ಉಡುಪಿ ಜಿಲ್ಲೆಗೆ 434.21 ಕೋಟಿ ರೂ.ಅನುದಾನ ನಿಗದಿ
ಜಿಲ್ಲಾ ಯೋಜನಾ ಸಮಿತಿ ಸಭೆ

ಉಡುಪಿ, ಜ.31: 2017-18ನೇ ಸಾಲಿನ ಸ್ಥಳೀಯ ಸಂಸ್ಥೆಗಳ ಕ್ರಿಯಾ ಯೋಜನೆಯಡಿ ಪಂಚಾಯತ್ರಾಜ್ ಸಂಸ್ಥೆಗಳಿಗೆ ಸರಕಾರದಿಂದ ಜಿಲ್ಲಾ ವಲಯ ಯೋಜನೆಯಡಿ 434.21 ಕೋಟಿ ರೂ. ಅನುದಾನ ನಿಗದಿಯಾಗಿದೆ.
ಇದರಲ್ಲಿ ಜಿಲ್ಲಾ ಪಂಚಾಯತ್ಗೆ 148.60 ಕೋಟಿ ರೂ., ತಾಲೂಕು ಪಂಚಾಯತ್ಗೆ 267.84 ಕೋಟಿ ರೂ., ಗ್ರಾಮ ಪಂಚಾಯತ್ಗಳಿಗೆ 17.76 ಕೋಟಿ ರೂ. ಅನುದಾನಕ್ಕೆ ಸಂಬಂಧಿಸಿ ಕ್ರಿಯಾಯೋಜನೆ ತಯಾರಿಸಿ ಕಳೆದ ಜೂನ್ನಲ್ಲಿ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯ ಲಾಗಿದೆ ಎಂದು ಉಡುಪಿ ಜಿಪಂನ ಮುಖ್ಯ ಯೋಜಾಧಿಕಾರಿ ಶ್ರೀನಿವಾಸ ರಾವ್ ವಿವರಿಸಿದರು.
ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ಜಿಲ್ಲಾ ಯೋಜನಾ ಸಮಿತಿ ಸಭೆ ಬುಧವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಲ್ಲಿರುವ ಜಿಪಂನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆಯಿತು.
ತಾಪಂ ಅನುದಾನಕ್ಕೆ ಸಂಬಂದಿಸಿದಂತೆ ಕ್ರಿಯಾ ಯೋಜನೆಯಡಿ ಉಡುಪಿಗೆ 111.83 ಕೋಟಿ ರೂ., ಕುಂದಾಪುರಕ್ಕೆ 98.56 ಕೋಟಿ ರೂ. ಹಾಗೂ ಕಾರ್ಕಳಕ್ಕೆ 57.45 ಕೋಟಿ ರೂ.ಸೇರಿದಂತೆ ಒಟ್ಟು 267.84 ಕೋಟಿ ರೂ. ಯೋಜನೆಗೂ ಅನುಮೋದನೆ ಪಡೆಯಲಾಯಿತು. ಗ್ರಾಪಂ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಉಡುಪಿ ಶಾಸನಬದ್ಧ ಅನುದಾನ 648 ಲಕ್ಷ, 14ನೇ ಹಣಕಾಸಿನಡಿ 685.55 ಲಕ್ಷ, ಕುಂದಾಪುರಕ್ಕೆ 685 ಲಕ್ಷ ಮತ್ತು 659.76 ಲಕ್ಷ, ಕಾರ್ಕಳಕ್ಕೆ 356 ಲಕ್ಷ ರೂ. ಹಾಗೂ 695.86 ಲಕ್ಷ ರೂ.ಗಳಿಗೆ ಸಹ ಅನುಮೋದನೆ ಪಡೆಯಲಾುತು.
ಗ್ರಾಪಂ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಉಡುಪಿ ಶಾಸನಬದ್ಧ ಅನುದಾನ 648 ಲಕ್ಷ, 14ನೇ ಹಣಕಾಸಿನಡಿ 685.55 ಲಕ್ಷ, ಕುಂದಾಪುರಕ್ಕೆ 685 ಲಕ್ಷ ಮತ್ತು 659.76 ಲಕ್ಷ, ಕಾರ್ಕಳಕ್ಕೆ 356 ಲಕ್ಷ ರೂ. ಹಾಗೂ 695.86 ಲಕ್ಷ ರೂ.ಗಳಿಗೆ ಸಹ ಅನುಮೋದನೆ ಪಡೆಯಲಾಯಿತು. ಇಂದು ನಡೆದ ಸಭೆ ಜಿಲ್ಲಾ ಯೋಜನಾ ಸಮಿತಿಯ ಎರಡನೇ ಸಭೆ ಯಾಗಿದ್ದು, ಕ್ರಿಯಾ ಯೋಜನೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾದ ಎಸ್. ಜನಾರ್ದನ್ ಮರವಂತೆ ಹಾಗೂ ಡಾ.ಎನ್.ಎಸ್.ಶೆಟ್ಟಿ ಮಾಹಿತಿ ನೀಡಿದರು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್ ವ್ಯವಸ್ಥೆಯ ಧ್ಯೇಯ,ತ್ರಿಸ್ತರ ಆಡಳಿತ ವ್ಯವಸ್ಥೆಯ ಪಾತ್ರದ ಬಗ್ಗೆ ವಿವರಿಸಿದ ಅವರು, ಯೋಜನಾ ಸಮಿತಿ ಹೆಚ್ಚು ಕ್ರಿಯಾಶೀಲವಾಗಿರಬೇಕು. ಇಲ್ಲಿ ರೂಪಿಸಿದ ಯೋಜನೆಗಳು ರಾಜ್ಯ ಬಜೆಟ್ನಲ್ಲಿ ಪ್ರತಿಬಿಂಬಿತವಾಗಬೇಕು ಎಂದರು.
