Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ..

ಓ ಮೆಣಸೇ..

ಪಿ.ಎ.ರೈಪಿ.ಎ.ರೈ22 Jan 2018 12:24 AM IST
share
ಓ ಮೆಣಸೇ..

ತಪ್ಪು ಮಾಡುವುದು ಸಹಜ, ಅದನ್ನು ತಿದ್ದಿಕೊಳ್ಳುವುದು ಬುದ್ಧಿವಂತರ ಲಕ್ಷಣ - ಕೆ.ಎಸ್. ಈಶ್ವರಪ್ಪ, ಬಿಜೆಪಿ ಮುಖಂಡ

ರಾಜ್ಯದಲ್ಲಿ ಕಳೆದ ಚುನಾವಣೆಯಲ್ಲಿ ಮತದಾರರು ತಪ್ಪು ತಿದ್ದಿಕೊಂಡು ಬುದ್ಧಿವಂತರಾದರು.

---------------------

ಗಡಿರಕ್ಷಣಾ ಯೋಧರ ತ್ಯಾಗದಿಂದಾಗಿ ನಾಗರಿಕರು ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದಾರೆ - ರಾಮನಾಥ್ ಕೋವಿಂದ್, ರಾಷ್ಟ್ರಪತಿ

ಆದರೆ ಯೋಧರ ಕುಟುಂಬಸ್ಥರು ನಿದ್ದೆಯನ್ನು ಕಳೆದುಕೊಂಡಿದ್ದಾರೆ ಎನ್ನುವುದನ್ನೂ ನೆನಪಿಟ್ಟುಕೊಳ್ಳಬೇಕು.

---------------------

ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಎಂಬ ದೊಡ್ಡ ನಾಟಕ ಕಂಪೆನಿಯ ಮಾಲಕ - ರಾಮಲಿಂಗಾರೆಡ್ಡಿ, ಸಚಿವ

ಅವರು ವೃತ್ತಿಪರ ನಾಟಕ ಕಂಪೆನಿಯ ಮಾಲಕ ಎನ್ನುವುದು ದೇಶಕ್ಕೆ ಮನವರಿಕೆಯಾಗಿದೆ.

---------------------

ಧರ್ಮಕ್ಕೆ ಮನುಷ್ಯನ ಆವಶ್ಯಕತೆಯಿಲ್ಲ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ
ಆದರೆ ರಾಜಕಾರಣಿಗಳಿಗೆ ಧರ್ಮದ ಆವಶ್ಯಕತೆ ಇದೆ.

---------------------

ನಮ್ಮಲ್ಲಿರುವ ಕೆಲವೇ ಕೆಲವು ಮುಸ್ಲಿಮರು ಮಾತ್ರ ದೇಶಭಕ್ತರು - ಸುರೇಂದ್ರ ಸಿಂಗ್, ಉ.ಪ್ರ. ಶಾಸಕ

ಆರೆಸ್ಸೆಸ್‌ನ ಕೆಲವು ಮಂದಿಯ ಹೆಸರು ಕೂಡ ಸ್ವಾತಂತ್ರ ಹೋರಾಟಗಾರರ ಪಟ್ಟಿಯಲ್ಲಿಲ್ಲವಲ್ಲ, ಯಾಕೆ?

---------------------

ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಂಡಲ್ಲಿ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ - ಯು.ಟಿ ಖಾದರ್, ಸಚಿವ

ಉತ್ತಮ ಆಹಾರ ಕಡಿಮೆ ಬೆಲೆಗೆ ದೊರಕುವ ಹಾಗೆ ಮೊದಲು ಮಾಡಿ.

---------------------

ನರೇಂದ್ರ ಮೋದಿ ನನ್ನ ಒಳ್ಳೆಯ ಸ್ನೇಹಿತ - ಬೆಂಜಮಿನ್ ನೆತನ್ಯಾಹು, ಇಸ್ರೇಲ್ ಪ್ರಧಾನಿ
ನರೇಂದ್ರ ಮೋದಿಯ ಒಳಕೋಣೆಯ ದೇವರ ಮನೆಯಲ್ಲಿ ಹಿಟ್ಲರ್ ಫೋಟೊ ಇದೆ, ಎಚ್ಚರಿಕೆ.

---------------------

ಪ್ರಧಾನಿ ನರೇಂದ್ರ ಮೋದಿ ನೀಡಿದ ದುಡ್ಡಿನಲ್ಲಿ ಸಿಎಂ ಸಿದ್ದರಾಮಯ್ಯ ಜಾತ್ರೆ ಮಾಡುತ್ತಿದ್ದಾರೆ - ಪ್ರತಾಪ್ ಸಿಂಹ, ಸಂಸದ

ಅದಾನಿ, ಅಂಬಾನಿ ಮಾಡಿದರೆ ಓಕೆನಾ?

