ಮೈಸೂರು: ಪಾಲೇಕರ್, ಮನೋಹರ್ ಪರಿಕ್ಕರ್ ವಿರುದ್ಧ ಪ್ರತಿಭಟನೆ
ಮೈಸೂರು,ಜ.19: ಮೈಸೂರು ಜಿಲ್ಲಾ ಕನ್ನಡ ಚಳುವಳಿಗಾರರ ಸಂಘದ ವತಿಯಿಂದ ಮೈಸೂರಿನ ನ್ಯಾಯಾಲಯದ ಮುಂಭಾಗವಿರುವ ಗಾಂಧಿ ಪ್ರತಿಮೆ ಬಳಿ ವಿನೋದ್ ಪಾಲೇಕರ್ ಹಾಗೂ ಮನೋಹರ್ ಪರಿಕ್ಕರ್ ವಿರುದ್ಧ, ಅವರ ಭಾವಚಿತ್ರಗಳನ್ನು ಚಪ್ಪಲಿಗೆ ಅಂಟಿಸಿ ಚಪ್ಪಲಿ ಚಳುವಳಿಯನ್ನು ನಡೆಸಲಾಯಿತು.
ಶುಕ್ರವಾರ ನಡೆದ ಚಳುವಳಿಯಲ್ಲಿ ಪಾಲ್ಗೊಂಡು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗೋವಾದ ನೀರಾವರಿ ಸಚಿವರಾಗಲೀ, ನೀರಾವರಿ ತಜ್ಞರಾಗಲೀ ಯಾವ ಕಾರಣಕ್ಕೂ ಕರ್ನಾಟಕದ ಗಡಿಯೊಳಗೆ ಕಾಲಿಡದಂತೆ ನೋಡಿಕೊಳ್ಳಬೇಕು. ಅವರು ಒಂದು ವೇಳೆ ಅಕ್ರಮವಾಗಿ ಕರ್ನಾಟಕದ ಗಡಿಯೊಳಗೆ ಪ್ರವೇಶಿಸಿದರೆ ಅವರುಗಳನ್ನು ಬಂಧಿಸಿ ಕಾನೂನು ರೀತಿಯ ಕ್ರಮ ಕೈಗೊಂಡು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಕಳೆದ ಎರಡೂವರೆ ವರ್ಷಗಳಿಂದ ಮಹದಾಯಿಗಾಗಿ ಹೋರಾಟ ನಡೆಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರವೇಶಿಸಿ ಮಹದಾಯಿ ಸಮಸ್ಯೆಯನ್ನು ಇತ್ಯರ್ಥಗೊಳಿಸಿ ಕರ್ನಾಟಕದ ಜನತೆಯ ಹಿತವನ್ನು ಕಾಪಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಬಿ.ಎ. ಶಿವಶಂಕರ್, ಬಸವರಾಜು, ಸುರೇಶ್ ದೂರ, ಸೋಗಳ್ಳಿ ತುಂಗ, ಜಯಕುಮಾರ್, ಕುಮಾರ್ ವೀರನಗೆರೆ, ಅಜಯ್, ರಾಮಣ್ಣ, ಸೇರಿದಂತೆ ಹಲವರು ಪಾಲ್ಗೊಂಡಿದ್ದರು.