Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ದ್ವೀಪವೊಂದನ್ನು ಖರೀದಿಸಲು ಬಯಸಿದ್ದೀರಾ?...

ದ್ವೀಪವೊಂದನ್ನು ಖರೀದಿಸಲು ಬಯಸಿದ್ದೀರಾ? ಹಾಗಾದರೆ ಈಗಲೇ ಇಲ್ಲಿಗೆ ಹೊರಡಿ...

ವಾರ್ತಾಭಾರತಿವಾರ್ತಾಭಾರತಿ14 Jan 2018 4:15 PM IST
share
ದ್ವೀಪವೊಂದನ್ನು ಖರೀದಿಸಲು ಬಯಸಿದ್ದೀರಾ? ಹಾಗಾದರೆ ಈಗಲೇ ಇಲ್ಲಿಗೆ ಹೊರಡಿ...

ಸ್ಕಾಟ್ಲಂಡ್‌ನ ಉಲ್ವಾ ದ್ವೀಪವನ್ನು 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಾರಾಟಕ್ಕಿಡಲಾಗಿದೆ. ದ್ವೀಪವೊಂದನ್ನು ಖರೀದಿಸಿ ನಿಮ್ಮದೇ ಆದ ಪ್ರತ್ಯೇಕ ಜಗತ್ತು ಹೊಂದಿರಲು ಬಯಸಿದ್ದರೆ ಇದೊಂದು ಅದ್ಭುತ ಕೊಡುಗೆಯಾಗಿದೆ.

 ಉಲ್ವಾ ಸ್ಕಾಟ್ಲಂಡ್‌ನ ವಾಯುವ್ಯ ಕರಾವಳಿಯಾಚೆಯ ಹೆಬ್ರೈಡ್ಸ್ ದ್ವೀಪ ಸಮೂಹದಲ್ಲಿನ ಪ್ರತ್ಯೇಕ ದ್ವೀಪವಾಗಿದ್ದು, ಅಲ್ಲಿನ ಜನಸಂಖ್ಯೆ ಕೇವಲ ಆರು. ದ್ವೀಪದ ಮಾಲಿಕ ಜೇಮಿ ಹೋವರ್ಡ್ ಅದನ್ನು 4.2 ಮಿಲಿಯನ್ ಸ್ಟರ್ಲಿಂಗ್ ಪೌಂಡ್(ಸುಮಾರು 36.68 ಕೋ.ರೂ.)ಗಳಿಗೆ ಬಹಿರಂಗ ಮಾರಾಟಕ್ಕಿರಿಸಿದ್ದಾನೆ.

ಬಿಲಿಯಾಧಿಪತಿಗಳು ಈ ದ್ವೀಪವನ್ನು ನಿರ್ಮಿಸಿ ತಮ್ಮದೇ ಆದ ರೆಸಾರ್ಟ್ ನಿರ್ಮಿಸುವ ಹವಣಿಕೆಯಲ್ಲಿದ್ದಾರೆ. ಆದರೆ ಸಚಿವ ನಿಕೋಲಾ ಸ್ಟರ್ಜನ್ ಅವರು ಸಮುದಾಯ ಖರೀದಿಗೆ ಅವಕಾಶ ಕಲ್ಪಿಸುವ ಮೂಲಕ ಈ ರಮಣೀಯ ನಿಸರ್ಗ ಸೌಂದರ್ಯದ ದ್ವೀಪ ಬಿಲಿಯಾಧಿಪತಿಗಳ ಕೈಸೇರುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ.

ಈ ದ್ವೀಪದಲ್ಲಿ ಮತ್ತೆ ಜನರು ವಾಸವಾಗುವಂತೆ ಮಾಡಲು ಮತ್ತು ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲು ಪ್ರಬಲ ಅವಕಾಶಗಳಿವೆ ಎನ್ನುವುದು ಸಮುದಾಯ ಗುಂಪುಗಳ ಅಭಿಪ್ರಾಯವಾಗಿದೆ. ಈ ದ್ವೀಪದಲ್ಲಿ ಪ್ರವಾಸೋದ್ಯಮವು ಮುಖ್ಯವಾಗಿದ್ದು, ಪ್ರತಿ ಬೇಸಿಗೆಯಲ್ಲಿ ಅಂದಾಜು 5,500 ಪ್ರವಾಸಿಗಳು ಈ ದ್ವೀಪಕ್ಕೆ ಭೇಟಿ ನೀಡುತ್ತಾರೆ.

ಈ ದ್ವೀಪದಲ್ಲಿ 35 ವರ್ಷಗಳ ಕಾಲ ಕೃಷಿಯನ್ನು ಮಾಡಿಕೊಂಡಿದ್ದ ಹೋವರ್ಡ್ ಹೊಸ ಖಾಸಗಿ ಮಾಲಿಕರು ಈ ದ್ವೀಪದಲ್ಲಿ ಹೂಡಿಕೆ ಮಾಡಿ ಅದನ್ನು ಅಭಿವೃದ್ಧಿ ಪಡಿಸಬಹುದೆಂದು ಆಶಯ ಹೊಂದಿದ್ದಾರೆ. ಆದರೆ ದ್ವೀಪದ ಇತರ ನಿವಾಸಿಗಳು ಈ ದ್ವೀಪದ ಒಡೆತನವನ್ನು ಸ್ಥಳೀಯ ಟ್ರಸ್ಟ್ ಹೊಂದಿರಬೇಕು ಎಂದು ಬಯಸಿದ್ದಾರೆ.

ಜನರನ್ನು ದ್ವೀಪಕ್ಕೆ ಆಕರ್ಷಿಸುವ ಉದ್ದೇಶದೊಂದಿಗೆ ಸಮುದಾಯ ಖರೀದಿಗೆ ನಾರ್ಥ್ ವೆಸ್ಟ್ ಮಲ್ ಕಮ್ಯುನಿಟಿ ವುಡ್‌ಲ್ಯಾಂಡ್ ಕಂಪನಿಯು ಆಸಕ್ತಿಯನ್ನು ತೋರಿಸಿದೆ.

  ದ್ವೀಪದ ಖರೀದಿಗಾಗಿ ಕ್ರೌಡ್ ಫಂಡಿಂಗ್ ಮೂಲಕ ಈಗಾಗಲೇ 21,000 ಪೌಂಡ್‌ಗೂ ಅಧಿಕ ಮೊತ್ತವನ್ನು ಸಂಗ್ರಹಿಸಲಾಗಿದೆ. ಉಲ್ವಾ ಖರೀದಿಗೆ ಅಗತ್ಯವಿರುವ 4.2 ಮಿಲಿಯನ್ ಪೌಂಡ್‌ಗಳನ್ನು ಸಂಗ್ರಹಿಸಲು ಈಗ ಕೇವಲ ಆರು ತಿಂಗಳ ಸಮಯಾವಕಾಶ ಉಳಿದುಕೊಂಡಿದೆ. ಉಲ್ವಾದಲ್ಲಿ ಒಟ್ಟು ಎಂಟು ಮನೆಗಳಿದ್ದು, ಈ ಪೈಕಿ ಐದು ಖಾಲಿ ಇವೆ. ಒಂದರಲ್ಲಿ ರಜಾದಿನಗಳಲ್ಲಿ ದ್ವೀಪಕ್ಕೆ ಬರುವ ಪ್ರವಾಸಿಗಳಿಗೆ ತಮ್ಮ ಊಟವನ್ನು ಬೇಯಿಸಿಕೊಳ್ಳಲು ಸೌಲಭ್ಯ ಕಲ್ಪಿಸಲಾಗಿದೆ. ದ್ವೀಪದಲ್ಲಿ ಯಾವುದೇ ಟಾರ್ ರಸ್ತೆಗಳಿಲ್ಲ ಮತ್ತು ಕ್ವಾಡ್ ಬೈಕ್‌ಗಳು ಪ್ರಮುಖ ಸಾರಿಗೆ ಸೌಲಭ್ಯವಾಗಿವೆ. ಮಿಂಕ್ ವೇಲ್, ಡಾಲ್ಫಿನ್ ಮತ್ತು ಸೀ ಅಟರ್‌ಗಳು ಇಲ್ಲಿಯ ಸಮುದ್ರದಲ್ಲಿ ಕಾಣಲು ಸಿಗುತ್ತವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X