ಸೇತುವೆ ತಡೆಗೋಡೆ ಮೇಲೆ ಹತ್ತಿದ ಬಸ್ : ನಿರ್ವಾಹಕ ಸ್ಥಳದಲ್ಲೇ ಮೃತ್ಯು
![ಸೇತುವೆ ತಡೆಗೋಡೆ ಮೇಲೆ ಹತ್ತಿದ ಬಸ್ : ನಿರ್ವಾಹಕ ಸ್ಥಳದಲ್ಲೇ ಮೃತ್ಯು ಸೇತುವೆ ತಡೆಗೋಡೆ ಮೇಲೆ ಹತ್ತಿದ ಬಸ್ : ನಿರ್ವಾಹಕ ಸ್ಥಳದಲ್ಲೇ ಮೃತ್ಯು](https://www.varthabharati.in/sites/default/files/images/articles/2018/01/29/29-GPT-2.jpg)
ಗುಂಡ್ಲುಪೇಟೆ,ಜ.29: ಮೈಸೂರಿನಿಂದ ಕಲ್ಲಿಕೋಟೆಗೆ ತೆರಳುತ್ತಿದ್ದ ಕೇರಳ ರಾಜ್ಯದ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸು ಅಪಘಾತಕ್ಕೀಡಾಗಿ ನಿರ್ವಾಹಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇಬ್ಬರು ಪ್ರಯಾಣಿಕರು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.
ಮುಂಜಾನೆ 5 ಗಂಟೆ ಸಮಯದಲ್ಲಿ ಮೈಸೂರಿನಿಂದ ಕಲ್ಲಿಕೋಟೆಗೆ ತೆರಳುತ್ತಿದ್ದ ಕೇರಳ ರಾಜ್ಯದ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ತಾಲೂಕಿನ ಭೀಮನಬೀಡು ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಬದಿಯಲ್ಲಿದ್ದ ಸೇತುವೆ ತಡೆಗೋಡೆ ಮೇಲೆ ಹತ್ತಿದ ಪರಿಣಾಮ ಎಲ್ಲಾ ಚಕ್ರಗಳು ಕಳಚಿಬಿದ್ದಿವೆ. ಅದೃಷ್ಟವಶಾತ್ ಬಸ್ಸು ಕಂದಕಕ್ಕೆ ಬಿದ್ದಿಲ್ಲ. ಬಸ್ಸಿನ ಮುಂಭಾಗ ಕುಳಿತಿದ್ದ ಕಂಡಕ್ಟರ್ ಸಿಜು(35) ಅವರ ತಲೆ ಹಾಗೂ ಎದೆಗೆ ಪೆಟ್ಟು ಬಿದ್ದು ಸ್ಥಳದಲ್ಲಿಯೇಮೃತ ಪಟ್ಟಿದ್ದು, ಮುಂದಿನ ಸೀಟುಗಳಲ್ಲಿ ಕುಳಿತಿದ್ದ ಕುಶಾಲನಗರದ ಶ್ರೀನಿವಾಸ್ ಹಾಗೂ ಬೆಂಗಳೂರಿನ ವರ್ಗೀಸ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.
ಸ್ಥಳಕ್ಕೆ ಸರ್ಕಲ್ ಇನ್ಸ್ ಪೆಕ್ಟರ್ ಎಚ್.ಎನ್.ಬಾಲಕೃಷ್ಣ, ಪಿಎಸ್ಐ ಬಿ.ಎಸ್.ಶಿವರುದ್ರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪಟ್ಟಣ ಠಾಣೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.