ಕೊಳ್ಳೇಗಾಲ: ಬೇಡಿಕೆ ಈಡೇರಿಸಲು ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ
![ಕೊಳ್ಳೇಗಾಲ: ಬೇಡಿಕೆ ಈಡೇರಿಸಲು ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ ಕೊಳ್ಳೇಗಾಲ: ಬೇಡಿಕೆ ಈಡೇರಿಸಲು ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ](/images/placeholder.jpg)
ಕೊಳ್ಳೇಗಾಲ,ಜ.17: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತರು ಪ್ರತ್ಯೇಕವಾಗಿ ಬುಧವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿದ್ದರು.
ಪಟ್ಟಣದ ಬಸವಲಿಂಗಪ್ಪ ಕಾಲೇಜು ಸಮೀಪದಲ್ಲಿ ಅಂಗನವಾಡಿ ಕಾರ್ಯಕರ್ತರು ಸಮಾವೇಶಗೊಂಡು ಮೆರವಣಿಗೆಯ ಮೂಲಕ ತೆರಳಿ ಬೇಡಿಕೆಗಳು ಈಡೇರಿಸುವಂತೆ ಗ್ರೇಡ್-2 ತಹಸಿಲ್ದಾರ್ ಮನವಿ ಸಲ್ಲಿಸಿದರು.
ನಂತರ ಆಶಾ ಕಾರ್ಯಕರ್ತರು ಎಂ.ಜಿ.ಎಸ್.ವಿ ಮೈದಾನದಲ್ಲಿ ಸಮಾವೇಶಗೊಂಡು ತಾ.ಪಂ ವೃತ್ತ, ಐ ಬಿ ರಸ್ತೆಯ ಮೂಲಕ ತೆರಳಿ ತಾಲ್ಲೂಕು ಕಛೇರಿಯಲ್ಲಿ ಮನವಿ ಸಲ್ಲಿಸಿದರು.
ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ರೂ.18.000ಗಳ ಕನಿಷ್ಟ ಕೂಲಿಯನ್ನು ಇಎಸ್ಐ, ಪಿಎಫ್, ಗ್ರಾಚ್ಯುಟಿಯನ್ನು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತಯರಿಗೆ ಮತ್ತು ಸಹಾಯಕಿಯರಿಗೆ ಕೊಡದೇ ಕೇಂದ್ರ ಸರ್ಕಾರ ವಂಚನೆ ಮಾಡಿದೆ. ಅದನ್ನು ಕೂಡಲೇ ಜಾರಿಗೆ ತರಬೇಕು, ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಹಾಗೂ ಆಶಾ ಕಾರ್ಯಕರ್ತರುಗಳಿಗೆ ‘ಸಿ’ ಮತ್ತು ‘ಡಿ’ ಗ್ರೂಫ್ ನೌಕರರನ್ನಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಬೇಕು, ನಿವೃತ್ತಿಯಾದ ಕಾರ್ಯಕರ್ತರಿಗೆ ಮತ್ತು ಸಹಾಯಕರಿಗೆ ಕನಿಷ್ಟ 3 ಸಾವಿರ ಪಿಂಚಣಿಯನ್ನು ಕೊಡಬೇಕು ಸೇರಿದಂತೆ ಇನ್ನೀತರರ ಬೇಡಿಕೆಗಳನ್ನು ಒತ್ತಾಯಿಸಿ ಪ್ರತಿಭಟನೆಯನ್ನು ನಡೆಸಿದರು.
ಪ್ರತಿಭಟನೆಯಲ್ಲಿ ಅಂಗನವಾಡಿ ಕಾರ್ಯಕರ್ತರ ಸಂಘದ ಅಧ್ಯಕ್ಷೆ ಸರಳಪ್ರೇಮಕುಮಾರಿ, ಉಪಾಧ್ಯಕ್ಷೆ ಚಿಕ್ಕತಾಯಮ್ಮ, ಕಾರ್ಯದರ್ಶೀ ವಿಜಯಲಕ್ಷ್ಮೀ, ಮರಿಯಮ್ಮ, ಮಹದೇಔಮ್ಮ, ಸೌಭಾಘ್ಯ, ವನಜಾಕ್ಷಿ, ರೋಜಾ ಹಾಗೂ ಆಶಾ ಕಾರ್ಯಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಉಮಾಮಹೇಶ್ವರಿ, ತಾಲ್ಲೂಕು ಸಂಯೋಜಕಿ ಸುಲೋಚನ, ಎ.ಐ.ಯು.ಟಿ.ಸಿ ಸದಸ್ ಪುಟ್ಟರಾಜು, ಚಂದ್ರಮ್ಮ, ಸಿದ್ದನಾಗಮ್ಮ, ಮಂಜುಳ, ಸುಮತಿ, ಜಲಮ್ಮ, ಶೋಭಾ, ವಸಂತಾ ಹಾಗೂ ಇತರರರು ಹಾಜರಿದ್ದರು.