಗಿರದೆ ಪ್ರಜಾಪ್ರತಿನಿಧಿಸತ್ತಾತ್ಮಕ ರಾಜ್ಯವಾಗಿರುತ್ತದೆ ಹಾಗೂ ಈ ರೀತಿ ಸ್ವಾತಂತ್ರ ಸಿಕ್ಕಿದ ರಾಜ್ಯ ಸರಿಯಾಗಿ ನಡೆದುಕೊಂಡು ಹೋಗಲು ಪ್ರತಿಯೊಬ್ಬರಿಗೂ ಮತ ಚಲಾಯಿಸುವ ಹಕ್ಕು ಸಿಗಬೇಕಾದ್ದು ಹಾಗೂ ಪ್ರತಿಯೊಂದು ಜಾತಿಗೂ ಮೀಸಲಾತಿ ಸಿಗಬೇಕಾದ್ದು ಎಷ್ಟು ಆವಶ್ಯಕವಾಗಿದೆ ಅನ್ನುವುದನ್ನು ಹಿಂದೆ ಹೇಳಿದ್ದೇನೆ. ಆದರೆ ನಮಗೆ ಸಿಗಲಿರುವ ಪ್ರತಿನಿಧಿಗಳೆಷ್ಟು? ಹಾಗೂ ಅವರು ನಮಗೆ ಸಿಗುವ ಬಗೆ ಹೇಗೆ? ಅನ್ನುವುದು ನಿರ್ಧಾರವಾಗದೆ ಈ ಜಾತಿ ಆಧಾರಿತ ಪ್ರತಿನಿಧಿಗಳಿಂದಾಗುವ ಪ್ರಗತಿಯಿಂದ ನಮಗೆ ಲಾಭವಾಗಲಿದೆ ಅನ್ನುವುದನ್ನು ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ. ಆದ್ದರಿಂದ ಮುಂಬರುವ ಸ್ವತಂತ್ರ ದೇಶದಲ್ಲಿ ನಮ್ಮ ಪ್ರತಿನಿಧಿಗಳ ಸಂಖ್ಯೆ ಎಷ್ಟಿರಬೇಕು ಹಾಗೂ ಅವರು ಯಾವ ಪದ್ಧತಿಯಲ್ಲಿ ಕೆಲಸ ಮಾಡಬೇಕು ಅನ್ನುವುದನ್ನು ಮುಂದೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.

 ಮೊದಲಿಗೆ ಪ್ರತಿಯೊಂದು ಜಾತಿಯ ಪ್ರತಿನಿಧಿಗಳ ಹಂಚಿಕೆ ಯೋಗ್ಯ ಪ್ರಮಾಣದಲ್ಲಿ ಯಾವ ಆಧಾರದ ಮೇಲೆ ಆಗಬೇಕು? ಅನ್ನುವುದನ್ನು ನೋಡೋಣ. ಆಯಾ ಜಾತಿಯ ಪ್ರತಿನಿಧಿಗಳಿರಬೇಕು (ಮೀಸಲಾತಿ) ಅನ್ನುವುದಕ್ಕೆ ಕಾರಣಗಳನ್ನು ನಾನು ಮೊದಲೇ ಕೊಟ್ಟಿದ್ದೇನೆ. ಮತದಾರರು ಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ಉಮೇದುವಾರರ ಯೋಗ್ಯತೆಯ ಕಡೆ ಹೆಚ್ಚು