---------------------

ಕರ್ನಾಟಕದ ಜನರು ಹರಾಮಿಗಳು - ವಿನೋದ್ ಪಾಳೇಕರ್, ಗೋವಾ ಸಚಿವ

ರಮ್ ಕುಡಿದು ರಾಮ್ ಎಂದು ಹೇಳಲು ಹೋಗಿ ಹರಾಮ್ ಎಂದಾಗಿರಬೇಕು.

---------------------

ಇನ್ನು ನಾನು ಜೀವನ ಪರ್ಯಂತ ಬಿಳಿ ಪಂಚೆ ಉಡುವೆ - ಜನಾದರ್ನರೆಡ್ಡಿ, ಮಾಜಿ ಸಚಿವ
 ಬಿಳಿ ಪಂಚೆಯಿಂದ ಕಪ್ಪು ವ್ಯಕ್ತಿತ್ವವನ್ನು ಮುಚ್ಚಿ ಹಾಕಲು ಸಾಧ್ಯವಿಲ್ಲ.

---------------------

ಕಿಂಗ್ ಮೇಕರ್ ಕನಸು ಕಾಣುತ್ತಿರುವ ಜೆಡಿಎಸ್ ಎರಡಂಕಿ ದಾಟುವುದು ಅನುಮಾನ -  ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

ಒಟ್ಟಿನಲ್ಲಿ ಮುಂದಿನ ಬಾರಿಯ ಚುನಾವಣೆ ಬಿಜೆಪಿಯ ಪಾಲಿಗೆ ಎರಡಂಕಿ ಲಾಟರಿಯಂತಾಗಿದೆ. 

---------------------

ಸರ್ವ ಧರ್ಮಗಳನ್ನು ಸಮಾಧಾನದಿಂದ ಕಾಣುವುದೇ ಜಾತ್ಯತೀತತೆ - ವಜೂಭಾಯಿ ವಾಲಾ, ರಾಜ್ಯಪಾಲ

ಸಚಿವ ಅನಂತ ಕುಮಾರ್ ಹೆಗಡೆ ಅವರು ಈಗಾಗಲೇ ಜಾತ್ಯತೀತತೆ ಎಂದರೆ ‘ಅಪ್ಪ ಅಮ್ಮ’ ಇಲ್ಲದವರು ಎಂದಿದ್ದಾರಲ್ಲ?

---------------------

ಹಿಂದೂ ಧರ್ಮ ಎನ್ನುವುದು ಇಲ್ಲ, ನಾವೆಲ್ಲ ದ್ರಾವಿಡರು - ಕುಂ.ವೀರಭದ್ರಪ್ಪ, ಹಿರಿಯ ಸಾಹಿತಿ

ವೈದಿಕ ಧರ್ಮವನ್ನು ಪ್ರತ್ಯೇಕ ಧರ್ಮವಾಗಿ ಘೋಷಿಸಿದರೆ ದ್ರಾವಿಡರ ಗುರುತು ಹಚ್ಚುವುದು ಸುಲಭವಾಗುತ್ತದೆ.

---------------------

ಶೃಂಗೇರಿಯಲ್ಲಿ ಅತಿರುದ್ರ ಮಹಾಯಾಗ ನಡೆಸಿದ್ದು ಶತ್ರು ನಾಶಕ್ಕಲ್ಲ - ದೇವೇಗೌಡ, ಮಾಜಿ ಪ್ರಧಾನಿ

ಹೋಮ ಯಾಗಗಳಿಗೆ ಭಯಪಡುವುದಿಲ್ಲ ಎಂದು ಸಿದ್ದರಾಮಯ್ಯ ಈಗಾಗಲೇ ಘೋಷಿಸಿದ್ದಾರೆ.

---------------------

ಅರಣ್ಯ ಮಂತ್ರಿಯನ್ನು ಕಾಡಿಗೆ ಕಳುಹಿಸಿ - ನಳಿನ್‌ಕುಮಾರ್ ಕಟೀಲು, ಸಂಸದ

ನೀವೆಲ್ಲ ಸೇರಿ ನಾಡನ್ನೇ ಕಾಡು ಮಾಡಿ ಬಿಟ್ಟಿದ್ದೀರಲ್ಲ?

