ಕರ್ನಾಟಕ ಯುವಶಕ್ತಿ ಸಂಘಟನೆಯಿಂದ ಬಂದ್ಗೆ ಬೆಂಬಲ ಇಲ್ಲ: ಗಜೇಂದ್ರ
ಮೂಡಿಗೆರೆ, ಜ.24: ಮಹದಾಯಿ ನೀರಿನ ಹೋರಾಟದ ಸಲುವಾಗಿ ಜ.25ರಂದು ಕೆಲವು ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಬಂದ್ಗೆ ನವ ಕರ್ನಾಟಕ ಯುವಶಕ್ತಿ ಸಂಘಟನೆಯಿಂದ ಬೆಂಬಲ ನೀಡಿಲ್ಲ ಎಂದು ತಾಲೂಕು ಅಧ್ಯಕ್ಷ ಗಜೇಂದ್ರ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿ, ಮಹದಾಯಿ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಆದರೆ ಇಂತಹ ವಿಷಯ ಮುಂದಿಟ್ಟುಕೊಂಡು ಪದೇ ಪದೇ ಬಂದ್ ಮಾಡುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.
Next Story