ಗಮನ ಕೊಡದೆ ಅವನ ಜಾತಿ ನೋಡಿ ಅವನಿಗೆ ಮತ ಕೊಡುತ್ತಾರೆ. ನಮ್ಮ ಧರ್ಮ ಕೆಲವು ಜಾತಿ ಶ್ರೇಷ್ಠ ಹಾಗೂ ಪವಿತ್ರವಾದದ್ದು ಮತ್ತು ಕೆಲವು ಜಾತಿಗಳು ಕನಿಷ್ಠ ಹಾಗೂ ಅಪವಿತ್ರ ಜಾತಿಗಳೆಂದು ನಿರ್ಧರಿಸಿದೆ. ಸ್ವಾಭಿಮಾನವನ್ನು ಬದಿಗಿಟ್ಟು ಕೆಳಜಾತಿಯ ಜನ ಮೇಲ್ಜಾತಿಯ ಜನರನ್ನು ಪೂಜಿಸುತ್ತಾರೆ ಹಾಗೂ ಚಾರಿತ್ರವಿಲ್ಲದ ಮೇಲ್ಜಾತಿಯ ಜನ ತಮ್ಮನ್ನು ಶ್ರೇಷ್ಠ ಹಾಗೂ ಉತ್ತಮ ಎಂದು ಪರಿಗಣಿಸುವ ಕೆಳ ಜಾತಿಯನ್ನು ತುಳಿಯುತ್ತಾರೆ. ಇಂತಹ ಅನ್ಯೋನ್ಯ ಭಾವನೆಯಿಂದ ವರ್ತಿಸುವ ಜನರೇನಾದರೂ ತಮ್ಮ ಸಾಮಾನ್ಯ ಕ್ಷೇತ್ರದ ಮತದಾರ ಸಂಘದಿಂದ ಪ್ರತಿನಿಧಿಯಾಗಿ ನಿಂತರೆ ಯಾವ ಪರಿಣಾಮಗಳಾಗಬಹುದು ನೋಡಿ.

ಆ ಉಮೇದುವಾರ ಬ್ರಾಹ್ಮಣೇತರ ಅಥವಾ ದಲಿತನಾಗಿದ್ದರೆ ಮೇಲ್ಜಾತಿಯವರು ಆತನಿಗೆ ತಮ್ಮ ಮತ ಕೊಟ್ಟು ತಮ್ಮ ಅವಮಾನ ಮಾಡಿಕೊಳ್ಳಲಾರರು. ಒಂದು ವೇಳೆ ಆ ಉಮೇದುವಾರ ಬ್ರಾಹ್ಮಣನಾದರೆ ಜಾತಿಯ ಅಭಿಮಾನದಿಂದ ಬ್ರಾಹ್ಮಣರು ಆತನಿಗೆ ಮತಕೊಟ್ಟು ಗೆಲ್ಲಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಲ್ಲಿ ಆಶ್ಚರ್ಯದ ಸಂಗತಿಯೇನು ಗೊತ್ತೆ? ಬ್ರಾಹ್ಮಣೇತರರು ಹಾಗೂ ದಲಿತರೂ ಕೂಡ ಆತನ ಪರವಾಗಿಯೇ ಮತ ಚಲಾಯಿಸಿ ಬ್ರಾಹ್ಮಣರ ಸೇವೆ ಮಾಡುವ ಅವಕಾಶವನ್ನು ಪಡೆದು ಪುಣ್ಯ ಗಳಿಸಲು ಒದ್ದಾಡುವರು ಅನ್ನುವುದು ಖಂಡಿತ. ಅಷ್ಟೇಯಲ್ಲ ಒಬ್ಬ ಬ್ರಾಹ್ಮಣ, ಒಬ್ಬ ಬ್ರಾಹ್ಮಣೇತರ ಹಾಗೂ ಮಗದೊಬ್ಬ ದಲಿತ ಹೀಗೆ ಮೂವರನ್ನು