ಶೀಘ್ರದಲ್ಲೇ ‘ತೇಜ್ ಮಂದಿರ್’ ಆಗಲಿದೆ ತಾಜ್ ಮಹಲ್: ಬಿಜೆಪಿ ಸಂಸದ ಕಟಿಯಾರ್ ವಿವಾದಾತ್ಮಕ ಹೇಳಿಕೆ
ಹೊಸದಿಲ್ಲಿ, ಫೆ.5: ತಾಜ್ ಮಹಲ್ ಶೀಘ್ರವೇ ತೇಜ್ ಮಂದಿರ್ ಆಗಲಿದೆ ಎಂದು ಬಿಜೆಪಿ ಸಂಸದ ವಿನಯ್ ಸಂಸದ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಆಗ್ರಾದಲ್ಲಿ ‘ತಾಜ್ ಮಹೋತ್ಸವ’ದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “ಅದನ್ನು ತಾಜ್ ಮಹೋತ್ಸವ್ ಎನ್ನಬಹುದು ಅಥವಾ ತೇಜ್ ಮಹೋತ್ಸವ್ ಎನ್ನಬಹುದು. ಎರಡೂ ಕೂಡ ಒಂದೇ ಆಗಿದೆ. ತಾಜ್ ಮತ್ತು ತೇಜ್ ಮಧ್ಯೆ ಹೆಚ್ಚಿನ ವ್ಯತ್ಯಾಸಗಳಿಲ್ಲ. ನಮ್ಮ ತೇಜ್ ಮಂದಿರವನ್ನು ಔರಂಗಝೇಬ್ ಸಮಾಧಿಯನ್ನಾಗಿ ಪರಿವರ್ತಿಸಿದ್ದಾರೆ. ಶೀಘ್ರವೇ ತಾಜ್ ಮಹಲನ್ನು ತೇಜ್ ಮಂದಿರವಾಗಿ ಪರಿವರ್ತಿಸಲಾಗುವುದು” ಎಂದು ಅವರು ಹೇಳಿದರು.
“ಇಲ್ಲಿ ಹಬ್ಬ ಆಚರಿಸುತ್ತಿರುವುದು ಸಂತೋಷದ ವಿಷಯವೇ. ಆದರೆ ಔರಂಗಝೇಬ್ ಕಾಲದಲ್ಲಿ ತಾಜ್ ಮಹಲ್ ಇದ್ದಿರಲಿಲ್ಲ. ಇದು ನಮ್ಮ ದೇವಾಲಯವಾಗಿದೆ” ಎಂದು ಕಟಿಯಾರ್ ಹೇಳಿದರು.
Next Story