ಮೌನೇಶ್ ಸಾವು ಪ್ರಕರಣ; ಪತ್ರಕರ್ತರಿಂದ ಶೃದ್ದಾಂಜಲಿ ಹಾಗೂ ಮನವಿ

ಗದಗ,ಜ.16: ಇತ್ತೀಚಿಗೆ ಪತ್ರಕರ್ತ ಮೌನೇಶ್ ಸಾವಿನ ತನಿಖೆ ಹಾಗೂ ಹೃದಯಘಾತ ಮತ್ತು ಅಪಘಾತಗಳಿಂದ ಸಾವನ್ನಪ್ಪಿದ ಪತ್ರಕರ್ತರ ಕುಟುಂಬಗಳಿಗೆ ಸರ್ಕಾರವು ಆರ್ಥಿಕ ನೆರವು ನೀಡಬೇಕೆಂದು ಆಗ್ರಹಿಸಿ ಜಿಲ್ಲೆಯ ಕಾರ್ಯನಿರತ ಪತ್ರಕರ್ತರು ಅಪರ ಜಿಲಾಧಿಕಾರಿಗೆ ಮನವಿ ಸಲ್ಲಿಸಿದರು.
ಇತ್ತೀಚಿಗೆ ಬೈಕ್ ಅಪಘಾತದಲ್ಲಿ ನಿಧನದಾರ ಪತ್ರಕರ್ತ ಶಿರಸಿ ಸುದ್ದಿ ವಾಹಿನಿ ವರದಿಗಾರ ಮೌನೇಶ್ ಸಾವು ಪತ್ರಕರ್ತರಲ್ಲಿ ದಿಗ್ಭ್ರಮೆ ಮೂಡಿಸಿದೆ. ಇತ್ತಿಚಿನ ಬೆಳವಣಿಗೆ ಗಮನಕ್ಕೆ ತೆಗೆದುಕೊಂಡಾಗ ಈ ಸಾವು ಅಪಘಾತದಿಂದಾಗಿರದೇ, ನಿಯೋಜಿತವಾಗಿ ಕೊಲೆಯಾಗಿರಬಹುದೆಂಬ ಶಂಕೆ ಮೂಡಿಸಿದೆ . ಅಪಘಾತದ ಸ್ಥಳದಲ್ಲಿನ ಪರಿಸ್ಥಿತಿ ಕೂಡ ಇದಕ್ಕೆ ಪೂರಕವೆಂಬಂತಿದೆ. ಹೀಗಾಗಿ ಈ ಸಾವಿನ ಕುರಿತು ಸೂಕ್ತ ತನಿಖೆ ನಡೆಸಬೇಕು. ಹಾಗೂ ಅಪಘಾತದಲ್ಲಿ ಸಾವನ್ನಪ್ಪಿದ ಮೌನೇಶ್ ಅವರ ಮೃತದೇಹವನ್ನು ಸ್ಥಳೀಯ ಸಂಸ್ಥೆಯ ಕಸ ವಿಲೇವಾರಿ ವಾಹನದಲ್ಲಿ ಸಾಗಿಸಿದ್ದು, ಪೊಲೀಸರು ಮತ್ತು ತಾಲೂಕು ಆಡಳಿತದ ಬೇಜವಾಬ್ದಾರಿಗೆ ಸಾಕ್ಷಿಯಾಗಿರುವುದು ಖಂಡನೀಯ ಸಾವಿನ ಸಂದರ್ಭದಲ್ಲಿ ಮಾನವೀಯತೆಯನ್ನು ತೋರಿಸಬೇಕಾದ ಪೊಲೀಸರು ಮತ್ತು ತಾಲೂಕು ಆಡಳಿತದ ವರ್ತನೆ ಖಂಡನೀಯ. ಇದಕ್ಕೆ ಸಂಬಂಧಿಸಿದಂತೆ ತಪ್ಪೆಸಗಿದ ಪೊಲೀಸರು ಮತ್ತು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಲಾಗಿದೆ.
