Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಗಾಂಧೀಯುಗ ಸೃಷ್ಟಿಸಿದ ಅನನ್ಯ ವ್ಯಕ್ತಿತ್ವ

ಗಾಂಧೀಯುಗ ಸೃಷ್ಟಿಸಿದ ಅನನ್ಯ ವ್ಯಕ್ತಿತ್ವ

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ30 Jan 2018 12:03 AM IST
share
ಗಾಂಧೀಯುಗ ಸೃಷ್ಟಿಸಿದ ಅನನ್ಯ ವ್ಯಕ್ತಿತ್ವ

ಡಾ. ನಟರಾಜ್ ಹುಳಿಯಾರ್ ಅವರ ಸಂಪಾದಕತ್ವದಲ್ಲಿ ‘ನಮ್ಮ ಸುತ್ತಣ ಗಾಂಧಿಗಳು’ ಮಾಲಿಕೆಯನ್ನು ಪ್ರೇರಣಾ ಪ್ರಕಾಶನ ಹೊರ ತರುತ್ತಿದೆ. ಇದರ ಸರಣಿಯಲ್ಲಿ ಬಿ. ಚಂದ್ರೇಗೌಡ ಅವರು ‘ಗಾಂಧೀವಾದಿ ಸುಬ್ರಹ್ಮಣ್ಯ ಶೆಟ್ಟರು’ ಕೃತಿಯನ್ನು ಬರೆದಿದ್ದಾರೆ. ಎಲ್ಲ ರಾಜಕಾರಣಿಗಳೂ ತಮ್ಮನ್ನು ತಾವು ಗಾಂಧೀವಾದಿಗಳು ಎಂದೇ ಕರೆದುಕೊಳ್ಳುತ್ತಾರೆ. ಇವರ ಗದ್ದಲದಲ್ಲಿ ನಮ್ಮ ನಾಡಿನ ಯಾವುದೇ ಮೂಲೆಯಲ್ಲಿ ಗಾಂಧೀಜಿಯ ನಿಜವಾದ ಆದರ್ಶಗಳನ್ನಿಟ್ಟು ಬದುಕುತ್ತಾ ಬಂದಿರುವ, ಗಾಂಧಿಯ ವೌಲ್ಯಗಳನ್ನು ಸಮಾಜದಲ್ಲಿ ಹರಡುತ್ತಾ ಬಂದಿರುವ ಸರಳ ಜೀವಿಗಳು ಬದಿಗೆ ಸರಿದಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಅನಾಮಧೇಯರಾಗಿ ಬಾಳಿ ಬದುಕಿದ ನಿಜವಾದ ಅರ್ಥದ ಗಾಂಧಿವಾದಿಗಳನ್ನು ಗುರುತಿಸಿ ಅವರ ಬದುಕನ್ನು ಜನರಿಗೆ ಪರಿಚಯಿಸುವ ಉದ್ದೇಶವನ್ನು ಈ ಮಾಲಿಕೆ ಹೊಂದಿದೆ. ಅದರ ಭಾಗವಾಗಿ ಇಲ್ಲಿ ಅನನ್ಯ ಗಾಂಧೀವಾದಿ ಸುಬ್ರಹ್ಮಣ್ಯ ಶೆಟ್ಟರ ಬದುಕಿನ ಹಾದಿಯನ್ನು ತೆರೆದಿಡಲಾಗಿದೆ. 1910-1973ರವರೆಗೆ ಬಾಳಿ ಬದುಕಿದ ಸುಬ್ರಹ್ಮಣ್ಯ ಶೆಟ್ಟರ ಸರಳ ಆದರ್ಶ ಬದುಕು ಚಕಿತಗೊಳಿಸುವಂತಹದು. ಗಾಂಧೀಜಿಯವರು ಅಜ್ಜಂಪುರದ ಸುತ್ತಮುತ್ತಲ ಪ್ರದೇಶಗಳಿಗೆ ಭೇಟಿ ಕೊಡುವ ಮೊದಲೇ ಗಾಂಧೀಜಿಯವರ ಕಟ್ಟಾ ಅನುಯಾಯಿಯಾಗಿದ್ದರು ಶೆಟ್ಟರು. ಗಾಂಧೀಜಿಯ ಬಗೆಗಿನ ಗೌರವದಿಂದ ಅವರ ಮೊದಲ ಹೆಸರನ್ನೇ ತಮ್ಮ ಮಗನಿಗೂ ಇಟ್ಟಿದ್ದರು. ಮಗ ಮೋಹನದಾಸ ತೀರಿಕೊಳ್ಳುವಾಗ ಶೆಟ್ಟರು ಜೈಲಿನಲ್ಲಿದ್ದರು. ‘ಇನ್ನು ಮುಂದೆ ಸ್ವಾತಂತ್ರ ಚಳವಳಿಯಲ್ಲಿ ಭಾಗವಹಿಸುವುದಿಲ್ಲವೆಂದು ಮುಚ್ಚಳಿಕೆ ಬರೆದು ಕೊಟ್ಟು ಮನೆಗೆ ಹೋಗಿ’ ಎಂದು ಬ್ರಿಟಿಷರು ಔದಾರ್ಯ ತೋರಿದಾಗ ಅದನ್ನು ನಿರಾಕರಿಸಿದವರು ಶೆಟ್ಟರು. ಇಂತಹ ಹೊತ್ತಿನಲ್ಲಿ, ಬ್ರಿಟಿಷರ ಜೊತೆಗೆ ರಾಜಿ ಮಾಡಿ ಕ್ಷಮೆಯಾಚನೆ ಮಾಡಿದ ಸಾವರ್ಕರ್‌ರಂತಹ ನಾಯಕರು ನೆನಪಾಗುತ್ತಾರೆ. ಶೆಟ್ಟರಂತಹ ಸ್ವಾತಂತ್ರ ಹೋರಾಟಗಾರರ ಮುಂದೆ ಸಾವರ್ಕರ್‌ರಂತಹವರು ಸಣ್ಣವರಾಗುತ್ತಾರೆ.

