ಕೈಕೊಟ್ಟ ಬೆಳೆ: ರೈತ ಆತ್ಮಹತ್ಯೆ
![ಕೈಕೊಟ್ಟ ಬೆಳೆ: ರೈತ ಆತ್ಮಹತ್ಯೆ ಕೈಕೊಟ್ಟ ಬೆಳೆ: ರೈತ ಆತ್ಮಹತ್ಯೆ](https://www.varthabharati.in/sites/default/files/images/articles/2018/01/29/sucide_0.gif)
ಚಿಕ್ಕಮಗಳೂರು, ಜ.29: ಬೆಳೆ ಕೈಕೊಟ್ಟಿದ್ದರಿಂದ ಸಾಲ ಮರು ಪಾವತಿಸಲಾಗದೆ ಯುವ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಕಡೂರು ತಾಲೂಕಿನ ಚೊಮ್ಮನಹಳ್ಳಿಯಲ್ಲಿ ನಡೆದಿದೆ.
ಮೃತರನ್ನು ಶಿವಕುಮಾರ್(29) ಎಂದು ಗುರುತಿಸಲಾಗಿದೆ. ಇವರು ವಿವಿಧ ಬ್ಯಾಂಕುಗಳಿಂದ 5 ಲಕ್ಷ ರೂ.ಗೂ ಅಧಿಕ ಸಾಲ ಮಾಡಿ ಈರುಳ್ಳಿ, ಕಡಲೆ ಹಾಗೂ ಅಡಿಕೆ ಕೃಷಿ ಮಾಡಿದ್ದರು. ಆದರೆ ಬೆಳೆ ಕೈಕೊಟ್ಟಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story