ಅಂಪಾರು: ತೋಡಿಗೆ ಬಿದ್ದು ಮಹಿಳೆ ಮೃತ್ಯು
ಶಂಕರನಾರಾಯಣ, ಜ.14: ನೀರಿನ ತೋಡಿಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಅಂಪಾರು ಗ್ರಾಮದ ಕಂಚಾರು ಎಂಬಲ್ಲಿ ಜ.13ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಅಂಪಾರು ನಿವಾಸಿ ಶಾಂತ (52) ಎಂದು ಗುರುತಿಸಲಾಗಿದೆ. ಇವರು ಮನೆಯ ಸಮೀಪದ ಅಡಿಕೆ ತೋಟದಲ್ಲಿ ಅಡಿಕೆ ಹೆಕ್ಕುವಾಗ ಅಕಸ್ಮಿಕ ವಾಗಿ ನೀರಿನ ತೋಡಿಗೆ ಬಿದ್ದು ಮೃತ್ತಪಟ್ಟಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





