Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಭಾರತ ಕೊಲೆ, ಅಕಾಲಿಕ ಮರಣಗಳ ಸೂತಕದ ನಾಡು:...

ಭಾರತ ಕೊಲೆ, ಅಕಾಲಿಕ ಮರಣಗಳ ಸೂತಕದ ನಾಡು: ಜಿ. ರಾಜಶೇಖರ್

ಉಡುಪಿ ಜಿಲ್ಲೆಯಾದ್ಯಂತ ಸೌಹಾರ್ದತೆಗಾಗಿ 'ಮಾನವ ಸರಪಳಿ'

ವಾರ್ತಾಭಾರತಿವಾರ್ತಾಭಾರತಿ30 Jan 2018 9:31 PM IST
share
ಭಾರತ ಕೊಲೆ, ಅಕಾಲಿಕ ಮರಣಗಳ ಸೂತಕದ ನಾಡು: ಜಿ. ರಾಜಶೇಖರ್

ಉಡುಪಿ, ಜ. 30: ಭಾರತ ದೇಶವು ಇಂದು ಕೊಲೆಗಳ ಮತ್ತು ಅಕಾಲಿಕ ಮರಣಗಳ ಸೂತಕದ ನಾಡಾಗಿದೆ. ಇದಕ್ಕೆ ಹಿಂದುತ್ವ ಕಾರಣ ಎಂದು ಹಿರಿಯ ಚಿಂತಕ ಜಿ. ರಾಜಶೇಖರ್ ಟೀಕಿಸಿದರು.

ನಾಡಿನಲ್ಲಿ ಶಾಂತಿ, ಸಾಮರಸ್ಯ ಸದಾ ನೆಲೆಸಲಿ ಮತ್ತು ಜನತೆಯಲ್ಲಿ ಪರಸ್ಪರ ಧ್ವೇಷ ಹುಟ್ಟು ಹಾಕುವ ಹುನ್ನಾರಗಳು ನಿಲ್ಲಲಿ ಎಂಬ ಆಶಯದೊಂದಿಗೆ ಸೌಹಾರ್ದತೆಗಾಗಿ ಕರ್ನಾಟಕ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಮಂಗಳವಾರ ಉಡುಪಿ ನಗರದ ಕೆ.ಎಂ.ರಸ್ತೆಯಿಂದ ಕೋರ್ಟ್ ರಸ್ತೆಯವರೆಗೆ ಸೌಹಾರ್ದತೆಗಾಗಿ ಮಾನವ ಸರಪಳಿಯನ್ನು ರಚಿಸಲಾಯಿತು. ಬಳಿಕ ಅಜ್ಜರಕಾಡಿನಲ್ಲಿರುವ ಗಾಂಧಿ ಪ್ರತಿಮೆಯ ಎದುರು ನಡೆದ ಸಭೆಯನ್ನುದ್ದೇಶಿಸಿ  ಹಿರಿಯ ಚಿಂತಕ ಜಿ. ರಾಜಶೇಖರ್ ಮಾತನಾಡಿದರು.

ಗಾಂಧೀಜಿಯನ್ನು ಕೊಂದವರು ಇಂದು ಈ ದೇಶವನ್ನು ಆಳುತ್ತಿದ್ದಾರೆ. ಗಾಂಧಿ ಹಂತಕ ನಾಥುರಾಮ್ ಗೋಡ್ಸೆಯ ಹಿಂದೂ ಮಹಾಸಭಾ ಮತ್ತು ಆರೆಸ್ಸೆಸ್ ಒಂದೇ ತಾತ್ವಿಕತೆಯನ್ನು ಪ್ರತಿಪಾದಿಸುವ ಸಂಸ್ಥೆಗಳಾಗಿವೆ. ಹಿಂದೂ ಮಹಾಸಭಾ ಸೇರುವ ಮೊದಲು ಗೋಡ್ಸೆ ಆರೆಸ್ಸೆಸ್ ಕಾರ್ಯಕರ್ತನಾಗಿ ಪುಣೆಯಲ್ಲಿ ಆರೆಸ್ಸೆಸ್ ಪತ್ರಿಕೆಯೊಂದರ ಸಂಪಾದಕನಾಗಿದ್ದನು. ಈ ಸಂಗತಿಯನ್ನು ಆರೆಸ್ಸೆಸ್ ಮುಚ್ಚಿ ಹಾಕಿ ಸುಳ್ಳನ್ನು ಹೇಳುತ್ತಿದೆ ಎಂದು ಅವರು ಆರೋಪಿಸಿದರು.

