Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕುವೈತ್ ಸರಕಾರದಿಂದ ಆ್ಯಮ್ನೆಸ್ಟಿ...

ಕುವೈತ್ ಸರಕಾರದಿಂದ ಆ್ಯಮ್ನೆಸ್ಟಿ ಘೋಷಣೆ: ನಿಟ್ಟುಸಿರು ಬಿಟ್ಟ ಭಾರತೀಯ ಕಾರ್ಮಿಕರು

ವಾರ್ತಾಭಾರತಿವಾರ್ತಾಭಾರತಿ23 Jan 2018 11:18 PM IST
share
ಕುವೈತ್  ಸರಕಾರದಿಂದ ಆ್ಯಮ್ನೆಸ್ಟಿ ಘೋಷಣೆ: ನಿಟ್ಟುಸಿರು ಬಿಟ್ಟ ಭಾರತೀಯ ಕಾರ್ಮಿಕರು

ಹೈದರಾಬಾದ್, ಜ.23: ಕುವೈತ್ ನಲ್ಲಿ ವೇತನ ಪಾವತಿಯಾಗದ ಕಾರಣದಿಂದ ಅಕ್ರಮವಾಗಿ ತಮ್ಮ ವಾಸವನ್ನು ವಿಸ್ತರಿಸುವ ಒತ್ತಡಕ್ಕೆ ಒಳಗಾಗಿದ್ದ ಭಾರತೀಯ ಮೂಲದ ಕಾರ್ಮಿಕರು ಕೊನೆಗೂ ನಿಟ್ಟುಸಿರು ಬಿಡುವಂತಾಗಿದೆ. ಕುವೈತ್  ಸರಕಾರವು ಈ ಕಾರ್ಮಿಕರ ಮೇಲೆ ಯಾವುದೇ ದಂಡವನ್ನು ವಿಧಿಸುವುದಿಲ್ಲ ಎಂದು ಘೋಷಣೆ ಮಾಡಿದೆ.

 ಜನವರಿ 29ರಿಂದ ಫೆಬ್ರವರಿ 22ರ ವರೆಗೆ ಆ್ಯಮ್ನೆಸ್ಟಿ (ರಾಜಕೀಯ ಅಪರಾಧಗಳಿಗೆ ಶಿಕ್ಷೆಗೊಳಪಟ್ಟವರಿಗೆ ನೀಡುವ ಕ್ಷಮಾಪಣೆ) ಯನ್ನು ಘೋಷಿಸಲಾಗಿದೆ. ಸರಕಾರದ ಈ ನಡೆಯು ಭಾರತೀಯ ಕಾರ್ಮಿಕರಿಗೆ ಸಾಂತ್ವಾನ ನೀಡಿದೆ ಎಂದು ಅವರ ಪರವಾಗಿ ಸರಕಾರದ ಜೊತೆ ಮಾತುಕತೆ ನಡೆಸಿದ ಸಾಮಾಜಿಕ ಕಾರ್ಯಕರ್ತೆ ಶಹೀನ್ ಸೈಯ್ಯದ್ ತಿಳಿಸಿದ್ದಾರೆ.

ವೇತನ ಸಿಗದೆ ತಮ್ಮ ವಾಸವನ್ನು ವಿಸ್ತರಿಸಿರುವವರ ಪೈಕಿ ಕುವೈತ್ ನ ಖರೀಫಿ ನ್ಯಾಶನಲ್‌ನ ಉದ್ಯೋಗಿಯಾಗಿರುವ ಆಂಧ್ರ ಪ್ರದೇಶದ ನರೇಶ್ ನಾಯ್ಡು ಕೂಡಾ ಒಬ್ಬರಾಗಿದ್ದು ಸದ್ಯ ಒದಗಿಸಲಾಗಿರುವ ಅಮ್ನೆಸ್ಟಿಯನ್ನು ಬಳಸಿಕೊಳ್ಳಲು ಯೋಚಿಸಿದ್ದಾರೆ.