ಉಮೇದುವಾರರಾಗಿ ನಿಲ್ಲಿಸಿದರೆ ಬ್ರಾಹ್ಮಣರು ತಪ್ಪಿಯೂ ಉಳಿದವರಿಗೆ ಮತ ಕೊಡಲಾರರು. ಅವರಲ್ಲಿರುವ ಜಾತಿ ಹಿತಾಸಕ್ತಿ ನಿಜವಾಗಿಯೂ ಹೊಗಳುವಂತಹದ್ದು. ಆದರೆ ಬ್ರಾಹ್ಮಣೇತರರು ಹಾಗೂ ದಲಿತರು ಅಂಧಶ್ರದ್ಧೆಯಿಂದ ಅಂಧರಾಗಿ ತಮ್ಮ ಜಾತಿಯ ಹಿತವನ್ನು ಕಾಣಲಾರದೆ ಬ್ರಾಹ್ಮಣರಿಗೇ ಮತ ಕೊಡುವರು. ಬ್ರಾಹ್ಮಣರ ಭಕ್ತಿ ಇತರ ಜಾತಿಗಳ ಮೇಲಿಲ್ಲ. ಆದರೆ ಬ್ರಾಹ್ಮಣೇತರರ ಹಾಗೂ ದಲಿತರ ಭಕ್ತಿ ಬ್ರಾಹ್ಮಣರ ಮೇಲೆಷ್ಟಿದೆ ಅನ್ನುವುದು ಎಲ್ಲರಿಗೂ ಗೊತ್ತು. ಇಂತಹ ಸಂಘಟನೆಯಿಂದ ಬ್ರಾಹ್ಮಣ ಉಮೇದುವಾರರು ತಮ್ಮ ಜಾತಿಯ ಮತದಾರರ ಆಧಾರದಿಂದಷ್ಟೇಯಲ್ಲ ತಮ್ಮನ್ನು ಪೂಜಿಸುವ ಬ್ರಾಹ್ಮಣೇತರ ಹಾಗೂ ದಲಿತರ ಮತಗಳಿಂದಲೂ ಉಳಿದ ಬ್ರಾಹ್ಮಣೇತರ ಹಾಗೂ ದಲಿತರನ್ನು ಸೋಲಿಸಿ ಗೆಲ್ಲುವ ಸಾಧ್ಯತೆಯಿದೆ. ಆದ್ದರಿಂದಲೇ ಮುಂಬರುವ ಕಾಯ್ದೆಗಳು, ಕೌನ್ಸಿಲ್‌ಗಳು ಒಂದೇ ಜಾತಿಗೆ ಸಂಬಂಧಿಸಿದ್ದಾಗಿರುತ್ತವೆ ಎಂದು ಕೆಲವು ವಿದ್ವಾಂಸರು ಭವಿಷ್ಯ ನುಡಿದಿದ್ದಾರೆ.

ಮಾದಕದ್ರವ್ಯ ಸೇವಿಸುವವನಿಗೆ ಹಾನಿಯುಂಟುಮಾಡುವಂತೆ ಬ್ರಾಹ್ಮಣರ ಮೇಲಿರುವ ಬ್ರಾಹ್ಮಣೇತರ ಹಾಗೂ ದಲಿತರ ಶ್ರದ್ಧೆ ವಿನಾಶದೆಡೆಗೆ ಕೊಂಡೊಯ್ಯುವಂತಹದ್ದು. ಶ್ರದ್ಧೆ ಮಾದಕದ್ರವ್ಯದಷ್ಟೇ ಹಾನಿಕಾರಕವಾಗಿದೆ. ಮಾದಕ ದ್ರವ್ಯ ಸೇವನೆಯಿಂದ ಹಾನಿಯಾಗುವಂತೆ ತಮ್ಮ ಜಾತಿಯವರನ್ನು ಬಿಟ್ಟು ಬ್ರಾಹ್ಮಣರಿಗೆ ಮತದಾನ ಮಾಡಿದರೂ ಹಾನಿಯಾಗುತ್ತದೆ. ಈ ಅಹಿತಕಾರಿ ಪ್ರವೃತ್ತಿಯಿಂದ ಅವರನ್ನು ರಕ್ಷಿಸಲು ಅವರಿಗೆ ಮೀಸಲಾತಿ ಕೊಡುವುದು ಅಗತ್ಯವಾಗಿದೆ. ಅನೇಕರು ಈ ಮೀಸಲಾತಿ ಪದ್ಧತಿಯನ್ನು ಅನುಮೋದಿಸಿದ್ದಾರೆ. ಅವರಲ್ಲಿ ಬೇರೆ ಆಯ್ಕೆಯೂ ಇರಲಿಲ್ಲವೆನ್ನಿ. ಆದರೆ ಮೀಸಲಾತಿ ಪದ್ಧತಿಯಲ್ಲಿ ಎಷ್ಟು ಪ್ರತಿನಿಧಿಗಳಿರಬೇಕು ಅನ್ನುವ ಧೋರಣೆ ಉದಾತ್ತವಾಗಿದ್ದರೂ ಅದು ಸರಿಯಾಗಿ ಯೋಚಿಸಿ ತೆಗೆದುಕೊಂಡ ನಿರ್ಧಾರವಲ್ಲ. ಪ್ರತಿನಿಧಿಗಳ ಹಂಚಿಕೆ ಹೇಗಿರಬೇಕು? ಅನ್ನುವುದಕ್ಕೆ ಕಳೆದ ಸಲ ವರಿಷ್ಠ ಸರಕಾರ ನೇಮಿಸಿದ್ದ ಕಮಿಟಿಯ ವರದಿಗೆ ಮೇಲೆ ಹೇಳಿದ ಹೇಳಿಕೆ ಅನ್ವಯಿಸುತ್ತದೆ ಅಂದರೆ ತಪ್ಪಾಗಲಾರದು. ಈ ಕಮಿಟಿಯು ತನ್ನ ವರದಿಯಲ್ಲಿ ಮುಸಲ್ಮಾನರಿಗೆ, ದಲಿತರಿಗೆ, ಕ್ರಿಶ್ಚಿಯನ್ನರಿಗೆ, ಯುರೋಪಿಯನ್ ಹಾಗೂ ಇನ್ನಿತರರಿಗೆ ಮೀಸಲಾತಿ ಪ್ರತಿನಿಧಿಗಳು ಸಿಗಬೇಕು ಅನ್ನುವ ಶಿಫಾರಸು ಮಾಡಿದೆ. ಆದರೆ ದಲಿತರಂತಹ ಬಹುಸಂಖ್ಯ ಜನರಿಗಾಗಿ ಮುಂಬೈಯಂತಹ ಕ್ಷೇತ್ರಕ್ಕೆ ಒಬ್ಬ ಪ್ರತಿನಿಧಿಯನ್ನು ಕೊಡಿ ಎಂದು ಸೂಚಿಸಿದ್ದರೂ ಕಡೆಗೆ ವರಿಷ್ಠ ಅಧಿಕಾರಿಗಳಿಗೆ ಕರುಣೆಯುಕ್ಕಿ ಒಬ್ಬ ಪ್ರತಿನಿಧಿ ಅನ್ನುವುದನ್ನು ಅಳಿಸಿ ಎರಡರ ಸಂಖ್ಯೆಯನ್ನು ಸೇರಿಸಿದ್ದಾರೆ! ಸಂಖ್ಯೆಗಳು ಅದಲುಬದಲಾಗಿದ್ದರೂ ಕಮಿಟಿಯು ಒಬ್ಬನೇ ಪ್ರತಿನಿಧಿ ಎಂದು ಹೇಳಿದ್ದೇಕೆ? ಅಥವಾ ಸರಕಾರ ಇಬ್ಬರು ಪ್ರತಿನಿಧಿಗಳನ್ನು ಕೊಡಿ ಎಂದು ಹೇಳಿ ಕಮಿಟಿಯು ವರದಿಯನ್ನು ಬದಲಿಸಿದ್ದೇಕೆ? ಅನ್ನುವುದಕ್ಕೆ ಕಾರಣ ಯಾರೊಬ್ಬರೂ ಕೊಟ್ಟಿಲ್ಲ.

