Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಹಂಬಲ್ ಪಾಲಿಟಿಷಿಯನ್ ನೊಗ್‌ರಾಜ್

ಹಂಬಲ್ ಪಾಲಿಟಿಷಿಯನ್ ನೊಗ್‌ರಾಜ್

ವಾರ್ತಾಭಾರತಿವಾರ್ತಾಭಾರತಿ14 Jan 2018 12:11 AM IST
share
ಹಂಬಲ್ ಪಾಲಿಟಿಷಿಯನ್ ನೊಗ್‌ರಾಜ್

ನಗಿಸುವ ಯತ್ನದಲ್ಲಿ ಕತೆಯೇ ನಗಣ್ಯ!

ಊಸರವಳ್ಳಿ ವ್ಯಕ್ತಿತ್ವದ ರಾಜಕಾರಣಿಗಳು ಹೇಗೆ ಜನರನ್ನು ಮೋಸ ಮಾಡುತ್ತಾರೆ ಮತ್ತು ಜನರು ಕೂಡ ಹೇಗೆ ಅವರಿಗೆ ಸುಲಭವಾಗಿ ಮರುಳಾಗುತ್ತಾರೆ ಎನ್ನುವುದನ್ನು ತೋರಿಸಿರುವ ಚಿತ್ರ ಇದು.

ಚಿತ್ರದಲ್ಲಿ ಡ್ಯಾನಿಶ್ ಸೇಠ್ ವಿನಯವಂತ ರಾಜಕಾರಣಿ ನೊಗ್‌ರಾಜ್ ಆಗಿದ್ದಾರೆ. ‘ಅತಿ ವಿನಯಂ ಧೂರ್ತ ಲಕ್ಷಣಂ’ ಎಂಬುದನ್ನು ಸಾಬೀತು ಮಾಡುವಂಥ ಪಾತ್ರ ಅವರದು. ಕಾರ್ಪೊರೇಟರ್ ಆಗಿರುವ ನೊಗ್‌ರಾಜ ಚಿತ್ರದ ಕ್ಲೈಮ್ಯಾಕ್ಸ್ ವೇಳೆ ಶಾಸಕ ಆಗಿರುತ್ತಾನೆ. ಆದರೆ ಆ ಮಟ್ಟಕ್ಕೆ ಬೆಳೆಯೋದಕ್ಕೆ ಆತ ಯಾವುದೆಲ್ಲ ಮಟ್ಟಕ್ಕೆ ಇಳಿಯುತ್ತಾನೆ ಎನ್ನುವುದೇ ಚಿತ್ರದ ಕತೆ. ಅದರ ಹೊರತಾಗಿ ಏನೇನೂ ವಿಶೇಷತೆಗಳಿಲ್ಲ ಎನ್ನುವುದು ಪ್ರೇಕ್ಷಕರ ವ್ಯಥೆ. ‘ಹಂಬಲ್ ..’ ಚಿತ್ರದ ಟ್ರೇಲರ್ ಕಂಡು ಚಿತ್ರ ನೋಡುವ ಹಂಬಲ ಮೂಡಿಸಿಕೊಂಡವರು ಅಧಿಕ. ಮಾತ್ರವಲ್ಲ, ಈ ಚಿತ್ರ ನಿರ್ಮಿಸಿರುವ ಘಟಾನುಘಟಿಗಳ ಹೆಸರು ಕೂಡ ಸಿನೆಮಾ ಬಗ್ಗೆ ನಿರೀಕ್ಷೆ ಮೂಡಿಸಿತ್ತು. ಆದರೆ ಚಿತ್ರ ಟ್ರೇಲರ್‌ನಿಂದಾಚೆ ಒಂದಷ್ಟು ಹಾಸ್ಯ ದೃಶ್ಯ ಮತ್ತು ಕೊನೆಯಲ್ಲಿ ರಾಜಕೀಯದ ಬದಲಾಗದ ಪರಿಸ್ಥಿತಿಯನ್ನು ಹೇಳುವಲ್ಲಿಗೆ ಕೊನೆಯಾಗುತ್ತದೆ. ಹಾಗಾಗಿ ಇದು ಡ್ಯಾನಿಶ್ ಸೇಠ್‌ನ ರೇಡಿಯೋ, ಯೂ ಟ್ಯೂಬ್ ತಮಾಷೆಯ ಕಾರ್ಯಕ್ರಮ ಮೆಚ್ಚುವವರಿಗೆ ಮತ್ತೊಂದು ದೊಡ್ಡ ಎಪಿಸೋಡ್ ಸಿಕ್ಕಂತೆ ಅನಿಸುತ್ತದೆ, ಅಷ್ಟೇ.

