Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಭಾಷೆ ಬೇಡ ಎನ್ನುವುದು,ತಾಯಿ ಬೇಡ...

ಭಾಷೆ ಬೇಡ ಎನ್ನುವುದು,ತಾಯಿ ಬೇಡ ಎನ್ನುವಂತಿದೆ: ಪ್ರೊ.ಜಿ.ಕೆ.ಗೋವಿಂದರಾವ್

ವಾರ್ತಾಭಾರತಿವಾರ್ತಾಭಾರತಿ2 Feb 2018 9:25 PM IST
share
ಭಾಷೆ ಬೇಡ ಎನ್ನುವುದು,ತಾಯಿ ಬೇಡ ಎನ್ನುವಂತಿದೆ: ಪ್ರೊ.ಜಿ.ಕೆ.ಗೋವಿಂದರಾವ್

ತುಮಕೂರು,ಫೆ.02: ಕನ್ನಡ ಭಾಷೆಯ ವ್ಯಾಸಂಗವನ್ನು ಬೇಡ ಎನ್ನುವುದು ತಾಯಿಯನ್ನು ಬೇಡವೆಂದು ಹೇಳಿದಂತೆ ಎಂದು ಚಿಂತಕ ಪ್ರೊ.ಜಿ.ಕೆ.ಗೋವಿಂದರಾವ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಗಾಜಿನಮನೆಯಲ್ಲಿ ನಡೆದ 13ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ತಾಯಿಯ ಹಾಲು, ತಾಯಿ ಭಾಷೆ ಎರಡು ಒಂದೇ ಆಗಿದ್ದು, ತಾಯಿ ಭಾಷೆಯನ್ನು ಬೇಡ ಎನ್ನುವವರು ತಾಯಿಯ ಹಾಲನ್ನು ಬೇಡ ಎನ್ನುತ್ತಾರೆ. ಇಂಗ್ಲೀಷ್ ಭಾಷೆಯ ವ್ಯಾಮೋಹಕ್ಕೆ ಸಿಲುಕಿರುವ ಪೋಷಕರು ತಾಯಿ ಭಾಷೆಯನ್ನು ಬೇಡ ಎನ್ನುತ್ತಿರುವುದು ಎಷ್ಟು ಸರಿ ಎಂದು ಆತಂಕ ವ್ಯಕ್ತಪಡಿಸಿದರು.

ತಾಯಿಭಾಷೆಯ ಮಹತ್ವ ಸುಪ್ರೀಂಕೋರ್ಟ್ ನ್ಯಾಯಾಧೀಶರಿಗೆ ಅರಿವಿಲ್ಲ. ಹಾಗಾಗಿಯೇ ಭಾಷೆಯ ಆಯ್ಕೆಯ ಜವಾಬ್ದಾರಿಯನ್ನು ಪೋಷಕರಿಗೆ ನೀಡಿದ್ದಾರೆ. ಭಾಷೆಯ ಆಯ್ಕೆ ಮಗುವಿನದ್ದು, ಮಗುವಿಗೆ ಆಪ್ತವಾದ ಭಾಷೆಯಲ್ಲಿ ಕಲಿಯುವುದು ಸುಲಭವಾಗುತ್ತದೆ ಎನ್ನುವುದನ್ನು ಪೋಷಕರು ಅರಿತುಕೊಳ್ಳಬೇಕಿದೆ. ಮಾನಸಿಕ ಅನಾಗರೀಕತೆ ಕಡೆಗೆ ಇಂದಿನ ನಾಗರೀಕತೆ ಸಾಗುತ್ತಿದ್ದು, ಏಕ ಆಯಾಮದ ಬದುಕಿನಿಂದಾಗಿ ಜೀವನ ಸಂಕೀರ್ಣಗೊಳ್ಳುತ್ತಿದೆ ಎಂದರು.

ಪ್ರಕೃತಿಯೊಂದಿನ ಸಂಬಂಧವನ್ನು ಇಂದಿನ ಯುವಕರು ಕಳೆದುಕೊಂಡಿದ್ದಾರೆ. ಹಣ, ಆಡಂಬರದ ಜೀವನದ ಕಡೆಗೆ ಹೆಚ್ಚು ಗಮನ ಹರಿಸುತ್ತಿರುವುದರಿಂದಲೇ ಕಲೆ,ಸಾಹಿತ್ಯ ನಂಟು ಯುವ ಸಮೂಹದಲ್ಲಿಲ್ಲ. ಮಕ್ಕಳಿಗೆ ಕಲೆ, ಸಾಹಿತ್ಯದಲ್ಲಿ ಆಸಕ್ತಿಯನ್ನು ಮೂಡಿಸುವಂತೆ ಮಾಡಬೇಕಾದ ಜವಾಬ್ದಾರಿ ಪೋಷಕರ ಮೇಲಿದೆ. ಪೋಷಕರು ತಮ್ಮ ದುಡಿಮೆಯಲ್ಲಿ ಶೇಕಡಾ 5ರಷ್ಟನ್ನು ಸಾಹಿತ್ಯಕ್ಕಾಗಿ ಖರ್ಚು ಮಾಡುವಂತಾದರೆ ಕನ್ನಡ ಭಾಷೆ, ಸಾಹಿತ್ಯ ಹೆಮ್ಮರವಾಗುತ್ತದೆ ಎಂದು ತಿಳಿಸಿದರು.

