Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಕಲಾವಿದ ಕೈಗನ್ನಡಿ ಇದ್ದಂತೆ: ಕವಿ ಜಯಂತ್...

ಕಲಾವಿದ ಕೈಗನ್ನಡಿ ಇದ್ದಂತೆ: ಕವಿ ಜಯಂತ್ ಕಾಯ್ಕಿಣಿ

ನಟ ಪ್ರಕಾಶ್ ರೈ ಅವರ ‘ಇರುವುದೆಲ್ಲವ ಬಿಟ್ಟು’ ಕೃತಿ ಬಿಡುಗಡೆ

ವಾರ್ತಾಭಾರತಿವಾರ್ತಾಭಾರತಿ4 Feb 2018 6:28 PM IST
share
ಕಲಾವಿದ ಕೈಗನ್ನಡಿ ಇದ್ದಂತೆ: ಕವಿ ಜಯಂತ್ ಕಾಯ್ಕಿಣಿ

ಬೆಂಗಳೂರು, ಫೆ. 4: ಕಲಾವಿದರಿಗೆ ಕನ್ನಡಿಯೆಂಬುದು ಕಿಟಕಿಯಿದ್ದಂತೆ. ಸಾವಿರಾರು ಪಾತ್ರಗಳನ್ನು ಆ ಕನ್ನಡಿಯ ಮೂಲಕ ನೋಡುತ್ತಾರೆ. ಆತ್ಮವಿಶ್ವಾಸದ ಕೈಗನ್ನಡಿ ಇದ್ದಾಗ ಆತ ತೆರೆದುಕೊಳ್ಳಲು ಸಾಧ್ಯ ಎಂದು ಕವಿ ಜಯಂತ್ ಕಾಯ್ಕಿಣಿ ಅಭಿಪ್ರಾಯ ಪಟ್ಟಿದ್ದಾರೆ.

ರವಿವಾರ ನಗರದ ಬಸವನಗುಡಿಯ ವಾಡಿಯಾ ಸಭಾಂಗಣದಲ್ಲಿ ಸಾವಣ್ಣ ಪ್ರಕಾಶನ ವತಿಯಿಂದ ಆಯೋಜಿಸಿದ್ದ ಬಹುಭಾಷಾ ನಟ ಪ್ರಕಾಶ್ ರೈ ಅವರ ಅಂಕಣ ಬರಹಗಳ ಸಂಗ್ರಹ ‘ಇರುವುದೆಲ್ಲವ ಬಿಟ್ಟು’ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಕಲಾವಿದರು ಕನ್ನಡಿಯಿಲ್ಲದೆ ಬದುಕಲು ಅಸಾಧ್ಯ ಎಂದು ಹೇಳಿದರು.

ಮನುಷ್ಯನ ಜೀವನದುದ್ದಕ್ಕೂ ಅನೇಕ ಕಥೆಗಳಿರುತ್ತವೆ. ಬದುಕಿನಲ್ಲಿ ಎಲ್ಲವೂ ಸರಿ ಇರುವುದಿಲ್ಲ. ಆ ಎಲ್ಲವನ್ನೂ ತಿದ್ದಿ ಸರಿದಾರಿಗೆ ತೆಗೆದುಕೊಂಡು ಹೋಗುವುದೇ ಬದುಕು. ಎಲ್ಲವೂ ಸರಾಗ, ಸುಲಲಿತವಾಗಿ ಇದ್ದಿದ್ದರೆ ಬದುಕಿಗೆ ಅರ್ಥವೇ ಇರುತ್ತಿರಲಿಲ್ಲ. ಜೀವನದಲ್ಲಿ ಯಾವ ಪಾಠವನ್ನೂ ಕಲಿಯಲು ಆಗುತ್ತಿರಲಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಅಸಾಹಿತ್ಯಿಕವಾದ ಜೀವನವನ್ನು ಸಾಹಿತ್ಯದೆಡೆಗೆ ತೆಗೆುಕೊಂಡು ಹೋಗಬೇಕಿದೆ ಎಂದರು.

