Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಾಹಿತಿಗಳ ಬಗ್ಗೆ ಆರೋಪ ಸಲ್ಲದು

ಸಾಹಿತಿಗಳ ಬಗ್ಗೆ ಆರೋಪ ಸಲ್ಲದು

-ಕೆ. ಎಸ್. ನಾಗರಾಜ್, ಬೆಂಗಳೂರು-ಕೆ. ಎಸ್. ನಾಗರಾಜ್, ಬೆಂಗಳೂರು1 Feb 2018 6:32 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share

ಮಾನ್ಯರೇ,

ಇತ್ತೀಚೆಗೆ ರಾಜ್ಯದಲ್ಲಿ ಆಯ್ಕೆಯಾದ ಕೇಂದ್ರದ ಸಚಿವರೊಬ್ಬರು ಕಲಹ ಉಂಟು ಮಾಡುವುದೇ ತಮ್ಮ ಇಲಾಖೆಯ ‘ಕೌಶಲ’ವೆಂದು ಭಾವಿಸಿದಂತಿದೆ. ಈ ಹಿನ್ನೆಲೆಯಲ್ಲಿ ಪ್ರತೀ ದಿನ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಗಳನ್ನು ಕೊಡುತ್ತಾ, ಸುದ್ದಿಯಲ್ಲಿದ್ದಾರೆ. ಸಾಹಿತಿಗಳು, ಪ್ರಗತಿಪರರು ಕೇವಲ ಪ್ರಶಸ್ತಿ ಮತ್ತು ನಿವೇಶನದ ಆಸೆಗಾಗಿ ತಮ್ಮ ಸಾಹಿತ್ಯ ಕೃಷಿ ಮಾಡುತ್ತಾರೆ, ಪ್ರಗತಿಪರರು ಸರಕಾರದ ಪರವಾಗಿದ್ದಾರೆ ಎನ್ನುವ ಹೇಳಿಕೆಯನ್ನು ನೀಡಿರುತ್ತಾರೆ. ಕಡುಬಡತನದ ನಡುವೆ ತಮ್ಮ ಬದುಕನ್ನು ಸ್ವಾಭಿಮಾನದಿಂದ ನಡೆಸಿದ ಡಿವಿಜಿಯವರ ವಿಚಾರ ಬಹುಶಃ ಇವರಿಗೆ ಗೊತ್ತಿಲ್ಲ.

ಮೈಸೂರು ಮಹಾರಾಜರಿಂದ ಹಿಡಿದು ಅಂದಿನ ದಿವಾನರಾಗಿದ್ದ ಎಲ್ಲರಿಂದಲೂ ಬೇಕಾದ ನೆರವನ್ನು ಪಡೆದುಕೊಳ್ಳಲು ಸಾಧ್ಯವಿದ್ದರೂ ಯಾರ ಕೃಪೆಗೂ ಒಳಗಾಗದೆ ಬದುಕಿದಂತಹ ಮತ್ತು ತಮಗೆ ಬಂದ ಹಲವಾರು ಸ್ವರೂಪದ ಪ್ರಶಸ್ತಿಯ ಮೊತ್ತವನ್ನು ಗೋಕುಲೆ ಸಾರ್ವಜನಿಕ ಸಂಸ್ಥೆಗೆೆ ನೀಡಿದ ವಿಚಾರ ಅವರು ಅರಿತರೆ ಒಳ್ಳೆಯದು. ಹಾಗೆಯೇ ಬೇಂದ್ರೆಯವರಾಗಲೀ, ಕಾರಂತರಾಗಲೀ ಸರಕಾರದ ಹಂಗಿನಲ್ಲಿ ಬದುಕಿದವರಲ್ಲ. ಮಾಸ್ತಿಯವರು ದಾನ ಮಾಡುವಷ್ಟು ಸಂಪಾದಿಸಿದ್ದರು. ಇನ್ನು ಕುವೆಂಪುರವರು ಸರಕಾರಗಳನ್ನು ಲೆಕ್ಕಿಸದೆ ತಮ್ಮ ಖಚಿತವಾದ ಅಭಿಪ್ರಾಯಗಳನ್ನು ನಿಷ್ಠುರವಾಗಿಯೇ ಹೇಳುತ್ತಿದ್ದರು. ಇಂತಹ ಸಾಹಿತಿಗಳ ಪಟ್ಟಿಯಲ್ಲಿ ನೂರಾರು ಜನರು ಇದ್ದಾರೆ. ಇತ್ತೀಚಿನ ದಿನಗಳಲ್ಲಿ ದೇವನೂರ ಮಹಾದೇವರವರು ಬಯಸಿದ್ದರೆ ವಿಧಾನ ಪರಿಷತ್ತಿನ ಸದಸ್ಯರಾಗಬಹುದಿತ್ತು. ಹಲವು ನಿವೇಶನಗಳನ್ನು ಪಡೆದುಕೊಳ್ಳಬಹುದಿತ್ತು. ಇವುಗಳನ್ನು ಅವರು ಕಣ್ಣೆತ್ತಿಯೂ ನೋಡಿಲ್ಲ. ಇದೇ ರೀತಿಯಲ್ಲಿ ಸಮಾಜಮುಖಿ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಅನೇಕ ಪ್ರಗತಿಪರರು ಬಡತನದಲ್ಲಿ ಬದುಕುತ್ತಿದ್ದಾರೆ. ಆದರೆ ತಮ್ಮ ಬದ್ಧತೆಯನ್ನು ಬಿಟ್ಟುಕೊಟ್ಟವರಲ್ಲ.