ಗ್ರಾಮ ಮಟ್ಟದಲ್ಲಿ ಯೋಜನೆಗಳು ಯಶಸ್ವಿಯಾಗಬೇಕಾದರೆ ಮೂರು ಮುಖ್ಯ ಘಟಕಗಳಿಗೆ ಹೆಚ್ಚಿನ ಅಧಿಕಾರ ಹಾಗೂ ಅನುಷ್ಠಾನ ಶಕ್ತಿ ದೊರೆಯ ಬೇಕು. ಕಳೆದ ಸಾಲಿಗಿಂತ ಈ ಬಾರಿ 46.47 ಕೋಟಿ ರೂ. ಅನುದಾನವನ್ನು ಹೆಚ್ಚುವರಿಯಾಗಿ ಕೋರಲಾಗಿದ್ದು, ನಮ್ಮ ಜಿಲ್ಲೆಯ ‘ನಮ್ಮ ಗ್ರಾಮ ನಮ್ಮ ಯೋಜನೆ’ ಉತ್ತಮ ಮಾದರಿಯಾಗಿದೆ ಎಂದರು.
ಗ್ರಾಮ ಮಟ್ಟದಲ್ಲಿ ಯೋಜನೆಗಳು ಯಶಸ್ವಿಯಾಗಬೇಕಾದರೆ ಮೂರು ಮುಖ್ಯ ಘಟಕಗಳಿಗೆ ಹೆಚ್ಚಿನ ಅಧಿಕಾರ ಹಾಗೂ ಅನುಷ್ಠಾನ ಶಕ್ತಿ ದೊರೆಯ ಬೇಕು. ಕಳೆದ ಸಾಲಿಗಿಂತ ಈ ಬಾರಿ 46.47 ಕೋಟಿ ರೂ. ಅನುದಾನವನ್ನು ಹೆಚ್ಚುವರಿಯಾಗಿ ಕೋರಲಾಗಿದ್ದು, ನಮ್ಮ ಜಿಲ್ಲೆಯ ‘ನಮ್ಮ ಗ್ರಾಮ ನಮ್ಮ ಯೋಜನೆ’ ಉತ್ತಮ ಮಾದರಿಯಾಗಿದೆ ಎಂದರು. ಯೋಜನ ಸಮಿತಿ ಸಭೆಯಲ್ಲಿ, ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಘನ ಮತ್ತು ದ್ರವ ತ್ಯಾಜ್ಯ ವಿಲೇ ಬಗ್ಗೆ ವಿವರ ಚರ್ಚೆ ನಡೆಯಿತಲ್ಲದೆ, ತ್ಯಾಜ್ಯ ಸಂಪನ್ಮೂಲ ವಾಗಿ ಪರಿವರ್ತನೆಯಾದ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಈ ಯೋಜನೆ ಅನುಷ್ಠಾನ ಕೋಟೇಶ್ವರ, ಸಾಲಿಗ್ರಾಮ, ಗಂಗೊಳ್ಳಿಯಂತಹ ಗ್ರಾಪಂಗಳಲ್ಲಿ ಅನುಷ್ಠಾನಗೊಳ್ಳಲು ಮುಖ್ಯ ಯೋಜನಾಧಿಕಾರಿಗಳು ಖುದ್ದು ಭೇಟಿ ನೀಡಿ ಪಿಡಿಒಗಳನ್ನು ಬೆಂಬಲಿಸುವ ಕೆಲಸವಾಗಬೇಕ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಜಿಲ್ಲೆಯ ಪ್ರಮುಖ ನದಿಗಳಲ್ಲೊಂದಾದ ಸೀತಾನದಿಯನ್ನು ಕೋಳಿತ್ಯಾಜ್ಯ ದಿಂದ ಕಲುಷಿತಗೊಳಿಸುತ್ತಿರುವ ಬಗ್ಗೆ ತಾಪಂ ಸದಸ್ಯರು ಗಮನಸೆಳೆದಾಗ ವಾರಂಬಳ್ಳಿ ಮಾದರಿಯನ್ನು ಅಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದು ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ವಿವರಿಸಿದರು.
ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಜಿಪಂನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಯೋಜನಾ ಸಮಿತಿ ಸದಸ್ಯ ಕಾರ್ಯದರ್ಶಿಗಳಾದ ಶಿವಾನಂದ ಕಾಪಶಿ, ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್ ಉಪಸ್ಥಿತ ರಿದ್ದರು. ಜಿಪಂ ಸದಸ್ಯರು, ತಾಪಂ ಸದಸ್ಯರು, ನಗರ ಸ್ಥಳೀಯ ಸಂಸ್ಥೆಯ ಸದಸ್ಯರು, ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡರು.