ಕಮಿಟಿಗಳು ಕೇವಲ ಪ್ರತಿನಿಧಿ ಸಂಗ್ರಹಾಲಯಗಳಾಗಿದ್ದಿದ್ದರೆ ಹೆಚ್ಚೆಚ್ಚು ಅಂದರೆ ಪ್ರತಿಯೊಂದು ಜಾತಿಯ ಒಂದಿಬ್ಬರು ಪ್ರತಿನಿಧಿಗಳು ಸಾಕು ಅನ್ನುವುದನ್ನು ನಾವು ವಿರೋಧಿಸುತ್ತಿರಲಿಲ್ಲ. ವಸ್ತುಸಂಗ್ರಹಾಲಯದಂತೆ ಕ್ಷೇತ್ರಕ್ಕೆ ಒಬ್ಬ ಪ್ರತಿನಿಧಿಯಂತೆ ಒಂದೊಂದು ನಮೂನೆಯನ್ನು ಯಾವುದೇ ಪರಿಣಾಮವಿಲ್ಲದೆ ಕೆಲವು ಜಾತಿಯ ಜನ ಹೆಚ್ಚು ಕೆಲವು ಜಾತಿಯ ಜನ ಕಡಿಮೆಯೆಂಬಂತೆ ಕೂಡ ಆರಿಸಬಹುದಿತ್ತು. ಆದರೆ ಕಮಿಟಿಯ ಪ್ರತಿನಿಧಿಗಳು ಪ್ರೇಕ್ಷಕರು ನೋಡಿ ಸಂತೋಷಪಡಲೆಂದು ಇಟ್ಟಿರುವ ವಸ್ತುಗಳಲ್ಲ. ಅವರು ತಮ್ಮ ಪರಿಸ್ಥಿತಿಯಲ್ಲಿ ಬದಲಾವಣೆ ಸೂಚಿಸುವ ಆಡಳಿತ ಮಹೋದಯರು ಅನ್ನುವುದನ್ನು ಯಾರೂ ಮರೆಯಬಾರದು. ಈ ಆಡಳಿತ ಮಹೋದಯರು ಪರಿಸ್ಥಿತಿಯಲ್ಲಿ ಯೋಗ್ಯವಾದ ಬದಲಾವಣೆ ತರುತ್ತಾರೋ ಇಲ್ಲವೋ ಅನ್ನುವುದು ಅವರ ಚಾರಿತ್ರ ಹಾಗೂ ಸ್ವಭಾವವನ್ನವಲಂಬಿಸಿದೆ. ಆಡಳಿತ ನಮ್ಮ ಕೈಗೆ ಬಂದರೆ ನಾವು ಸ್ವಂತಂತ್ರರಾದೆವು ಅನ್ನುವುದು ಕೆಲವರ ತಿಳುವಳಿಕೆ. ಸ್ವಾತಂತ್ರಕ್ಕೆ ತಮ್ಮನ್ನು ಅರ್ಪಿಸಿರುವ ಜನ ಕೂಡ ಸ್ವಾತಂತ್ರ ಸಿಕ್ಕು ಆಡಳಿತ ತಮ್ಮ ಕೈಗೆ ಬಂದರೆ ಆರ್ಥಿಕ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ನಮಗೆ ಬೇಕಾದ ಸುಧಾರಣೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಅವರಿಗದು ಮಕ್ಕಳಾಟ ಅನಿಸುತ್ತಿದೆ.