ಸಾಹಿತ್ಯ ಎಂಬುದು ಬದುಕಿನಿಂದ ಬರುತ್ತದೆ. ಆಗ ಬದುಕು ಸಾಕಾರಗೊಳ್ಳುತ್ತದೆ. ಪ್ರತಿಯೊಬ್ಬರೂ ಉತ್ಕಟವಾಗಿ ಬದುಕಬೇಕು. ಆಗ ಮಾತ್ರ ಬದುಕಿನಲ್ಲಿ ಸಂಭ್ರಮ ಸಿಗುತ್ತದೆ. ಆದರೆ, ಇಂದಿನ ಯುಗ ಸಂಪೂರ್ಣ ಡಿಜಿಟಲ್ ಮಯವಾಗಿದ್ದು, ಸರ್ವಸ್ವವೇ ಅದಾಗಿದೆ. ಅದರಿಂದ ಹೊರಬಂದು, ಸಾಹಿತ್ಯ ಲೋಕಕ್ಕೂ ತೆರೆದುಕೊಳ್ಳಬೇಕು ಎಂದು ಯುವಕರಿಗೆ ಕಿವಿಮಾತು ಹೇಳಿದರು.

ಒಳ್ಳೆಯ ಬರಹಗಾರ, ಉತ್ತಮ ಜ್ಞಾನ ಹೊಂದಿರುವ ಪ್ರಕಾಶ್ ರೈ ಪುಸ್ತಕ ಬರೆಯಲು ತಡ ಮಾಡಿದ್ದು ಯಾಕೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ ಎಂದು ಅವರು ಹೇಳಿದರು.

ಬಹುಭಾಷಾ ನಟ ಪ್ರಕಾಶ್ ರೈ ಮಾತನಾಡಿ, ಬದುಕಿನ ಪ್ರಯಾಣ ನನ್ನ ಜೀವನವನ್ನು ತೀರ್ಮಾನಿಸಿದೆ. ನಾನು ಬದುಕನ್ನು ಬಹಳ ಎತ್ತರದಿಂದ ನೋಡಿದ್ದೇನೆ. ಜಾತ್ರೆಯಲ್ಲಿ ಅಪ್ಪನ ಹೆಗಲ ಮೇಲೆ ಕೂರುವ ಮಕ್ಕಳಂತೆ ನಾನು ನನ್ನ ಗುರು-ಹಿರಿಯರು, ಅಮ್ಮ ಹಾಗೂ ನಿಮ್ಮೆಲ್ಲರ ಹೆಗಲ ಮೇಲೆ ನಿಂತಿದ್ದೇನೆ. ಹಾಗಾಗಿ ನಾನು ಬಹು ಎತ್ತರವಾಗಿ ಕಾಣುತ್ತಿದ್ದೇನೆ. ಪ್ರೀತಿಯಿಂದ ಯಾವುದೇ ಗುಮಾನಿ ಇಲ್ಲದ ಮನಸ್ಸುಗಳು ನನ್ನ ಬಳಿ ಬರುತ್ತಿವೆ. ಅದಕ್ಕೆ ನಾನು ಋಣಿ ಎಂದು ಹೇಳಿದರು.

ಸಾಮಾನ್ಯ ಕುಟುಂಬದಿಂದ ಬಂದ ನನಗೆ ಮೊದಲು ಸಾಹಿತ್ಯದ ಗಂಧ ಗಾಳಿ ತಿಳಿದಿರಲಿಲ್ಲ. ಲೇಖಕ ಎಚ್.ಎಸ್. ವೆಂಕಟೇಶ ಮೂರ್ತಿ, ವಿಜಯಮ್ಮ ಮತ್ತಿತರರು ನನಗೆ ಈ ಸಾಹಿತ್ಯ ಲೋಕದಲ್ಲಿ ಈಜುವುದನ್ನು ಕಲಿಸಿದರು. ಅಂತಹ ಮನಸ್ಸುಗಳು ಸಿಕ್ಕಿದ್ದು ನನ್ನ ಅದೃಷ್ಟ. ಅದರಿಂದ ನಾನು ಬರೆಯುವುದನ್ನು ಕಲಿತೆ. ಮುಂದೆಯೂ ಬರೆಯುತ್ತೇನೆ ಹಾಗೂ ಬರವಣಿಗೆ ನಿಲ್ಲಿಸದಿರಲು ಪ್ರಯತ್ನಿಸುತ್ತೇನೆ ಎಂದು ನುಡಿದರು.