ಸಾಮಾನ್ಯವಾಗಿ ಪತ್ರಕರ್ತರು ಹಾಗೂ ಛಾಯಾಗ್ರಾಹಕರು ಯಾವುದೇ ಜೀವನ ಭದ್ರತೆ ಇಲ್ಲದೇ ಕೆಲಸ ನಿರ್ವಹಿಸುವವರು. ಅಂಥವರ ಅನಿರೀಕ್ಷಿತ ಸಾವುಗಳಿಂದ ಅವರ ಕುಟುಂಬಗಳು ಅರ್ಥಿಕ ಸಮಸ್ಯೆ ಎದುರಿಸುವಂತಾಗುತ್ತಿದೆ. ಮೌನೇಶ ಕುಟುಂಬವೂ ಇದಕ್ಕೆ ಹೊರತಲ್ಲ. ಹೀಗಾಗಿ ಹೃದಯಾಘಾತ ಹಾಗೂ ಅಪಘಾತಗಳಿಂದ ಪತ್ರಕರ್ತರು ಸಾವನ್ನಪ್ಪಿದಾಗ ಅವರ ಕುಟುಂಬಕ್ಕೆ ಸರ್ಕಾರ ನೆರವು ನೀಡುವ ಯೋಜನೆ ರೂಪಿಸಬೇಕು. ಇತ್ತೀಚಿಗೆ ಅಪಘಾತದಲ್ಲಿ ನಿಧನರಾದ ಪತ್ರಕರ್ತರಾದ ಮೌನೇಶ್ ಹಾಗೂ ವಿರೇಶ್ ಹಿರೇಮಠ ಕುಟುಂಬಗಳಿಗೆ ಸರ್ಕಾರ ಕೂಡಲೇ ಆರ್ಥಿಕ ನೆರವು ನೀಡಬೇಕು ಎಂದು ಜಿಲ್ಲಾ ಕಾರ್ಯನಿರತ ಪರ್ತಕರ್ತರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನೂರಅಹ್ಮದ ಮಕಾನದಾರ, ಎಚ್.ಎಂ.ಶರೀಪನವರ, ಶಾಂತಕುಮಾರ ಹಂಪಿ, ಮಂಜುನಾಥ ಬಮ್ಮನಕಟ್ಟಿ, ಶಿವಕುಮಾರ ಕುಷ್ಟಗಿ, ಗಣೇಶ ಪೈ, ಮೃತುಂಜಯ ಕಲ್ಮಠ, ಪವನ ದೇಶಪಾಂಡೆ, ಸಂಜೀವ ಪಾಂಡ್ರೆ, ಸಂತೋಷ ಕೊನ್ನೂರ, ಚಮನ್ ಹೊಸಮನಿ, ದಾವಲಸಾಬ ತಾಳಿಕೋಟಿ, ಅಮೃತ ಅಜ್ಜಿ, ಎಸ್.ಎಂ.ನರಗುಂದಕರ, ರಾಜು ಹೆಬ್ಬಳ್ಳಿ, ಜೋಮನ್ ವರ್ಗಿಸ್, ಶಿವಾನಂದ ಹಿರೇಮಠ, ಫಾರೂಕ್ ಮಕಾನದಾರ,ವೆಂಕಟೇಶ ಇಮರಾಪೂರ, ರಾಮಣ್ಣ ವಗ್ಗಿ, ಝಾಕೀರ ನರಗುಂದ, ಶಂಕರ ಗುರಿಕಾರ, ವಿನಾಯಕ ಚೌಡಾಪೂರ, ಪ್ರಕಾಶ ಗುಡ್ಡಿನ,ಲಕ್ಷ್ಮಣ, ಬನೇಶ ಕುಲಕರ್ಣಿ, ರವಿ ಗಿರಣಿ, ಮಂಕೇಶ ಮದ್ನೂರ,ಪರಶುರಾಮ್ ಹಳ್ಳದ, ರಾಜು ಅಂಗಡಿ, ಖಾಜಾ, ಪವನ, ಎಲ್.ಎಸ್.ಅಬ್ಬಿಗೇರಿ, ಮೋಹನ ಎಚ್. ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಮೌನೇಶ್ ಹಾಗೂ ವಿರೇಶ ಹಿರೇಮಠ ಅವರ ಆತ್ಮಕ್ಕೆ ಶಾಂತಿ ಕೋರಿ ಶೃದ್ದಾಂಜಲಿ ಸಲ್ಲಿಸಲಾಯಿತು.