ಕುವೈತ್ ನಲ್ಲಿ ಅವಧಿಗಿಂತ ಹೆಚ್ಚು ವಾಸವಿರುವವರಿಗೆ ದಿನಕ್ಕೆ ಎರಡು ಕುವೈಟಿ ದಿನಾರ್ (424 ರೂ.) ದಂಡ ವಿಧಿಸಲಾಗುತ್ತದೆ. ತಮ್ಮ ವೇತನ ಪಡೆಯದೆ ಇರುವ ಭಾರತೀಯ ಕಾರ್ಮಿಕರು ಈಗಾಗಲೇ ಕುವೈತ್ ನಲ್ಲಿ ಕೆಲವು ತಿಂಗಳುಗಳ ಕಾಲ ಹೆಚ್ಚುವರಿಯಾಗಿ ವಾಸಿಸುತ್ತಿದ್ದು ಈ ದಂಡವನ್ನು ಅವರಿಂದ ಪಾವತಿಸಲು ಸಾಧ್ಯವಿಲ್ಲವಾಗಿದೆ.

ಕೇಂದ್ರ ವಿದೇಶಿ ವ್ಯವಹಾರಗಳ ರಾಜ್ಯ ಸಚಿವರಾದ ವಿ.ಕೆ ಸಿಂಗ್ ಇತ್ತೀಚೆಗೆ ಕುವೈತ್ ಗೆ ಭೇಟಿ ನೀಡಿದ್ದು ಈ ಹಿನ್ನೆಲೆಯಲ್ಲಿ ಅಲ್ಲಿನ ಸರಕಾರವು ಆ್ಯಮ್ನೆಸ್ಟಿಯನ್ನು ಘೋಷಿಸಿದೆ. ತಮ್ಮ ಭೇಟಿಯ ವೇಳೆ ಸಿಂಗ್, ಖರೀಫಿ ನ್ಯಾಶನಲ್ ಕಂಪೆನಿ ವೇತನ ಬಾಕಿಯಿರಿಸಿರುವ ಭಾರತೀಯ ನೌಕರರ ವಿಷಯವನ್ನು ಪ್ರಸ್ತಾಪಿಸಿದ್ದರು. ಈ ವೇಳೆ ಕುವೈಟಿ ಸಚಿವರನ್ನು ಭೇಟಿಯಾಗಿದ್ದ ಸಿಂಗ್ ಈ ನೌಕರರ ಮೇಲಿನ ದಂಡವನ್ನು ಕೈಬಿಡುವಂತೆ ಮನವಿ ಮಾಡಿಕೊಂಡಿದ್ದರು. ಆ್ಯಮ್ನೆಸ್ಟಿಯ ಪ್ರಕಾರ ಸದ್ಯ ತಮ್ಮ ಸ್ವದೇಶಗಳಿಗೆ ವಾಪಸಾಗುವ ನೌಕರರು ಮತ್ತೊಮ್ಮೆ ಉದ್ಯೋಗಕ್ಕಾಗಿ ಕುವೈತ್ ಗೆ ತೆರಳಲು ಯಾವುದೇ ಕಾನೂನಾತ್ಮಕ ಅಡಚಣೆಯಿರುವುದಿಲ್ಲ. ಇದೇ ವೇಳೆ, ಖರೀಫಿ ನ್ಯಾಶನಲ್‌ನಲ್ಲಿ ದುಡಿಯುತ್ತಿರುವ ಭಾರತೀಯ ನೌಕರರು ಮತ್ತು ವೇತನ ನೀಡಲು ನಿರಾಕರಿಸಿದಾಗ ಸಂಸ್ಥೆಯನ್ನು ಬಿಟ್ಟು ತೆರಳಿರುವ ನೌಕರರಿಗೆ ಸಂಸ್ಥೆಯು ಹೊಸ ಪ್ರಸ್ತಾಪವನ್ನು ಇಟ್ಟಿದೆ. ಸದ್ಯ ಬಾಕಿಯಿರುವ ವೇತನದ 25ಶೇ. ದಿಂದ 33 ಶೇ. ನೀಡುವುದಾಗಿ ಸಂಸ್ಥೆ ಹೇಳಿದೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ.

ಆದರೆ ಸಂಸ್ಥೆಯ ಈ ಕೊಡುಗೆಗೆ ನೌಕರರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಮಗೆ ಬಾಕಿಯಿರುವ ಸಂಪೂರ್ಣ ವೇತನವನ್ನು ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಸಂಸ್ಥೆಯ ನಿರ್ಧಾರ ಇನ್ನೂ ದೃಡಪಟ್ಟಿಲ್ಲದಿರುವುದರಿಂದ ಕೆಲವು ನೌಕರರು ಆ್ಯಮ್ನೆಸ್ಟಿಯ ಲಾಭವನ್ನು ಪಡೆದು ಶೀಘ್ರವಾಗಿ ಭಾರತಕ್ಕೆ ತೆರಳು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X