ಸರಕಾರದ ಸವಲತ್ತಿಗೆ, ಪ್ರಶಸ್ತಿಗೆ ತಮ್ಮ ನಿಲುವುಗಳನ್ನು ಮತ್ತು ವಿಚಾರಧಾರೆಯನ್ನು ಬದಿಗಿಟ್ಟು ರಾಜಿಯಾದವರು ಕೆಲವು ಮಂದಿ ಇರಬಹುದು. ಹಾಗೆಂದು ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ಅಳೆಯುವುದು ಸರಿಯಲ್ಲ. ರಾಜಕೀಯ ಪಕ್ಷಗಳನ್ನು ಬೆಂಬಲಿಸುವುದು ಎಂದರೆ ಸಿದ್ಧಾಂತಗಳನ್ನು ಬೆಂಬಲಿಸುವುದು ಎಂದರ್ಥ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಹೋರಾಟ ನಡೆಸಿದವರಲ್ಲಿ ಅನೇಕ ಮಂದಿ ಇಂದು ಬಿಜೆಪಿಯ ವಿರುದ್ಧವಿದ್ದಾರೆ. ವಿಶೇಷವಾಗಿ 1990ರ ನಂತರ ಈ ದೇಶದಲ್ಲಿ ಕೋಮು ಸಾಮರಸ್ಯ ಕದಡಲು ನಡೆದಂತಹ ಹಲವಾರು ಪ್ರಕರಣಗಳಿಂದ ಇಂತಹ ನಿಲುವುಗಳನ್ನು ಕೈಗೊಂಡಿರುತ್ತಾರೆ. ಜಾತ್ಯತೀತತೆಯ ನಿಲುವಿಗಾಗಿ ಕಾಂಗ್ರೆಸನ್ನು ಬೆಂಬಲಿಸುವ ಅನೇಕ ಸಾಹಿತಿಗಳು ಮತ್ತು ಪ್ರಗತಿಪರರು ಹಿಂದಿನ ಕೇಂದ್ರ ಸರಕಾರದ ವಿದೇಶಿ ಬಂಡವಾಳದ ನೀತಿ, ಬಹುರಾಷ್ಟ್ರೀಯ ಕಂಪೆನಿಗಳಿಗೆ ಮನ್ನಣೆ, ಅಣು ಒಪ್ಪಂದ, ಗ್ಯಾಟ್ ಡಂಕೆಲ್ ಪ್ರಸ್ತಾವನೆ, ಭ್ರಷ್ಟಾಚಾರ ಇಂತಹ ವಿಚಾರಗಳು ಬಂದಾಗ ಬಹಿರಂಗವಾಗಿಯೇ ವಿರೋಧಿಸಿದ್ದಾರೆ.

ಸಾಹಿತಿಗಳು ಮತ್ತು ಪ್ರಗತಿಪರರಿಗೆ ಪಕ್ಷಗಳು ಮುಖ್ಯವಲ್ಲ. ಜಾತ್ಯತೀತತೆ ಮತ್ತು ಕೋಮುವಾದದ ನೆಲೆಯಲ್ಲಿ ತಮ್ಮ ನಿಲುವುಗಳನ್ನು ಅವರು ವ್ಯಕ್ತಪಡಿಸುತ್ತಾರೆ. ಸಾಹಿತಿಗಳಾದ ಮಾತ್ರಕ್ಕೆ ರಾಜಕೀಯ ಅಭಿಪ್ರಾಯ ವ್ಯಕ್ತಪಡಿಸಬಾರದು ಎಂದಿದೆಯೇ?

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
-ಕೆ. ಎಸ್. ನಾಗರಾಜ್, ಬೆಂಗಳೂರು
-ಕೆ. ಎಸ್. ನಾಗರಾಜ್, ಬೆಂಗಳೂರು
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X