Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ...

ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಸಂತಾಪ ಸಭೆ

ದೀಪಕ್‌, ಬಶೀರ್ ನೆನಪಲ್ಲಿ ಮಿಡಿದ ಹೃದಯಗಳು

ವಾರ್ತಾಭಾರತಿವಾರ್ತಾಭಾರತಿ12 Jan 2018 7:21 PM IST
share
ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಸಂತಾಪ ಸಭೆ

ಮಂಗಳೂರು, ಜ.12: ಕಾಟಿಪಳ್ಳದ ದೀಪಕ್ ರಾವ್ ಹಾಗೂ ಆಕಾಶಭವನದ ಅಬ್ದುಲ್ ಬಶೀರ್ ಹತ್ಯೆಯನ್ನು ಖಂಡಿಸಿ ಇಂದು ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ವತಿಯಿಂದ ಭಾವಪೂರ್ಣ ಸಂತಾಪ ಸಭೆ ನಡೆಯಿತು.

ನಗರದ ನೆಹರೂ ಮೈದಾನದಲ್ಲಿ ನಡೆದ ಸಂತಾಪ ಸಭೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿ ಅಗಲಿದ ದೀಪಕ್ ರಾವ್ ಹಾಗೂ ಅಬ್ದುಲ್ ಬಶೀರ್‌ರನ್ನು ಸ್ಮರಿಸಿ ಮೌನಾಚರಿಸಿದರು. ಮಾತ್ರವಲ್ಲದೆ, ಸೇರಿದ್ದವರು ಒಗ್ಗಟ್ಟು ಪ್ರದರ್ಶಿಸಿ, ಮುಂದೆ ಜಿಲ್ಲೆಯಲ್ಲಿ ಇಂತಹ ಅಹಿತಕರ ಘಟನೆಗಳು ಸಂಭವಿಸದಿರಲೆಂದು ಪ್ರಾರ್ಥಿಸಿದರು. ಕೈಗಳನ್ನು ಎತ್ತಿ ಹಿಡಿದು ಒಗ್ಗಟ್ಟು ಪ್ರದರ್ಶನದ ಜತೆಗೆ ಅಗಲಿದವರ ಆತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆಯನ್ನೂ ಸಲ್ಲಿಸಲಾಯಿತು.

ಹತ್ಯೆಯ ಕಾರಣಕರ್ತರ ಬಂಧನವಾಗಲಿ

ಸಂತಾಪ ಸಭೆಯನ್ನು ಉದ್ಘಾಟಿಸಿದ ಮುಸ್ಲಿಂ ಮುಖಂಡ ಹಾಜಿ ಹಮೀದ್ ಕಂದಕ್, ದೀಪಕ್ ರಾವ್ ಹಾಗೂ ಬಶೀರ್ ಎಂಬಿಬ್ಬರು ಅಮಾಯಕರ ಕೊಲೆ ಯಾವ ಕಾರಣಕ್ಕಾಗಿ ಆಗಿದೆ ಮತ್ತು ಹತ್ಯೆಯ ಕಾರಣಕರ್ತರನ್ನು ಪತ್ತೆಹಚ್ಚಿ ಬಂಧಿಸುವ ಕೆಲಸವನ್ನು ಸರಕಾರ ತಕ್ಷಣ ಮಾಡಬೇಕು ಎಂದು ಒತ್ತಾಯಿಸಿದರು.

ಸಮಾಜವನ್ನು ಒಡೆಯುವ ಇಂತಹ ಸಂದರ್ಭದಲ್ಲಿ ಪೊಲೀಸರು, ಸಂಘ ಪರಿವಾರದವರಿಗೆ ಹೆದರಿ ಕುಳಿತುಕೊಳ್ಳುವ ಅಗತ್ಯವಿಲ್ಲ. ಹಾಗೆಂದು ನಾವು ತಲವಾರು ಹಿಡಿದು ಬೀದಿಗೆ ಇಳಿಯಬೇಕಾಗಿಲ್ಲ. ಬದಲಾಗಿ ನಾವೆಲ್ಲಾ ಒಂದಾಗಿ ಜಿಲ್ಲೆಯ ಸಹೋದರತೆಯನ್ನು ಕಾಪಾಡೋಣ ಎಂದು ಅವರು ಈ ಸಂದರ್ಭ ಕರೆ ನೀಡಿದರು.

ಮುಸ್ಲಿಂ ಸಮುದಾಯದ ಒಗ್ಗಟ್ಟನ್ನು ವಿಭಜಿಸಲು ಪ್ರಯತ್ನಿಸುವ, ಗಲಭೆಗಳ ಸಂದರ್ಭ ಮುಸ್ಲಿಂ ನಾಯಕನೆಂದು ಚಾನೆಲ್‌ಗಳಲ್ಲಿ ಫೋಸು ನೀಡುವ ನಮ್ಮೊಳಗಿನ ಕೆಲವರನ್ನೂ ಈ ಸಂದರ್ಭ ನಾವು ಬಹಿಷ್ಕರಿಸಬೇಕು ಎಂದು ಹಮೀದ್ ಕಂದಕ್ ಹೇಳಿದರು.

