ಚಿಕ್ಕಮಗಳೂರು: ಜಾಮಿಯ ಅರೇಬಿಯ ಕನ್ಝುಲ್ ಇಮಾನ್ನಲ್ಲಿ ಗಣರಾಜ್ಯೋತ್ಸವ
![ಚಿಕ್ಕಮಗಳೂರು: ಜಾಮಿಯ ಅರೇಬಿಯ ಕನ್ಝುಲ್ ಇಮಾನ್ನಲ್ಲಿ ಗಣರಾಜ್ಯೋತ್ಸವ ಚಿಕ್ಕಮಗಳೂರು: ಜಾಮಿಯ ಅರೇಬಿಯ ಕನ್ಝುಲ್ ಇಮಾನ್ನಲ್ಲಿ ಗಣರಾಜ್ಯೋತ್ಸವ](https://www.varthabharati.in/sites/default/files/images/articles/2018/01/26/uppalliyalli ganaraajyothsava.jpg)
ಚಿಕ್ಕಮಗಳೂರು, ಜ.26: ಚಿಕ್ಕಮಗಳೂರು ನಗರದ ಉಪ್ಪಳ್ಳಿಯಲ್ಲಿರುವ ಜಾಮೀಯ ಅರಬಿಯ ಕನ್ಜೂಲ್ ಇಮಾನ್ ಮದರಸದಲ್ಲಿ 69 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ ಮುಖ್ಯ ಭಾಷಣ ಮಾಡಿದರು. ಮದ್ರಸದ ಮುಖ್ಯ ಪ್ರಾಂಶುಪಾಲ ಮುಪ್ತಿ ಅನ್ವರ್ ಹುಸೈನ್ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮದ್ರಸದ ವಿದ್ಯಾರ್ಥಿಗಳು ರಾಷ್ಟ್ರಗೀತೆಯನ್ನು ಹಾಡಿದರು.
ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷರಾದ ಜಂಶೀದ್ ಖಾನ್ ಜಾಮೀಯ ಟ್ರಸ್ಟ್ ಗಳಾದ ವಸೀಂ ಔರಂಗ್ ಫಾರುಕ್ ಆರಿಪ್ ಅಲಿ, ಶಫಿ ಮನ್ಸೂರ್, ಉಪಾಧ್ಯಕ್ಷರಾದ ನಸೀರುದ್ದೀನ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಜಾಮೀಯದ ಪ್ರಧಾನ ಕಾರ್ಯದರ್ಶಿ ಫೈರೋಜ್ ಅಹಮದ್ ರಜ್ವಿ ವಂದಿಸಿದರು. ಮದರಸ ಉಪಾಧ್ಯಾಯ ಹಾಫಿಜ್ ಇರ್ಷಾದ್ ಸ್ವಾಗತಿಸಿದರೆ, ಮೌಲಾನ ಅಬ್ದುಲ್ ಘನಿ ನಿರೂಪಿಸಿದರು.
Next Story