---------------------

ಅವರವರ ಮೂಗಿನ ನೇರಕ್ಕೆ ಬರೆದ ಇತಿಹಾಸ ನಮಗೆ ಬೇಡ - ಅನಂತಕುಮಾರ್ ಹೆಗಡೆ, ಕೇಂದ್ರ ಸಚಿವ

ಬರೇ ನಿಮ್ಮ ಮೂಗಿನ ನೇರಕ್ಕೆ ಬರೆದ ಇತಿಹಾಸ ಮಾತ್ರ ಬೇಕೇ?
---------------------

ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರಿಗೆ ಈಗ ಹಿಂದೂ ನಾಯಕರು ಬೇಡವಾಗಿದ್ದಾರೆ - ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆಯ ರಾಷ್ಟ್ರೀಯ ಮುಖ್ಯಸ್ಥ
ನೀವು ಬೇಡವಾಗಿದ್ದಿದ್ದರೆ ಎಂದೋ ಜೈಲು ಪಾಲಾಗುತ್ತಿದ್ದಿರಿ.

---------------------

ನನ್ನನ್ನು ಎನ್‌ಕೌಂಟರ್‌ನಲ್ಲಿ ಕೊಲ್ಲಲು ಪ್ರಯತ್ನಿಸಲಾಗುತ್ತಿದೆ - ಪ್ರವೀಣ್ ತೊಗಾಡಿಯಾ, ವಿಎಚ್‌ಪಿ ನಾಯಕ
ತಾವು ಮಾನವಹಕ್ಕು ಆಯೋಗಕ್ಕೆ ಯಾಕೆ ದೂರು ಕೊಡಬಾರದು?

---------------------

ಕಾಂಗ್ರೆಸ್ ಹೋದಲ್ಲೆಲ್ಲ ಬರ  - ನರೇಂದ್ರ ಮೋದಿ, ಪ್ರಧಾನಿ

ನೀವು ಹೋದಲ್ಲೆಲ್ಲ ತೆರಿಗೆ.

---------------------

ಸಿಎಂ ಸಿದ್ದರಾಮಯ್ಯರಿಗೆ ಸ್ವತಂತ್ರ ಅಸ್ತಿತ್ವ ಇಲ್ಲ - ಕುಮಾರಸ್ವಾಮಿ, ಜೆಡಿಎಸ್ ಅಧ್ಯಕ್ಷ
ತಮ್ಮ ಪಕ್ಷದಲ್ಲಿರುವಾಗ ಅವರಿಗೆ ಅಸ್ತಿತ್ವವೇ ಇರಲಿಲ್ಲವಲ್ಲ?

---------------------

ಬಿಜೆಪಿಯವರೆಲ್ಲ ಕೌರವರಂತೆ, ಕಾಂಗ್ರೆಸ್‌ನವರು ಪಾಂಡವರಂತೆ - ಸಿದ್ದರಾಮಯ್ಯ, ಮುಖ್ಯಮಂತ್ರಿ
ಒಟ್ಟಿನಲ್ಲಿ ದ್ರೌಪದಿ ವಸ್ತ್ರಾಪಹರಣಕ್ಕೆ ಸಿದ್ಧಳಾಗಬೇಕಾಗಿದೆ.

---------------------

ಡಿ.ವಿ ಸದಾನಂದಗೌಡರನ್ನು ಮುಖ್ಯಮಂತ್ರಿ ಮಾಡಿದ್ದೇ ನಾನು - ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ನಿಮ್ಮನ್ನು ಮುಖ್ಯಮಂತ್ರಿ ಮಾಡಿದ್ದು ಯಾರು ಎಂದು ಕೇಳಿದರಂತೆ ಯಡಿಯೂರಪ್ಪ?

---------------------

ನಾನು ಕರೆದರೆ ಗಾಲಿ ಜನಾದರ್ನ ರೆಡ್ಡಿ ಮತ್ತೆ ರಾಜಕಾರಣಕ್ಕೆ ಬರ್ತಾರೆ - ಶ್ರೀರಾಮುಲು, ಸಂಸದ
ಯಾರು ಕರೆದರೂ ಬರಲು ತುದಿಗಾಲಲ್ಲಿ ನಿಂತಿದ್ದಾರೆ.

---------------------

ಕಾಂಗ್ರೆಸ್‌ನಲ್ಲಿ ಮೂಲ ಕಾಂಗ್ರೆಸ್, ವಲಸೆ ಕಾಂಗ್ರೆಸ್ ಎಂಬ ಗೊಂದಲವಿಲ್ಲ - ಡಿ.ಕೆ. ಶಿವಕುಮಾರ್, ಸಚಿವ

ತಮ್ಮನ್ನು ತಾವು ಮೂಲ ಎಂದು ಕರೆದು ಸಿದ್ದರಾಮಯ್ಯರನ್ನು ವಲಸೆ ಎಂದು ವ್ಯಂಗ್ಯವಾಡುತ್ತಿದ್ದೀರಾ?
 

share
ಪಿ.ಎ.ರೈ
ಪಿ.ಎ.ರೈ
Next Story
X