ಮುಸ್ಲಿಮರ ಓಲೈಕೆ ಬಿಟ್ಟು ರಾಜಕೀಯ ಅಸ್ತಿತ್ವ ಒದಗಿಸಿ: ಎಸ್.ಬಿ. ದಾರಿಮಿ

ಮುಸಲ್ಮಾನರನ್ನು ಯಾವ ಪಕ್ಷದವರೂ ಓಲೈಕೆ ಮಾಡುವುದು ಬೇಡ. ಅದು ಬಿಟ್ಟು ಸಮುದಾಯದ ಶಕ್ತಿಯನ್ನು ಬೆಳೆಸಿ ಭದ್ರತೆ ನೀಡಿ ರಾಜಕೀಯವಾಗಿ ಅಸ್ತಿತ್ವ ಒದಗಿಸಿ ಎಂದು ಪುತ್ತೂರು ಜುಮಾ ಮಸೀದಿ ಖತೀಬ್ ಎಸ್.ಬಿ. ದಾರಿಮಿ ರಾಜಕಾರಣಿಗಳಿಗೆ ಕಿವಿಮಾತು ಹೇಳಿದರು.

ರಾಜಕೀಯಕ್ಕಾಗಿ ಹೆಣಗಳು ಮತ್ತು ದನಗಳು ಬೇಕಾಗುತ್ತದೆ. ಅದರ ಮೂಲಕ ಹಣವನ್ನು ಮಾಡುವ ಉದ್ದೇಶ ಕೆಲವರದ್ದಾಗಿರುತ್ತದೆ. ಆದರೆ ಯಾವುದೇ ತಪ್ಪಿಲ್ಲದೆ ವಿನಾ ಕಾರಣ ಪ್ರಾಣ ಕಳೆದುಕೊಂಡವರ ಹೆತ್ತವರ ಕಣ್ಣೀರು ಹತ್ಯೆ ಮಾಡಿದವರಿಗೆ ತಲೆಮಾರಿನುದ್ದಕ್ಕೂ ಶಾಪವಾಗಿ ಕಾಡಲಿದೆ ಎಂದು ಹೇಳಿದ ಅವರು, ಭಾರತ ಯಾವುದೋ ಒಂದು ಧರ್ಮ ಅಥವಾ ಸಮುದಾಯಕ್ಕೆ ಸೀವಿುತವಾಗಿರದೆ ಎಲ್ಲರದ್ದಾಗಿದೆ ಎಂದರು.

ಕರಾವಳಿಯಲ್ಲಿ ಇದು ಕೊನೆಯ ಸಂತಾಪ ಸೂಚನಾ ಸಭೆಯಾಗಿರಲಿ ಎಂದು ಹೇಳಿದ ಅವರು, ಹತ್ಯೆಗಳು ಇಂದು ನಿನ್ನೆಯದಲ್ಲ. ಆದರೆ ಹಿಂದೆಲ್ಲಾ ಹತ್ಯೆಗಳಾದಾಗ ಯಾಕಾಗಿ ಹತ್ಯೆ ನಡೆಯುತ್ತಿದೆ ಎಂಬುದು ಹತ್ಯೆ ಮಾಡುವವರಿಗೂ ಹತ್ಯೆಗೊಳದಾವರಿಗೂ ತಿಳಿದಿರುತ್ತಿತ್ತು. ದೇಶದ ಸ್ವಾತಂತ್ರದವರೆಗೂ ಇಂತಹ ಪರಿಸ್ಥಿತಿ ಮುಂದುವರಿದಿತ್ತು. ಬಳಿಕವಾದರೂ ಈ ಹತ್ಯೆಗಳು ನಿಲ್ಲುತ್ತವೆ ಎಂದು ಆಶಾಭಾವನೆ ಹೊಂದಲಾಗಿತ್ತಾದರೂ, ರಾಷ್ಟ್ರ ಪಿತನನ್ನೇ ಕೊಲ್ಲುವ ಮೂಲಕ ಗೋಡ್ಸೆ ಸಂತತಿ ದೇಶದಲ್ಲಿ ಮತ್ತೆ ಹತ್ಯೆಯ ಸರಣಿಯನ್ನು ಆರಂಭಿಸಿ ಮುಂದುವರಿಸಿದೆ. ಇತ್ತೀಚಿನ ವರ್ಷಗಳಲ್ಲಿ ಸೇಡು ತೀರಿಸುವ ಪ್ರಕ್ರಿಯೆಯಾಗಿ ಹತ್ಯೆಗಳು ನಡೆಯುತ್ತಿರುವುದು ದುರದೃಷ್ಟಕರ. ಆದರೆ ನಾವು ಮೊದಲು ಮನುಷ್ಯರು, ಧರ್ಮ ಬಳಿಕ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಎಸ್.ಬಿ. ದಾರಿಮಿ ಹೇಳಿದರು.

