Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಂಗಳೂರಲ್ಲಿ ಕೆಲಸ ಮಾಡಿದ ಮುಸ್ಲಿಂ...

ಮಂಗಳೂರಲ್ಲಿ ಕೆಲಸ ಮಾಡಿದ ಮುಸ್ಲಿಂ ಜಿಲ್ಲಾಧಿಕಾರಿಗಳೆಷ್ಟು ?

ಕರಾವಳಿ ಕಂಡಿದೆ 128 ಕಲೆಕ್ಟರ್ಸ್

ರಶೀದ್ ವಿಟ್ಲ.ರಶೀದ್ ವಿಟ್ಲ.21 Jan 2018 11:30 PM IST
share
ಮಂಗಳೂರಲ್ಲಿ ಕೆಲಸ ಮಾಡಿದ ಮುಸ್ಲಿಂ ಜಿಲ್ಲಾಧಿಕಾರಿಗಳೆಷ್ಟು ?

ಮಂಗಳೂರು, ಜ. 21: ಜಿಲ್ಲಾಧಿಕಾರಿ ಕಚೇರಿ ಸ್ಥಾಪನೆಯಾಗಿ 219 ವರ್ಷಗಳು ಸಂದವು. 1799 ರಿಂದ 1947 ರ ತನಕ 80 ಜಿಲ್ಲಾಧಿಕಾರಿಗಳು / ಕಲೆಕ್ಟರರು ಬ್ರಿಟಿಷ್ ಆಡಳಿತ ವ್ಯವಸ್ಥೆಯಲ್ಲಿ ಕೆಲಸ ನಿರ್ವಹಿಸಿದ್ದಾರೆ. 

1799 ರಿಂದ 1857 ರ ತನಕ ಈಸ್ಟ್ ಇಂಡಿಯಾ ಕಂಪೆನಿ ಹಾಗೂ 1857 ರಿಂದ 1947 ರ ತನಕ ನೇರವಾಗಿ ಬ್ರಿಟಿಷ್ ಸಾಮ್ರಾಜ್ಯದ ಅಡಿ ಮದ್ರಾಸ್ ಪ್ರಾಂತ್ಯದಲ್ಲಿ ಸೌತ್ ಕೆನರಾ ಕಲೆಕ್ಟರರಾಗಿ 80 ಮಂದಿ ಕೆಲಸ ಮಾಡಿದ್ದಾರೆ. 1947 ರ ಸ್ವಾತಂತ್ರ್ಯ ನಂತರ ಈ ತನಕ 48 ಜಿಲ್ಲಾಧಿಕಾರಿಗಳು ಹೀಗೇ ಸ್ವಾತಂತ್ರ್ಯ ಪೂರ್ವ ಹಾಗೂ ನಂತರ ಒಟ್ಟು 128 ಜಿಲ್ಲಾಧಿಕಾರಿಗಳು ಅಥವಾ ಕಲೆಕ್ಟರರನ್ನು ನಮ್ಮ ಜಿಲ್ಲೆ ಕಂಡಿದೆ.

ನಮ್ಮ ಜಿಲ್ಲೆಯ ಮೊದಲ ಜಿಲ್ಲಾಧಿಕಾರಿಯಾಗಿ ಮೇಜರ್ ಮುನ್ರೋ ಅವರು 1799ರಲ್ಲಿ ಅಧಿಕಾರ ವಹಿಸಿಕೊಂಡರು. ಅಂದಿನಿಂದ ಇಂದಿನ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರ ತನಕ ಜಿಲ್ಲೆ ಕಂಡ 128 ಜಿಲ್ಲಾಧಿಕಾರಿಗಳಲ್ಲಿ ಮುಸ್ಲಿಂ ಜಿಲ್ಲಾಧಿಕಾರಿಗಳು ಎಷ್ಟು ಮಂದಿ ಬಂದು ಹೋಗಿದ್ದಾರೆ ಗೊತ್ತಾ ?

ಹಿಂದಿನ ಕಾಲದಲ್ಲಿ ಮುಸ್ಲಿಮರಲ್ಲಿ ಶಿಕ್ಷಣ ಕಮ್ಮಿ ಎಂದು ಹೇಳೋರೇ ಅಧಿಕ. ಆದರೆ ಮುಸ್ಲಿಮರೂ ಶಿಕ್ಷಣದಲ್ಲಿ ಮುಂಚೂಣಿಯಲ್ಲಿದ್ದರು ಅನ್ನುವುದು ಗತಕಾಲದ ಸಂಗತಿಯಿಂದ ವೇದ್ಯವಾಗುತ್ತದೆ. ಮುಸ್ಲಿಂ ಜಿಲ್ಲಾಧಿಕಾರಿ ಅಂತ ಹೇಳುವಾಗ ನೆನಪಾಗುವುದು ಎ.ಬಿ. ಇಬ್ರಾಹೀಂ. ಸ್ವಲ್ಪ ಹಿರಿ ತಲೆಮಾರಲ್ಲಿ ಕೇಳಿದ್ರೆ ಪಿ.ಎಂ. ಮುಜಾಹಿದ್ ಅಥವಾ ಅರಕ್ಕಲ್ ಕುಂಞಿ ಅಹ್ಮದ್ ಅವರ ನೆನಪಿರಬಹುದೇನೋ. ಆದರೆ ದ.ಕ.ಜಿಲ್ಲೆಯ 128 ಜಿಲ್ಲಾಧಿಕಾರಿಗಳಲ್ಲಿ ಈ ತನಕ ಒಟ್ಟು 9 ಮಂದಿ ಮುಸ್ಲಿಂ ಜಿಲ್ಲಾಧಿಕಾರಿಗಳು ಕೆಲಸ ಮಾಡಿದ್ದಾರೆ ಅನ್ನುವುದು ಬಹುತೇಕ ಜನರಿಗೆ ಗೊತ್ತಿಲ್ಲ.