ಸತ್ತಾಧೀಶನಾದರೂ ಮನುಷ್ಯ ಸ್ವಾಭಾವ ತೋರಿದ ಮಾರ್ಗದಲ್ಲಿ ಮುನ್ನಡೆಯುವುದು ಆಡಳಿತದಿಂದಾಗಿ ಆತ ಪಾರತಂತ್ರದಲ್ಲೇ ಉಳಿದುಬಿಡುತ್ತಾನೆ. ತನ್ನ ಸ್ವಭಾವ ತೋರಿದ ಮಾರ್ಗದಲ್ಲಿ ಮುನ್ನಡೆಯುವುದು ಆಡಳಿತದಿಂದಾಗಿ ಆತನಿಗೆ ಸಾಧ್ಯ. ಆದರೆ ಆಡಳಿತ ಕೈಯಲ್ಲಿರುವಾಗ ಕೆಲವೊಮ್ಮೆ ಸ್ವಭಾವದ ವಿರುದ್ಧ ಹೋಗಲು ಕೂಡ ದುರ್ಬಲನಾಗಿಬಿಡುತ್ತಾನೆ. ಹಾಗಾಗಿ ಆಡಳಿತದ ಉಪಯೋಗ ಯಾವ ರೀತಿಯಲ್ಲಾಗಬಹುದು ಅನ್ನುವುದು ಆತನ ಸ್ವಾಭಾವವನ್ನವಲಂಬಿಸಿದೆ. ಬ್ರಾಹ್ಮಣರ ಸ್ವಭಾವವಿರುವ ಅನೇಕ ಜನರೇನಾದರೂ ಕಮಿಟಿಯಲ್ಲಿ ಪ್ರವೇಶಿಸಿದರೆ ಇವರ ಸಾಮಾಜಿಕ ಹಾಗೂ ಧಾರ್ಮಿಕ ವರ್ಚಸ್ಸಿನಿಂದ ಇತರ ಜಾತಿಗಾಗುವ ಹಾನಿಯನ್ನು ತಪ್ಪಿಸಲು ಇವರು ತಮ್ಮ ಅಧಿಕಾರವನ್ನು ಬಳಸಿಯಾರೆ? ಹಾಗಾಗುತ್ತದೆ ಎಂದು ನನಗನಿಸುವುದಿಲ್ಲ.

ಇದರ ಬದಲಾಗಿ ಈ ವರ್ಚಸ್ಸನ್ನು ಚಿರಕಾಲ ಮುಂದುವರಿಸುವಂತಹ ಉಪಾಯ ಯೋಜನೆಯೊಂದನ್ನು ಅವರು ರೂಪಿಸಿಯಾರು ಎಂದರೂ ತಪ್ಪಿಲ್ಲ. ಈ ವರ್ಚಸ್ಸನ್ನು ಬುಡಸಮೇತ ಕಿತ್ತೆಸೆಯಲಾಗದಿದ್ದರೆ ಸ್ವಾತಂತ್ರ ಸಿಕ್ಕಿ ಫಲವೇನು? ಹಾಗೂ ಆ ವರ್ಚಸ್ಸು ಚಿರಕಾಲ ಉಳಿದರೆ ಸ್ವಾತಂತ್ರದಂತಹ ಬೇರೆ ಅಧಃಪತನವೂ ಇರಲಾರದು. ಸ್ವಾತಂತ್ರದ ವಿಪರೀತ ಪರಿಣಾಮವಾಗಬಾರದೆಂದೇ ಇಂದು ಕಠಿಣ ಪರಿಸ್ಥಿತಿಯಲ್ಲಿರುವ ಜಾತಿಗೆ ಅನುಕೂಲವಾಗಲೆಂದು ಸಾಕಷ್ಟು ಆಡಳಿತ ಕೈಗೆ ಬರುವಷ್ಟು ಪ್ರತಿನಿಧಿಗಳು ಆಯಾ ಜಾತಿಯಿಂದ ಬಂದರೆ ಮಾತ್ರ ಲಾಭ. ಆದ್ದರಿಂದ ಪ್ರತಿಯೊಂದು ಜಾತಿಯಲ್ಲೂ ಪ್ರತಿನಿಧಿಗಳ ಹಂಚಿಕೆ ಯಾವ ತತ್ವಗಳ ಮೇಲಾಗಬೇಕು ಅನ್ನುವುದೊಂದು ಮಹತ್ವದ ಪ್ರಶ್ನೆ. ಈ ಪ್ರಶ್ನೆಗೆ ಸಂಬಂಧಿಸಿದಂತೆ ಲಾರ್ಡ್ ಮಾರ್ಲೆ ಅವರ ಹೇಳಿಕೆ ಒಪ್ಪುವಂತಹದ್ದಾಗಿದೆ. 1909ರಲ್ಲಿ ಮುಸಲ್ಮ್ಮಾನರಿಗೆ ಮೀಸಲಾತಿಯಲ್ಲಿ ಎಷ್ಟು ಪ್ರತಿನಿಧಿಗಳನ್ನು ಕೊಡಬೇಕು ಅನ್ನುವ ವಾದದಲ್ಲಿ ಅವರು,

‘‘ನನಗನಿಸಿದ ಮಟ್ಟಿಗೆ ಮೀಸಲಾತಿಯಲ್ಲಿ ಪ್ರತಿನಿಧಿಗಳ ತತ್ವದ ಅನುಸಾರ ಕಮಿಟಿಯ ರಚನೆ ಮಾಡುವಾಗ ಪ್ರತಿಯೊಂದು ಜಾತಿಯ ವ್ಯವಹಾರ, ಅವರ ಇಚ್ಛೆ, ಅವರ ಆವಶ್ಯಕತೆ ಇವುಗಳಲ್ಲಿ ಸಮತೋಲನೆ ಇಡುವಂತಹ ರೀತಿಯಲ್ಲಿ ಅವರ ಪ್ರತಿನಿಧಿಗಳ ಹಂಚಿಕೆಯಾಗಬೇಕು. ಇಂತಹ ಸಮತೋಲನ ಗಣಿತಶಾಸ್ತ್ರದ ರೇಖಾಗಣಿತ ಅಥವಾ ತರ್ಕಶಾಸ್ತ್ರದ ಸಿದ್ಧಾಂತಗಳಿಂದ ಸಾಧ್ಯವಿಲ್ಲ, ಅದಕ್ಕೆ ಸಾಕಷ್ಟು ಬುದ್ಧಿ ಹಾಗೂ ದೂರದೃಷ್ಟಿಯನ್ನು ಉಪಯೋಗಿಸಬೇಕಾಗುತ್ತದೆ. ನನ್ನ ಮಟ್ಟಿಗೆ ಪ್ರತಿನಿಧಿಗಳ ಸಂಖ್ಯೆಯನ್ನು ನಿರ್ಧರಿಸುವಾಗ ಮೇಲಿನ ಎಲ್ಲ ವಿಚಾರಗಳನ್ನು ಗಮನಿಸಬೇಕಾದ್ದು ಮುಖ್ಯವಾದರೂ ಪ್ರತಿನಿಧಿಗಳ ಸಂಖ್ಯೆಯ ಅಡಿಪಾಯ ಅವರವರ ಜಾತಿಯ ಸಂಖ್ಯೆಯನ್ನು ಅವಲಂಬಿಸಿರಬೇಕು.’’ ಅಂದಿದ್ದರು. ಜಾತಿಗಳ ಸಂಖ್ಯೆ ಹಾಗೂ ಅವರ ಆವಶ್ಯಕತೆ ಈ ಎರಡೂ ವಿಷಯಗಳಿಂದ ಪ್ರತಿನಿಧಿಗಳ ಸಂಖ್ಯೆಯನ್ನು ನಿರ್ಧರಿಸಿದರೆ ಜಾತಿಜಾತಿಗಳಲ್ಲಿ ಜಗಳಗಳಾಗುವುದು ನಿಲ್ಲುತ್ತದೆ.

