ಅಪರಿಚಿತ ವಾಹನ ಢಿಕ್ಕಿ: ನವಿಲು ಮೃತ್ಯು
![ಅಪರಿಚಿತ ವಾಹನ ಢಿಕ್ಕಿ: ನವಿಲು ಮೃತ್ಯು ಅಪರಿಚಿತ ವಾಹನ ಢಿಕ್ಕಿ: ನವಿಲು ಮೃತ್ಯು](https://www.varthabharati.in/sites/default/files/images/articles/2018/01/16/sattha navilu.jpg)
ಬಣಕಲ್, ಜ.16: ಕೂವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಬ್ಗಲ್ ಸಮೀಪ ಅಪರಿಚಿತ ವಾಹನಕ್ಕೆ ಸಿಲುಕಿ ನವಿಲೊಂದು ಮೃತಪಟ್ಟಿರುವ ಘಟನೆ ನಡೆದಿದೆ.
ಕೊಟ್ಟಿಗೆಹಾರ-ಶೃಂಗೇರಿ, ಬಾಳೆಹೊನ್ನೂರು ಮಾರ್ಗವಾಗಿ ದಿನ ನಿತ್ಯ ನೂರಾರು ಪ್ರವಾಸಿಗರು ಸಂಚರಿಸುತ್ತಾರೆ. ರಸ್ತೆ ಎರಡು ಬದಿಗಳಲ್ಲಿ ಕಾಫಿ ತೋಟ ಮತ್ತು ಅರಣ್ಯ ಪ್ರದೇಶವಿದೆ. ಈ ಪರಿಸರದಲ್ಲಿ ನವಿಲುಗಳು ಹೆಚ್ಚಾಗಿ ಕಂಡು ಬರುತ್ತವೆ. ನವಿಲುಗಳು ರಸ್ತೆಯನ್ನು ದಾಟುವಾಗ ವಾಹನಗಳಿಗೆ ಸಿಲುಕಿ ಸಾವಿಗೀಡಾಗುವುದು ಹೆಚ್ಚುತ್ತಿದೆ ಎನ್ನಲಾಗಿದೆ.
ಸೋಮವಾರ ಗಬ್ಗಲ್ ಸಮೀಪ ಯಾವುದೋ ವಾಹನಕ್ಕೆ ಸಿಲುಕಿ ನವಿಲೊಂಡು ಮೃತಪಟ್ಟಿದೆ. ಪ್ರವಾಸಿಗರು ಈ ಮಾರ್ಗವಾಗಿ ಸಂಚರಿಸುವಾಗ ಎಚ್ಚರಿಕೆ ವಹಿಸಬೇಕು. ಹೆದ್ದಾರಿ ಪ್ರಾಧಿಕಾರ ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸುವ ಫಲಕಗಳನ್ನು ರಸ್ತೆ ಬದಿಯಲ್ಲಿ ಅಲ್ಲಲ್ಲಿ ಅಳವಡಿಸಬೇಕು ಎಂದು ಗಬ್ಗಲ್ ಗ್ರಾಮಸ್ಥ ಆಟೋ ಹಕೀಮ್ ಎಂಬವರು ಹೇಳಿಕೆ ಮೂಲಕ ಒತ್ತಾಯಿಸಿದ್ದಾರೆ.
Next Story