ಕೂಳೂರು ಜುಮಾ ಮಸೀದಿಯ ಖತೀಬ್ ಬಶೀರ್ ಮದನಿ ಅಲ್‌ ಕಾಮಿಲ್ ಮಾತನಾಡಿ, ಸಮಸ್ಯೆಗಳಿಗೆ ಅಳುಕದೆ ಕ್ಷಮೆಯನ್ನು ಎತ್ತಿಹಿಡಿಯಲು ಕುರ್‌ಆನ್ ಬೋಧಿಸಿದೆ. ಇಂತಹ ಬೆಂಕಿಯಲ್ಲಿ ಅರಳಿದ ಧರ್ಮವನ್ನು ನಿರ್ನಾಮ ಮಾಡಲು ಯಾರಿಂದಲೂ ಸಾಧ್ಯವಾಗದು. ಅಂತಹ ಕನಸು ಕಾಣುವುದು ಮೂರ್ಖತನ. ಶವಗಳ ಮೇಲಿನ ರಾಜಕೀಯ ಬಿಟ್ಟು ನಾವಿಂದು ಪರಸ್ಪರ ಒಂದಾಗಬೇಕು. ಮಾದರಿಯೋಗ್ಯ ಜನಾಂಗವಾಗಿ ನಾವು ಬೆಳೆಯಬೇಕು ಎಂದು ಕರೆ ನೀಡಿದರು.

ಖ್ಯಾತ ವಕೀಲ ದಿನೇಶ್ ಹೆಗ್ಡೆ ಉಳೇಪಾಡಿ ಮಾತನಾಡಿ, ನಾವು ನಮ್ಮ ಧರ್ಮವನ್ನು ಪ್ರೀತಿಸುವ ಜತೆಗೆ ಇತರ ಧರ್ಮವನ್ನು ಗೌರವಿಸಬೇಕು. ಯಾವುದೇ ರೀತಿಯ ಕೋಮು ಭಾವನೆಗಳನ್ನು ಎಲ್ಲರೂ ಖಂಡಿಸಬೇಕು ಎಂದರು.

ಸಭೆಯನ್ನುದ್ದೇಶಿಸಿ ಪಿಎಫ್‌ಐನ ಯಾಸಿರ್ ಹಸನ್, ಯುನಿವೆಫ್‌ನ ರಫಿಯುದ್ದೀನ್ ಕುದ್ರೋಳಿ, ಮಾಜಿ ಮೇಯರ್ ಅಶ್ರಫ್, ಸೈಯದ್ ಮದನಿ ದರ್ಗಾದ ಅಬ್ದುಲ್ ರಶೀದ್, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕಣಚೂರು ಮೋನು ಹಾಗೂ ಇತರರು  ಮಾತನಾಡಿ ಶಾಂತಿಗಾಗಿ ಮನವಿ ಮಾಡಿದರು.

ವೇದಿಕೆಯಲ್ಲಿ ಹತ್ಯೆಗೊಳಗಾದ ಬಶೀರ್‌ ಅವರ ಪುತ್ರ ಇಬ್ರಾಹಿಂ, ಶಾಸಕ ಮೊಯ್ದಿನ್ ಬಾವಾ, ಹಾಜಿ ಮುಸ್ತಫಾ ಕೆಂಪಿ, ಮುಮ್ತಾಝ್ ಅಲಿ, ಹನೀಫ್ ಖಾನ್, ಡಾ. ಅಮೀರ್ ಅಹ್ಮದ್ ತುಂಬೆ, ಶಾಫಿ ಬೆಳ್ಳಾರೆ, ಅಬ್ದುಲ್ ಲತೀಫ್, ಅಬ್ದುಲ್ ಜಲೀಲ್, ನವಾಝ್ ಉಳ್ಳಾಲ, ಸುಹೇಲ್ ಕಂದಕ್ ಮೊದಲಾದವರು ಉಪಸ್ಥಿತರಿದ್ದರು.


ಸಂಸದ ನಳಿನ್ ಕುಮಾರ್‌ರ ಸಹಾನುಭೂತಿ ಬೇಕಾಗಿಲ್ಲ: ಹಮೀದ್ ಕಂದಕ್
ಬಶೀರ್ ಹತ್ಯೆಯಾದಾಗ ಅವರ ಮನೆಗೆ ಹೋಗಿ ಸಂತಾಪ ಹೇಳಲು ಆಗದ ಸಂಸದ ನಳಿನ್ ಕುಮಾರ್ ಕಟೀಲು ಬಶೀರ್ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡುವಂತೆ ಸರಕಾರವನ್ನು ಒತ್ತಾಯಿಸಿದ್ದಾರೆ. ಅವರ ಸಹಾನುಭೂತಿ ನಮಗೆ ಬೇಕಾಗಿಲ್ಲ. ಮುಸ್ಲಿಮರು ಎಂದೂ ಬೇಡುವವರಲ್ಲ. ಸಂಸದರಿಗೆ ಚುನಾವಣೆಗೆ, ಸಂಘಟನೆಗೆ ಬೇಕಾದರೆ ನಾವು ಹಣ ಕೊಡುತ್ತೇವೆ ಎಂದು ಹಾಜಿ ಹಮೀದ್ ಕಂದರ್ ಸವಾಲು ಹಾಕಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X