ಸಂಖ್ಯೆಯಲ್ಲಿ ಜಾತಿ ದೊಡ್ಡದಿದ್ದು ಅದರ ಆವಶ್ಯಕತೆಗಳು ಕಡಿಮೆಯಿದ್ದರೆ ಆ ಜಾತಿಗೆ ಹೆಚ್ಚು ಪ್ರತಿನಿಧಿಗಳನ್ನು ಕೊಡುವ ಆವಶ್ಯಕತೆಯಿಲ್ಲ. ಅದಕ್ಕಿಂತ ಸಂಖ್ಯೆಯಲ್ಲಿ ಚಿಕ್ಕದಿದ್ದು ಆವಶ್ಯಕತೆ ಹೆಚ್ಚಿರುವ ಜಾತಿಗೆ ಹೆಚ್ಚು ಪ್ರತಿನಿಧಿಗಳನ್ನು ಕೊಡಲೇಬೇಕು. ಎಲ್ಲ ದೃಷ್ಟಿಯಿಂದ ನೋಡುವಾಗ ಮುಂಬೈ ಕ್ಷೇತ್ರದಲ್ಲಿ (ಏಡನ್ ಬಿಟ್ಟರೆ) ಬ್ರಿಟಿಷರ ಆಳ್ವಿಕೆಯಲ್ಲಿರುವ ಜನರ ಸಂಖ್ಯೆ 16,27,980. ಈ ಸಂಖ್ಯೆಯನ್ನು ಗಮನಿಸಿದಾಗ ಇಲ್ಲಿಯ ಜನರಿಗೆ ಸರಾಸರಿ ನೂರು ಜನರಿಗೆ 8 ಪ್ರತಿನಿಧಿಗಳನ್ನು ಕೊಡಬೇಕು. ಅಂದರೆ ದಲಿತರಿಗೆ ಒಟ್ಟು 9 ಪ್ರತಿನಿಧಿಗಳು ಸಿಗಲೇಬೇಕಿದೆ. ಆವಶ್ಯಕತೆಗಳನ್ನು ಗಮನಿಸಿದಾಗ ಇವರಿಗಿರುವಷ್ಟು ಆವಶ್ಯಕತೆಗಳು ಬೇರೆ ಜಾತಿಗಿಲ್ಲವಾದ್ದರಿಂದ ಇವರಿಗೆ ಈಗ ಇರುವುದಕ್ಕಿಂತ ಹೆಚ್ಚು ಪ್ರತಿನಿಧಿಗಳ ಅಗತ್ಯವಿದೆ. ಇದು ಸಾಕ್ಷಾಧಾರಗಳಿಂದ ಸಿದ್ಧವಾಗಿದ್ದರೂ ವಸ್ತುಸ್ಥಿತಿ ಇದಕ್ಕಿಂತ ಬೇರೆಯಾಗಿದೆ. ಪಾರ್ಲಿಮೆಂಟರಿ ಕಮಿಟಿಯು ದಲಿತರಿಗೆ ಸಾಕಷ್ಟು ಪ್ರತಿನಿಧಿಗಳನ್ನು ಕೊಡುವಂತೆ ಆದೇಶಿಸಿದೆ. ಆದರೆ ‘ಸಾಕಷ್ಟು’ ಎಂದರೆ ಎಷ್ಟು ಎಂದು ನಿರ್ಧರಿಸುವ ಅಧಿಕಾರವನ್ನು ಮಾತ್ರ ಪ್ರಾಂತೀಯ ಸರಕಾರ ಹಾಗೂ ವರಿಷ್ಠ ಸರಕಾರಕ್ಕೆ ವಹಿಸಿದೆ. ಸಾಕಷ್ಟು ವಿಶಾಲ ದೃಷ್ಟಿಕೋನದಿಂದ ಈ ಆದೇಶವನ್ನು ಜಾರಿಗೊಳಿಸಿದ್ದರೂ ಆ ಆದೇಶವನ್ನು ಪಾಲಿಸುವಾಗ ಮಾತ್ರ ಅದೇ ವಿಶಾಲ ದೃಷ್ಟಿಕೋನವನ್ನು ಬಳಸಲಾಗಿದೆ ಅನ್ನುವುದನ್ನು ನಮಗೆ ಬೇಕಿರುವಷ್ಟು ಪ್ರತಿನಿಧಿಗಳು ಸಿಗದೆ ನಾವು ಒಪ್ಪಿಕೊಳ್ಳುವುದಿಲ್ಲ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

share
ವಾರ್ತಾಭಾರತಿ
ವಾರ್ತಾಭಾರತಿ
Next Story
X