ಅದರ ಹೊರತು ಎರಡೂವರೆ ತಾಸಿನ ಚಿತ್ರದಲ್ಲಿ ಕಂಗ್ಲಿಷ್ ಸಂಭಾಷಣೆಗಳಷ್ಟೇ ತುಂಬಿಕೊಂಡಿವೆ. ಡಬಲ್ ಮೀನಿಂಗ್ ಹುಡುಕುವ ರಸಿಕರಿಗಂತೂ ಹಬ್ಬ! ಡ್ಯಾನಿಶ್ ಸೇಠ್‌ನ ಮಾತಿನ ಸ್ಟೈಲ್ ಬಿಡದಿ ಸ್ವಾಮಿಯನ್ನು, ತೆಲುಗಿನ ‘ಕ್ವಿಕ್ ಗನ್ ಮುರುಗನ್’ ಚಿತ್ರವನ್ನು ನೆನಪಿಸುವಂತಿದೆ. ನೊಗ್‌ರಾಜ್‌ನ ನಿಷ್ಕಲ್ಮಷ ಮನಸ್ಸಿನ ಪತ್ನಿ ಲಾವಣ್ಯಳಾಗಿ ಸುಮುಖಿ ಸುರೇಶ್ ಮನಸೆಳೆಯುವ ಅಭಿನಯ ನೀಡಿದ್ದಾರೆ. ಆಪ್ತ ಸಹಾಯಕ ಮಂಜುನಾಥನ ಪಾತ್ರಕ್ಕೆ ವಿಜಯ್ ಚೆಂಡೂರ್ ತಮ್ಮ ಎಂದಿನ ಶೈಲಿಯಲ್ಲಿ ಲವಲವಿಕೆ ತುಂಬಿದ್ದಾರೆ. ಶಾಸಕ ಜಗತ್ ಪ್ರಭು(ಜೆಎಫ್‌ಕೆ)ವಾಗಿ ಹನುಮಂತೇಗೌಡ ಇದ್ದಾರೆ. ಜನರಿಗಾಗಿ ನಿಜವಾದ ಕಾಳಜಿಯಿಂದ ಸೇವೆ ಮಾಡಬೇಕು ಎಂಬ ಗುರಿಯೊಂದಿಗೆ ಬರುವ ಯುವ ರಾಜಕಾರಣಿ ಅರುಣ್ ಪಾಟೀಲ್ ಪಾತ್ರದಲ್ಲಿ ’ಯುಟರ್ನ್’ ಖ್ಯಾತಿಯ ರೋಜರ್ ನಾರಾಯಣ್ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ಶ್ರುತಿಹರಿಹರನ್ ಕೂಡ ಕಾಣಿಸಿಕೊಂಡಾಗ, ಇನ್ನು ಇವರೇ ಚಿತ್ರಕ್ಕೆ ನಾಯಕ ನಾಯಕಿ ಎಂಬ ಭಾವ ಮೂಡಿದರೆ ಅಚ್ಚರಿಯಿಲ್ಲ. ಆದರೆ ಅದು ಸಂಭವಿಸುವುದಿಲ್ಲ. ಸಮಾಜ ಒಳ್ಳೆಯತನವನ್ನು ಅಷ್ಟು ಬೇಗ ಪ್ರೋತ್ಸಾಹಿಸುವುದಿಲ್ಲ ಎಂಬುದನ್ನು ಕ್ಲೈಮ್ಯಾಕ್ಸ್ ನಲ್ಲಿಯೂ ತೋರಿಸಿರುವುದು ವಿಶೇಷ. ಮಾತ್ರವಲ್ಲ ಇಲ್ಲಿ ಒಳ್ಳೆಯತನದ ಸೋಲನ್ನು ಕೂಡ ಪ್ರೇಕ್ಷಕರು ಸಂಭ್ರಮಿಸುವಂತೆ ತೋರಿಸಿರುವುದು ನಿರ್ದೇಶಕರಿಗೆ ಸಿಕ್ಕ ಗೆಲುವು ಎನ್ನಬಹುದು.

ನಿರ್ದೇಶಕರ ಪ್ರಥಮ ಚಿತ್ರ ಎಂಬ ದೃಷ್ಟಿಯಿಂದ ನೋಡಿದರೆ, ಸಾದ್ ಖಾನ್ ಉತ್ತಮ ಪ್ರಯತ್ನ ಮಾಡಿದ್ದಾರೆ ಎನ್ನಬಹುದು. ಒಟ್ಟಿನಲ್ಲಿ ಚುನಾವಣೆಯ ಪೂರ್ವಭಾವಿಯಾಗಿ ಬಂದಿರುವ ಈ ಚಿತ್ರ ಮತದಾರರಿಗೆ ತಮ್ಮ ಅಭ್ಯರ್ಥಿಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಂದೇಶ ರವಾನಿಸುವಲ್ಲಿ ಯಶಸ್ವಿಯಾದಲ್ಲಿ ಅದೇ ಖುಷಿಯ ವಿಚಾರ.

ತಾರಾಗಣ: ಡ್ಯಾನಿಶ್ ಸೇಠ್, ವಿಜಯ್ ಚೆಂಡೂರ್, ಸುಮುಖಿ ಸುರೇಶ್ ಮೊದಲಾದವರು.
ನಿರ್ದೇಶನ: ಸಾದ್ ಖಾನ್
ನಿರ್ಮಾಣ: ರಕ್ಷಿತ್, ಹೇಮಂತ್, ಪುಷ್ಕರ್

share
ವಾರ್ತಾಭಾರತಿ
ವಾರ್ತಾಭಾರತಿ
Next Story
X