ವೈಯಕ್ತಿಕವಾಗಿಯೇ ತುಂಬಾ ಉದಾರಿಯಾಗಿರುವ ಶೆಟ್ಟರ ಮೇಲೆ ಗಾಂಧೀಜಿಯ ಪ್ರಭಾವ ತೀವ್ರವಾದ ಮೇಲೆ ಅವರು ಸಾಮಾಜಿಕ ಸುಧಾರಣೆಯಲ್ಲೂ ಭಾಗವಹಿಸಿದರು. ಶೆಟ್ಟರ ಕಾಲಘಟ್ಟದ ಹಲವು ಕುತೂಹಲಕರವಾದ ವಿಷಯಗಳನ್ನು ಅತ್ಯಂತ ಸರಳವಾಗಿ ಬಿ. ಚಂದ್ರೇಗೌಡ ಅವರು ನಿರೂಪಿಸುತ್ತಾ ಹೋಗುತ್ತಾರೆ. ಹಾಗೆಯೇ ನಾಡಿನ ಬೇರೆ ಬೇರೆ ಲೇಖಕರು, ನಾಯಕರು ಶೆಟ್ಟರ ಕುರಿತಂತೆ ಹೊಂದಿದ್ದ ಅಭಿಪ್ರಾಯಗಳನ್ನೂ ದಾಖಲಿಸಿದ್ದಾರೆ. ‘ಸುಬ್ರಹ್ಮಣ್ಯ ಶೆಟ್ಟರಂಥವರು ಒಂದು ತಾಲೂಕಿಗೆ ಒಬ್ಬರು ಸಿಕ್ಕರೂ ಸಾಕು, ನಮ್ಮ ರಾಜಕಾರಣ ಸಲೀಸಾಗಿ ನಡೆಯುತ್ತದೆ’ ಎಂಬ ಪಿ. ಲಂಕೇಶರ ಮಾತು ಅಕ್ಷರಶಃ ಸತ್ಯ.
ಕೃತಿಯ ಒಟ್ಟು ಪುಟಗಳು 60. ಮುಖಬೆಲೆ 50 ರೂ.

share
-ಕಾರುಣ್ಯಾ
-ಕಾರುಣ್ಯಾ
Next Story
X