ನಾಲ್ಕೈದು ದಿನಗಳ ಹಿಂದೆ ಒಂದು ವಿಷಯಕ್ಕಾಗಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರಿಗೆ ಫೋನ್ ಮಾಡಿದ್ದೆ. ಮರುದಿನ ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ಬರಲು ಹೇಳಿದ್ದರು. ಹೇಳಿದ ಸಮಯಕ್ಕಿಂತ ಅರ್ಧ ಗಂಟೆ ಮುಂಚೆಯೇ ತಲುಪಿದ್ದೆ. ಜಿಲ್ಲಾಧಿಕಾರಿ ಕಟ್ಟಡದ ಎರಡನೇ ಮಹಡಿಯಲ್ಲಿ ಅವರ ಕಚೇರಿಯಿದೆ. ಸಮಯ ಇದ್ದುದರಿಂದ ಆ ಅಂತಸ್ತಿನ ತುಂಬಾ ಕಣ್ಣಾಡಿಸಿದಾಗ ಅಲ್ಲಿ ಎಲ್ಲಾ 128 ಜಿಲ್ಲಾಧಿಕಾರಿಗಳ ವಿವರಗಳನ್ನು ದಾಖಲಿಸಲಾಗಿತ್ತು. ಜತೆಗೆ ಕರಾವಳಿಯ ಕಲೆ, ಸಂಸ್ಕೃತಿ, ಉದ್ಯಮ, ಧಾರ್ಮಿಕ ವೈಭವಗಳನ್ನು ಪ್ರತಿಬಿಂಬಿಸುವ ಚಿತ್ರಗಳನ್ನು ಅಳವಡಿಸಲಾಗಿತ್ತು. ಆ ಅಂತಸ್ತು ತುಂಬಾ ಮೈನವಿರೇಳಿಸುವ ಚಿತ್ರಪಟಗಳಿದ್ದವು.

ಸ್ವಾತಂತ್ರ್ಯ ಪೂರ್ವ 47ನೆ ಸೌತ್ ಕೆನರಾ ಜಿಲ್ಲಾಧಿಕಾರಿಯಾಗಿ ಅಝೀಝುದ್ದೀನ್ ಹುಸೇನ್ ಸಾಹೇಬ್ ಬಹದ್ದೂರ್ (1904-05), 65ನೆ ಜಿಲ್ಲಾಧಿಕಾರಿಯಾಗಿ ಜೆ. ಹುಸೈನ್ (1928-31), 67ನೆ ಜಿಲ್ಲಾಧಿಕಾರಿಯಾಗಿ ಎಂ.ಡಿ. ಹುಮಾಯೂನ್ ಸಾಹೇಬ್ ಬಹದ್ದೂರ್ (1935), 70ನೆ ಜಿಲ್ಲಾಧಿಕಾರಿಯಾಗಿ ಖಾನ್ ಬಹದ್ದೂರ್ ಶರೀಫ್ ಅಹ್ಮದಾಲಿ ಸಾಹೇಬ್ ಬಹದ್ದೂರ್ (1939), 75ನೆ ಕಲೆಕ್ಟರರಾಗಿ ಎಂ. ಕರ್ಮತುಲ್ಲಾ (1942) ಕಾರ್ಯನಿರ್ವಹಿಸಿದ್ದರು.

ಸ್ವಾತಂತ್ರ್ಯ ನಂತರ 83ನೆ ಜಿಲ್ಲಾಧಿಕಾರಿಯಾಗಿ ಸೈಯದ್ ಅಹ್ಮದ್ ಸಾಹೇಬ್ (1949-50), 89ನೆ ಜಿಲ್ಲಾಧಿಕಾರಿ ಅರಕ್ಕಲ್ ಕುಂಞಿ ಅಹ್ಮದ್ (1954-55), 94ನೆ  ಜಿಲ್ಲಾಧಿಕಾರಿಯಾಗಿ ಪಿ.ಎಂ. ಮುಜಾಹಿದ್ (1964-65) ಹಾಗೂ 126ನೆ ಜಿಲ್ಲಾಧಿಕಾರಿಯಾಗಿ ಎ.ಬಿ. ಇಬ್ರಾಹೀಂ (2013-16) ಕೆಲಸ ಮಾಡಿದ್ದು ತಿಳಿದುಬರುತ್ತದೆ.

ಜಿಲ್ಲಾಧಿಕಾರಿಯಂತಹ ದೊಡ್ಡ ಹುದ್ದೆಯಲ್ಲೂ ಕರಾವಳಿಯಲ್ಲಿ ಕೆಲಸ ಮಾಡಿದ ಈ ಹಿರಿಯರಲ್ಲದೆ ಎಲ್ಲಾ 128 ಜನರ ವಿವರವನ್ನು ಶೇಖರಿಸಿಟ್ಟು ಸಾರ್ವಜನಿಕವಾಗಿ ಪ್ರದರ್ಶಿಸಿರುವುದು ಸ್ತುತ್ಯರ್ಹ.
- ರಶೀದ್ ವಿಟ್ಲ

share
ರಶೀದ್ ವಿಟ್ಲ.
ರಶೀದ್ ವಿಟ್ಲ.
Next Story
X