ಹುಟ್ಟಿದ ನಂತರ ಎಲ್ಲರು ಸಾಯಲೇಬೇಕು. ಆದರೆ ಹುಟ್ಟಿದ ನಂತರ ಬದುಕಿದ್ದು ಬುದ್ಧ, ಬಸವ, ಕ್ರಿಸ್ತರು ಮಾತ್ರ. ಪ್ರಶ್ನೆಗಳಿಗೆ ಉತ್ತರ ನೀಡುವವರು ಸಾಹಿತಿಯೇ ಅಲ್ಲ. ಸಾಹಿತಿಗಳಿಗೆ ಉತ್ತರವೇ ಇರುವುದಿಲ್ಲ. ಅವರು ಅನುಭವಿಸಿದ ಸಂಗತಿಗಳನ್ನು ಪ್ರಕೃತಿಯೊಂದಿಗಿನ ಅನುಭವವನ್ನು ಬಿಡಿಸುವವರು ಅಷ್ಟೇ. ಬುದ್ಧ, ಬಸವ, ಕ್ರಿಸ್ತರ ಧರ್ಮವೂ ಮಠ ಧರ್ಮವಾಗಿದೆ. ಮಠ ಧರ್ಮವಾದ ಯಾವುದೇ ಧರ್ಮವು ಬದುಕುವುದಿಲ್ಲ ಎಂದರು.

ಇಂದು ದೇಶಕ್ಕಿಂತ ಜಾತಿ ಉದ್ಧಾರ ಮಾಡುವುದು ಎಲ್ಲರಿಗೂ ಮುಖ್ಯವಾಗಿದೆ. ಬಸವಣ್ಣನವರು ಹೇಳಿದ ಇವ ನಮ್ಮವ ಇವ ನಮ್ಮವ ಮಾತು ಇಂದು ಜಾತಿ, ಒಳಜಾತಿ ಸೂಚಕವಾಗಿ ಬಳಕೆಯಾಗುತ್ತಿದೆ. ಬುದ್ಧ, ಬಸವಣ್ಣನವರ ಧರ್ಮದಂತೆ ಇಂದು ಪ್ರಜಾಪ್ರಭುತ್ವ ಧರ್ಮವೂ ಮಠದ ಧರ್ಮವಾಗಿ ಅವನತಿ ಹೊಂದುತ್ತಿದೆ. ಪ್ರಜಾಪ್ರಭುತ್ವದಲ್ಲಿ ರಾಜಕೀಯ ಜೀವನದ ಒಂದು ಭಾಗವಾಗಿದ್ದು, ರಾಜಕೀಯ ಬೇಡ ಎನ್ನುವುದು ಅಪರಾಧವಾಗುತ್ತದೆ. ಮತದಾನ ನಮ್ಮ ಅಸ್ತ್ರ. ಅದನ್ನು ಸರಿಯಾದ ರೀತಿ ಪ್ರಯೋಗಿಸಿದಾಗ ಮಾತ್ರ ಸತ್ಯ ಮತ್ತು ಸೌಂದರ್ಯದ ದರ್ಶನವಾಗುತ್ತದೆ. ಅಂದು ಮಹಾತ್ಮಗಾಂಧೀಜಿ ಸತ್ಯವೇ ದೇವರು ಎಂದು ಹೇಳಿದರು. ಆದರೆ ಇಂದು ಗಾಂಧೀಜಿ ಲೆಕ್ಕಕ್ಕೆ ಇಲ್ಲದಂತೆ ಆಗಿದ್ದಾರೆ. ಯಾಕಂದರೆ ಅವರಿಗೆ ಜಾತಿ, ಜಾತಿ ಇಲ್ಲದವನು ಗೌಣವಾಗುವಂತಹ ಪರಿಸ್ಥಿತಿಗೆ ನಾವು ತಲುಪಿದ್ದೇವೆ. 6 ವರ್ಷದ ನಂತರ ಮಗು ಜಾತಿಯಿಂದ ಗುರುತಿಸಿಕೊಳ್ಳುತ್ತದೆ. ಮಕ್ಕಳಿಗೆ ಪೋಷಕರು ಸಣ್ಣತನಗಳನ್ನು ಕಲಿಸುವುದನ್ನು ಬಿಟ್ಟು ಸ್ವತಂತ್ರ ಚಿಂತನೆಗಳಿಂದ ಬೆಳೆಸುವಂತೆ ಸಲಹೆ ನೀಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಸಮ್ಮೇಳನಾಧ್ಯಕ್ಷರು ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ತುಮಕೂರು ಜಿಲ್ಲೆ ಸಾಂಸ್ಕೃತಿಕ, ಸಾಹಿತ್ಯದ ತವರೂರು. ಶರಣ ಸಿದ್ದರಾಮಣ್ಣ ಅವರು 12ನೇ ಶತನಮಾನದಲ್ಲಿ ಶ್ರೀ ಶೈಲದಿಂದ ಹೊರಟು ಕರ್ನಾಟಕದಲ್ಲಿಯೇ 77 ಕಡೆ ಲಿಂಗದೀಕ್ಷೆ ನೀಡುವ ಮೂಲಕ ಧರ್ಮ ಸಾಹಿತ್ಯವನ್ನು ಪಸರಿಸಿದರು ಎಂದರು. ತುಮಕೂರು ಜಿಲ್ಲೆಯ ಎಲ್ಲಾ ಶ್ರೇಷ್ಠ ಸಾಹಿತಿಗಳಿಗೂ ಹಾಗೂ ಯುವ ಬರಹಗಾರರಿಗೂ ಧನ್ಯವಾದವನ್ನು ಸಲ್ಲಿಸಿದರು.

ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷ ಮುರುಳೀಧರ್ ಹಾಲಪ್ಪ, ಜಿಲ್ಲಾಧಿಕಾರಿ ಕೆ.ಪಿ.ಮೋಹನ್‍ರಾಜ್ ಮಾತನಾಡಿದರು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X