ಸಾಹಿತಿ ಎಚ್.ಎಸ್.ವೆಂಕಟೇಶಮೂರ್ತಿ ಮಾತನಾಡಿ, ಕಲಾವಿದ ಹಾಗೂ ಸಾಹಿತಿಯಾದವರು ಲೋಕದ ಕಣ್ಣಿನಲ್ಲಿ ಸೋತರೂ, ಇದು ನನ್ನ ಗೆಲುವಿನ ಗುರುತು ಎಂದು ಹೇಳಿಕೊಳ್ಳುವ ಮನಸ್ಥಿತಿ ಹೊಂದಿರಬೇಕು. ಅಲ್ಲದೆ, ಪ್ರಾಸವನ್ನು ಕಟ್ಟಿಕೊಡಬೇಕಾದಂತಹ ಗುಣ ಸಾಹಿತಿಗಳಿಗೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಅಕ್ಷರ ಪ್ರಪಂಚಕ್ಕೆ ಬಹುಭಾಷಾ ನಟ ಪ್ರಕಾಶ್ ರೈ ಅಂತಹವರು ಹೆಚ್ಚಿನ ಸಂಖ್ಯೆಯಲ್ಲಿ ಪಾದಾರ್ಪಣೆ ಮಾಡಬೇಕಾದ ಅಗತ್ಯವಿದೆ. ಕಾವೇರಿ ಸಮಸ್ಯೆಗೆ ನಾವೇರಿ ಕಾರಣ ಎಂಬ ಪ್ರಾಸಪದವನ್ನು ಪ್ರಕಾಶ್ ರೈ ನೀಡಿ ಪದರಚನೆಯಲ್ಲಿ ಕೌಶಲ್ಯತೆ ಹೊಂದಿದ್ದಾರೆ ಎಂಬುದಕ್ಕೆ ನಿದರ್ಶನವಾಗಿದ್ದಾರೆ ಎಂದ ಅವರು, ಅವರಲ್ಲಿನ ಕಾವ್ಯ ಹಾಗೂ ನಾಟಕ ಪ್ರೀತಿ ಈ ಪುಸ್ತಕ ಒಳಗೊಂಡಿದ್ದು, ಅತ್ಯಂತ ಅತ್ಯುತ್ತಮ ಕೃತಿಯಾಗಿದೆ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದೆ ಡಾ.ವಿಜಯಾ, ನಟ ಸುದೀಪ್, ನಟಿ ಶೃತಿ ಹರಿಹರನ್ ಸೇರಿಂತೆ ಇನ್ನಿತರರು ಉಪಸ್ಥಿತರಿದ್ದರು.

‘ಕಲೆ, ಸಾಹಿತ್ಯದಂತಹ ಅಧ್ಯಾತ್ಮ ಬೇರಾವುದೂ ಇಲ್ಲ. ಎಂದಿಗೂ ಅಪರಿಪೂರ್ಣತೆಯಲ್ಲೇ ನಿಜವಾದ ಒದ್ದಾಟವಿರುತ್ತದೆ. ಆಧ್ಯಾತ್ಮವೆಂಬುದನ್ನು ಕೇವಲ ಧಾರ್ಮಿಕ ಹಿನ್ನೆಲೆಯಲ್ಲಿ ನೋಡಬಾರದು. ನಮ್ಮ ಜೀವನದ ಸಣ್ಣಪುಟ್ಟ ಕ್ಷಣಗಳಲ್ಲೂ ಆಧ್ಯಾತ್ಮವಿರುತ್ತದೆ. ಬದುಕಿನಿಂದ ನಿಜವಾದ ಸಾಹಿತ್ಯ ಹುಟ್ಟಬೇಕೇ ಹೊರತು ಸಾಹಿತ್ಯದ ಸ್ಫೂರ್ತಿಯಿಂದ ಇನ್ನೊಂದು ಉತ್ತಮ ಸಾಹಿತ್ಯ ಹುಟ್ಟಲಾರದು’
-ಜಯಂತ್ ಕಾಯ್ಕಿಣಿ, ಕವಿ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X