ಗಾಂಧಿಯನ್ನು ಗುಂಡು ಹಾರಿಸಿ ಕೊಂದ ಗೋಡ್ಸೆಗೆ ಶಿಕ್ಷೆಯಾಯಿತು. ಆದರೆ ಗಾಂಧಿಯನ್ನು ಯಾಕೆ ಕೊಲೆ ಮಾಡಬೇಕು ಮತ್ತು ಅವರು ದೇಶಕ್ಕೆ ಯಾವ ರೀತಿ ಅಪಾಯ ಎಂದು ಪ್ರತಿಪಾದಿಸಿದ ಸಾರ್ವಕರ್‌ಗೆ ಶಿಕ್ಷೆಯಾಗುವ ಬದಲು ಅವರ ಭಾವಚಿತ್ರ ಸಂಸತ್ತಿನಲ್ಲಿ ನೇತಾಡುತ್ತಿದೆ. ಈ ಮೂಲಕ ಹಿಂದುತ್ವ ಸಿದ್ಧಾಂತದಲ್ಲಿ ಶ್ರಮ ವಿಭಜನೆ ತತ್ವವನ್ನು ಕಾಣಬಹುದಾಗಿದೆ. ಪ್ರತಿಪಾದಿಸುವವರು ಒಬ್ಬರಾದರೆ ಅದನ್ನು ಆಯುಧಗಳಿಂದ ಕಾರ್ಯಗತಗೊಳಿಸುವವರು ಇನ್ನೊಬ್ಬರು. ಇದು ನಮ್ಮ ಗ್ರಾಮದಲ್ಲಿಯೂ ಕಾಣಬಹುದಾಗಿದೆ ಎಂದರು.

ಈ ಶ್ರಮ ವಿಭಜನೆಯಿಂದ ಭಾರತದ ರಸ್ತೆಗಳಲ್ಲಿ ಹೆಣಗಳು ಬೀಳುತ್ತಿವೆ ಮತ್ತು ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ. ಆದರೆ ಯಾರಲ್ಲೂ ಅಪರಾಧಿ ಪ್ರಜ್ಞೆ ಕಾಡುವುದಿಲ್ಲ. ನೈತಿಕತೆ ಜವಾಬ್ದಾರಿ ಮತ್ತು ಉತ್ತರಧಾಹಿಯೇ ಇಲ್ಲದ ಹಿಂಸೆಯು ಹಿಂದುತ್ವದ ಹೆಗ್ಗುರುತು. ಆದುದರಿಂದ ಹಿಂದುತ್ವ ಕ್ರಿಮಿನಲ್ ಸ್ವರೂಪವನ್ನು ಪ್ರತಿಯೊಬ್ಬರು ಮನಗಾಣಬೇಕು ಎಂದು ಅವರು ತಿಳಿಸಿದರು.

ಗಾಂಧಿಜೀಯನ್ನು ಬಲಿತೆಗೆದುಕೊಂಡ ಕೃತ್ಯವು ಬಾಬರಿ ಮಸೀದಿ ಧ್ವಂಸ, ಗುಜರಾತ್ ಹಿಂಸಾಚಾರ, ಕಂದಮಾಲ್ ಹಲ್ಲೆ, ಮುಹಮ್ಮದ್ ಅಕ್ಲಕ್ ಕೊಲೆಗೂ ಕಾರಣವಾಯಿತು. ಹಾಗಾಗಿ ಗಾಂಧೀ ಕೊಲೆಗೂ ಅಕ್ಲಕ್, ಗೌರಿ, ಕಲ್ಬುರ್ಗಿ, ಪನ್ಸಾರೆ ಕೊಲೆಗೂ ಯಾವುದೇ ವ್ಯಾತ್ಯಾಸ ಇಲ್ಲ ಎಂದು ಅವರು ತಿಳಿಸಿದರು.

ಕವಯತ್ರಿ ಜ್ಯೋತಿ ಗುರುಪ್ರಸಾದ್ ಮಾತನಾಡಿ, ಕೊಲೆಗಳನ್ನು ಸಮರ್ಥನೆ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಈ ಬಗ್ಗೆ ಆತ್ಮಶೋಧನೆ ಆಗಬೇಕು. ಮಾನ ವೀಯತೆ ಪ್ರತಿಯೊಬ್ಬರ ಅಂತಿಮ ಗುರಿ ಹಾಗೂ ಜೀವನ ಉದ್ದೇಶ ಆಗಬೇಕು ಎಂದು ಹೇಳಿದರು.

ದಸಂಸ ಮುಖಂಡ ಸುಂದರ್ ಮಾಸ್ತರ್, ಸಿಐಟಿಯುನ ವಿಶ್ವನಾಥ ರೈ, ಜಮಾಅತೆ ಇಸ್ಲಾಮೀ ಹಿಂದ್‌ನ ಇದ್ರೀಸ್ ಹೂಡೆ, ಮನೋ ವೈದ್ಯ ಡಾ.ಪಿ.ವಿ. ಭಂಡಾರಿ, ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿದರು.

ಮಾನವ ಸರಪಳಿಯಲ್ಲಿ ಪ್ರೊ.ಕೆ.ಫಣಿರಾಜ್ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಡಾ.ಯು.ಸಿ. ನಿರಂಜನ್, ಪ್ರೊ. ಮುರಳೀಧರ ಉಪಾಧ್ಯಾಯ, ಪ್ರೊ. ಸಿರಿಲ್ ಮಥಾಯಸ್, ಬಾಲಕೃಷ್ಣ ಶೆಟ್ಟಿ, ಯು.ಗುರುದತ್, ಸುಗಂಧಿ ಶೇಖರ್, ಮೇಟಿ ಮುದಿಯಪ್ಪ, ಸಲಾವುದ್ದೀನ್, ಕವಿರಾಜ್, ಅನ್ವರ್ ಅಲಿ ಕಾಪು, ಎಸ್.ಎಸ್. ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X